ಗಾಂಧೀಜಿ ಕರೆಗೆ ಓಗೊಟ್ಟು, ಶಾಲೆ ಬಿಟ್ಟು, ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡ ಕಾರಂತರು, ನಂತರ ಕಲಿತಿದ್ದು ಒಂದೆರಡು ವಿಷಯಗಳನ್ನು ಮಾತ್ರವೇ ಅಲ್ಲ. ಪರಿಸರ, ವಿಜ್ಞಾನ, ಸಾಹಿತ್ಯ, ಯಕ್ಷಗಾನ... ಹೀಗೆ ಅವರ ಅರಿವಿನ ವಿಸ್ತಾರ ಬಹುದೊಡ್ಡದು. ಕಾರಂತರು ಕಲಿತಿದ್ದೆಲ್ಲವೂ ಶಾಲೆ, ಕಾಲೇಜಿನಲ್ಲಿ ಅಲ್ಲ ಎಂಬುದು ಗಮನಾರ್ಹ.