2005 ರಲ್ಲಿ ಶ್ರೀನಿವಾಸ ವೈದ್ಯ ಅವರ ಕಥೆಗಳ ಓದಿನೊಂದಿಗೆ ‘ಜನಮನದಾಟ’ ಪ್ರಾರಂಭವಾಯಿತು. ಇದುವರೆಗೂ ‘ಉಚಲ್ಯಾ’ ‘ರಹಸ್ಯ ವಿಶ್ವ’ ‘ಬಾಬಾ ಸಾಹೇಬ್ ಅಂಬೇಡ್ಕರ್’ ‘ಕುರುಕ್ಷೇತ್ರ’ ಮೊದಲಾದ ಇಪ್ಪತ್ತಕ್ಕೂ ಹೆಚ್ಚು ನಾಟಕಗಳನ್ನು ಎಂಟುನೂರಕ್ಕೂ ಅಧಿಕ ಪ್ರದರ್ಶನಗಳನ್ನು ರಾಜ್ಯ ಹೊರ ರಾಜ್ಯಗಳಲ್ಲಿ ನೀಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಸ್ತುತ ಬಾನು ಮುಷ್ತಾಕರ ‘ಎದೆಯ ಹಣತೆ’ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ‘ಮಾಯಾಮೃಗ’ ನಾಟಕಗಳ ಪ್ರದರ್ಶನಕ್ಕಾಗಿ ರಾಜ್ಯದ ವಿವಿಧೆಡೆ ಸಂಚಾರ ಕೈಗೊಂಡಿದೆ.