<p><strong>ಕೆಸರಿನ ಕರೆಯ ಮೇಲೆ ನೀರು ಚಿಮ್ಮಿಸುವ ಕ್ಷಣದಲ್ಲಿ ಯುವಕರ ಕನಸುಗಳೂ ಚಿಮ್ಮುತ್ತಿವೆ. ಕೆಲವೇ ಸೆಕೆಂಡುಗಳ ಓಟ ಅವರ ಬದುಕಿನ ದಿಕ್ಕೇ ಬದಲಿಸುತ್ತಿದೆ. ಕಂಬಳ ಈಗ ಕೇವಲ ಕ್ರೀಡೆಯಲ್ಲ; ಅದು ಕರಾವಳಿಯ ಹೊಸತಲೆಮಾರಿನ ವೃತ್ತಿ, ಗೌರವ ಮತ್ತು ಆರ್ಥಿಕ ಬಲದ ಸಂಕೇತವಾಗಿದೆ.</strong></p><p><strong>****</strong></p> <p>ಕರೆ ಮೇಲೆ ನೀರು ಚಿಮ್ಮುತ್ತದೆ. ಕಚ್ಚೆ ಕಟ್ಟಿದ ಕಟ್ಟುಮಸ್ತಾದ ಯುವಕ ಬೆತ್ತ ಹಿಡಿದು ಕೋಣಗಳ ಜೊತೆಗೆ ಗಂತಿಗೆ ಇಳಿಯುತ್ತಾನೆ. ಕ್ಷಣಕಾಲದಲ್ಲಿ ಕೆಸರಿನ ಕರೆಯ ಮೇಲೆ ಮಿಂಚಿನಂತೆ ಓಟ ಮುಗಿಯುತ್ತದೆ.</p>.<p>ಪುತ್ತೂರಿನಲ್ಲಿ ಜನವರಿ 24ರಂದು ನಡೆದ ಕಂಬಳದಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ ದಾಖಲೆ ಬರೆದ ಪೃಥ್ವಿರಾಜ್ ಪೂಜಾರಿ ಈ ಹೊಸ ತಲೆಮಾರಿನ ಪ್ರತಿನಿಧಿ. ಸಿವಿಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಪಡೆದ ಈ ಯುವಕ, ಉಡುಪಿ ಜಿಲ್ಲೆಯ ಪಡುಬಿದ್ರಿಯ ಪಡುಶಾಂತೂರಿನವರು. ಈಗ ಅವರ ಬದುಕಿನ ಕೇಂದ್ರಬಿಂದುವೇ ಕಂಬಳ. ‘ಉದ್ಯೋಗಕ್ಕೆ ಸೇರುವ ಪ್ರಯತ್ನ ಮಾಡುತ್ತಿದ್ದೇನೆ. ಉದ್ಯೋಗ ಸಿಕ್ಕರೂ ಕಂಬಳ ಬಿಡುವುದಿಲ್ಲ’ ಎಂದು ಅವರು ಖಚಿತ ಧ್ವನಿಯಲ್ಲಿ ಹೇಳುತ್ತಾರೆ.</p>.<p>ಕಳೆದ ಡಿಸೆಂಬರ್ನಲ್ಲಿ ಮಂಗಳೂರಿನಲ್ಲಿ ನಡೆದ ಕಂಬಳದಲ್ಲಿ ಕುಂದಾಪುರ ತಾಲ್ಲೂಕಿನ ಮಾಸ್ತಿಕಟ್ಟೆ ಕುಂದಬಾರಂದಾಡಿಯ ಸ್ವರೂಪ್ ಮಾಡಿದ ದಾಖಲೆಯನ್ನು ಮುರಿದವರು ಪೃಥ್ವಿರಾಜ್. ಸ್ವರೂಪ್ ಕೂಡ ಕಂಬಳಕ್ಕಾಗಿ ಉದ್ಯೋಗವನ್ನೇ ತೊರೆದವರು. ಐಟಿಐ ಮುಗಿಸಿ ಬೆಂಗಳೂರಿನ ನೇತ್ರ ಸಂರಕ್ಷಣೆ ಉಪಕರಣ ತಯಾರಿಕಾ ಕಂಪನಿಯಲ್ಲಿ ಎಂಟು ತಿಂಗಳು ಕೆಲಸ ಮಾಡಿದರೂ, ಕಂಬಳದ ಸೆಳೆತ ಅವರನ್ನು ಮತ್ತೆ ಊರಿಗೆ ಕರೆತಂದಿತು. ‘ಉದ್ಯೋಗದಲ್ಲಿ ಒಂದು ವರ್ಷ ಗಳಿಸುವ ಹಣವನ್ನು ಕಂಬಳದ ಒಂದು ಋತುವಿನ ಮೂರೇ ಓಟಗಳಲ್ಲಿ ಗಳಿಸಬಹುದು. ಹಾಗಿರುವಾಗ ನಗರದ ಹಂಗ್ಯಾಕೆ?’ ಎಂಬ ಅವರ ಪ್ರಶ್ನೆಯಲ್ಲೇ ಕಂಬಳದ ಆಕರ್ಷಣೆಯ ತೀವ್ರತೆ ಗೊತ್ತಾಗುತ್ತದೆ.</p>.<p>ಬೆಂಗಳೂರಿನಲ್ಲಿ ನಡೆದ ಕಂಬಳದಲ್ಲಿ ನೇಗಿಲು ವಿಭಾಗದ 100 ಮೀಟರ್ ಕರೆಯನ್ನು 9.09 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ ಕಕ್ಕೆಪದವು ಕೃತಿಕ್ ಗೌಡ ಯೆನೆಪೋಯ ವಿಶ್ವವಿದ್ಯಾಲಯದಲ್ಲಿ ಬಿಬಿಎ ಪದವಿ ಪಡೆದು ಉದ್ಯಮದಲ್ಲಿದ್ದಾರೆ. ಆದರೆ ಕಂಬಳ ಋತುವು ಬಂದರೆ, ಕೋಣಗಳ ಮಾಲೀಕರೊಂದಿಗೆ ಲಕ್ಷಾಂತರ ಮೊತ್ತದ ಒಡಂಬಡಿಕೆ ಮಾಡಿಕೊಂಡು ಕರೆಗೆ ಇಳಿಯುತ್ತಾರೆ. ‘ಕಂಬಳ ಈಗ ನನ್ನ ವೃತ್ತಿಯೂ ಆಗಿದೆ. ಇದರಲ್ಲಿ ಸಿಗುವ ಸುಖವೇ ಬೇರೆ. ಒಳ್ಳೆಯ ಹೆಸರೂ ಬಂದಿದೆ. ಇನ್ನೇನು ಬೇಕು?’ ಎಂದು ಅವರು ನಗೆ ಬೀರುತ್ತಾರೆ.</p>.<p>ಪಿಯುಸಿ ಮುಗಿಸಿ ಉದ್ಯೋಗದಲ್ಲಿರುವ ಮೂಡುಬಿದಿರೆಯ ಮರಿಯಾಡಿಯ ಮಹಮ್ಮದ್ ಅನ್ವರ್, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬಿಪಿಎಡ್ ಮಾಡುತ್ತಿರುವ ಬಂಟ್ವಾಳ ರಾಯಿಯ ಗರ್ಷಣ್ ಗೌಡ, ವಾಮದಪದವು ಸರ್ಕಾರಿ ಕಾಲೇಜಿನಲ್ಲಿ ಎಂಕಾಂ ಓದುತ್ತಿರುವ ಬೆಳ್ತಂಗಡಿ ತಾಲ್ಲೂಕಿನ ಕಾರ್ತೇಶ್– ಹೀಗೆ ಹಲವರು ವಿದ್ಯಾಭ್ಯಾಸದ ಜೊತೆಗೆ ಕಂಬಳದ ಕರೆಯಲ್ಲೂ ತಮ್ಮ ಹೆಸರನ್ನು ಗಟ್ಟಿಗೊಳಿಸುತ್ತಿದ್ದಾರೆ. ಕರಾವಳಿಯ ಅಸ್ಮಿತೆಯಾಗಿ ಬೆಳೆದ ಈ ಜನಪದ ಕ್ರೀಡೆ ಅವರಿಗೆ ಖ್ಯಾತಿ ಮಾತ್ರವಲ್ಲ, ಆತ್ಮಗೌರವ ಮತ್ತು ಆರ್ಥಿಕ ಬಲವನ್ನೂ ನೀಡುತ್ತಿದೆ.</p>.<p>ಹಿಂದಿನ ಋತುವಿನಲ್ಲಿ ತೋರಿದ ಸಾಮರ್ಥ್ಯವೇ ಮುಂದಿನ ಋತುವಿನ ಮೌಲ್ಯವನ್ನು ನಿರ್ಧರಿಸುತ್ತದೆ. ಕೋಣಗಳ ಮಾಲೀಕರು ತಮ್ಮ ಕೋಣಗಳಿಗೆ ವೇಗ ಮತ್ತು ಪದಕ ತಂದುಕೊಡಬಲ್ಲ ಓಟಗಾರರನ್ನು ಸೆಳೆಯಲು ಪೈಪೋಟಿ ನಡೆಸುತ್ತಾರೆ. ಒಂದು ಋತುವಿನ 20 ಕಂಬಳಗಳಿಗೆ ಕನಿಷ್ಠ ₹5 ಲಕ್ಷದ ಒಡಂಬಡಿಕೆ ಸಾಮಾನ್ಯ. ಪ್ರತಿ ಕಂಬಳಕ್ಕೆ ಕನಿಷ್ಠ ₹5 ಸಾವಿರ ಸಂಭಾವನೆ. ವಾರಾಂತ್ಯ<br>ಗಳೆಲ್ಲವೂ ಓಟದಿಂದ ತುಂಬಿರುತ್ತದೆ. ದೈಹಿಕ ಸಾಮರ್ಥ್ಯ ಇದ್ದರೆ 20 ವಾರಗಳ ಅವಧಿಯು ಒಬ್ಬ ಯುವಕನ ಆರ್ಥಿಕ ಭವಿಷ್ಯ ಕಟ್ಟುವ ಕಾಲವಾಗುತ್ತದೆ.</p>.<p>ಕಚ್ಚೆ, ಮುಂಡಾಸು, ಬೆತ್ತ... ಇವು ಕೇವಲ ಅಲಂಕಾರವಲ್ಲ; ಅವು ಕಂಬಳದ ಶಿಸ್ತಿನ ಸಂಕೇತಗಳು. ಕಟ್ಟುಮಸ್ತಾದ ದೇಹ, ಕಸರತ್ತು ಮಾಡಿದ ಮಾಂಸಖಂಡಗಳು, ಕರೆಯ ಮೇಲೆ ನಿಯಂತ್ರಿತ ವೇಗ– ಇವುಗಳ ಹಿಂದೆ ಕಟ್ಟುನಿಟ್ಟಾದ ಅಭ್ಯಾಸವಿದೆ. ಲಕ್ಷಾಂತರ ರೂಪಾಯಿ ವ್ಯಯಿಸಿ ಕೋಣಗಳನ್ನು ಸಾಕುವ ಮಾಲೀಕರಿಗೆ ಚಿನ್ನದ ಪದಕ ಪ್ರತಿಷ್ಠೆಯ ವಿಚಾರ. ಹೀಗಾಗಿ ಉತ್ತಮ ಓಟಗಾರರ ಮೇಲೆ ಹೂಡಿಕೆ ಮಾಡಲು ಅವರು ಹಿಂದೇಟು ಹಾಕುವುದಿಲ್ಲ. ಕೋಣ ಹಿಡಿಯುವವರು, ಕೆಲಸ ಮಾಡುವವರು, ತರಬೇತುದಾರರು ಸೇರಿ ಜೋಡಿ ಕೋಣದ ಹಿಂದೆ ಅನೇಕ ಕೈಗಳು ಕೆಲಸ ಮಾಡುತ್ತವೆ. ಆದರೆ ಆ ತಂಡದಲ್ಲಿ ಅತಿ ಹೆಚ್ಚಿನ ಸಂಭಾವನೆ ಪಡೆಯುವವರು ಓಟಗಾರರೇ.</p>.<p><strong>ಅಕಾಡೆಮಿಯ ಪಾಠ...</strong></p>.<p>ಈಗಿನ ಓಟಗಾರರಲ್ಲಿ ಹಲವರು ಅಕಾಡೆಮಿಗಳಲ್ಲಿ ತರಬೇತಿ ಪಡೆದವರು. ಕೇವಲ ಪರಂಪರೆಯಿಂದಲೇ ಅಲ್ಲ, ತಂತ್ರಜ್ಞಾನ ಮತ್ತು ತರಬೇತಿ ಕ್ರಮಗಳಿಂದಲೂ ಕಂಬಳದ ವೇಗ ಹೆಚ್ಚುತ್ತಿದೆ. ಆದರೂ ಕೋಣಗಳ ಚಾಕರಿ ಮಾಡುತ್ತಲೇ ಓಟ ಕಲಿತ ಬಂಗಾಡಿ ಕಿಲ್ಲೂರು ಅಶ್ರಫ್ ಅವರಂಥ ‘ಏಕಲವ್ಯ’ರಿಗೂ ಈ ಕ್ಷೇತ್ರದಲ್ಲಿ ಸ್ಥಾನವಿದೆ. ಗಂತಿನಿಂದ ಮಂಜೊಟ್ಟಿವರೆಗೆ ಇರುವ 125 ಮೀಟರ್ ಕರೆಯ ಓಟ ಕೆಲವೊಮ್ಮೆ ಬದುಕಿನ ತಿರುವಾಗುತ್ತದೆ.</p>.<p>ಶ್ರೀನಿವಾಸ ಗೌಡ ಅವರ ಸಾಧನೆಯ ನಂತರ ಕಂಬಳ ಓಟಗಾರರ ಹೆಸರು ಬೆಳಗಲು ಆರಂಭವಾಯಿತು. ಕಾಲೇಜು ದಿನಗಳಲ್ಲಿ ಅಕಾಡೆಮಿಯಲ್ಲಿ ತರಬೇತಿ ಪಡೆದ ಕಾರ್ತೇಶ್, ಮೂರು ವರ್ಷಗಳಲ್ಲಿ 40ಕ್ಕೂ ಹೆಚ್ಚು ಕಂಬಳಗಳಲ್ಲಿ ಪಾಲ್ಗೊಂಡಿದ್ದಾರೆ. ‘ಆರು ತಿಂಗಳ ಒಪ್ಪಂದ ಇರುತ್ತದೆ. ಕಂಬಳಕ್ಕೆ ಎರಡು ದಿನ ಬಾಕಿ ಇರುವಾಗ ಅಂತಿಮ ಸಿದ್ಧತೆ ಗಟ್ಟಿಯಾಗುತ್ತದೆ. ಉಳಿದ ಸಮಯದಲ್ಲಿ ಓದಿಗೆ ತೊಂದರೆ ಇಲ್ಲ. ಪದಕ ಗೆದ್ದರೆ ಕಾಲೇಜು ಕ್ಯಾಂಪಸ್ ಕೂಡ ಸಂಭ್ರಮಿಸು<br>ತ್ತದೆ’ ಎನ್ನುತ್ತಾರೆ ಅವರು. ಕಂಬಳದ ಕೋಣಗಳನ್ನು ಓಡಿಸುವ ಅವಕಾಶ ಸಿಕ್ಕರೆ ಅದು ಗೌರವದ ಸಂಗತಿ ಎಂಬುದು ಅವರ ಮಾತಿನ ಅರ್ಥ.</p>.<p>‘ಅಡಿಕೆ ಸುಲಿಯುವುದು ಸೇರಿದಂತೆ ಹಲವು ಕೆಲಸ ಮಾಡುತ್ತಿದ್ದೆ. ನಂತರ ಅಕಾಡೆಮಿಯಲ್ಲಿ ತರಬೇತಿ ಪಡೆದು ಕಂಬಳಕ್ಕೆ ಬಂದೆ. ಎಸ್ಎಸ್ಎಲ್ಸಿ ನಂತರದ ಕಲಿಕೆಗೆ ಕಂಬಳವೇ ನೆರವಾಯಿತು’ ಎಂದು <br>ಹೇಳುತ್ತಾರೆ ಗರ್ಷಣ್ ಗೌಡ. ನಾಲ್ಕು ವರ್ಷಗಳಲ್ಲಿ 60ಕ್ಕೂ ಹೆಚ್ಚು ಕಂಬಳಗಳಲ್ಲಿ ಕೋಣ ಓಡಿಸಿರುವ ಅವರು, ನೇಗಿಲು ಕಿರಿಯರ ವಿಭಾಗದಲ್ಲಿ ಭಾಗವಹಿಸುತ್ತಿದ್ದರು. ಈಗ ನೇಗಿಲು ಹಿರಿಯ ವಿಭಾಗದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.</p>.<p><strong>ಬದುಕಿನ ಮಾರ್ಗವಾದ ಕಂಬಳ</strong></p>.<p>‘ಇಂದು ಕಂಬಳ ಹಲವರ ಬದುಕಿನ ಮಾರ್ಗವಾಗಿದೆ’ ಎನ್ನುತ್ತಾರೆ ರಾಜ್ಯ ಕಂಬಳ ಸಂಸ್ಥೆಯ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ. ‘ಉತ್ತಮ ಸಾಮರ್ಥ್ಯ ತೋರಿದ ಓಟಗಾರರಿಗೆ ₹10 ಲಕ್ಷದವರೆಗೆ ಪ್ಯಾಕೇಜ್ ಸಿಗುತ್ತದೆ. ಪ್ರತಿ ಕಂಬಳದಲ್ಲಿ ವಿವಿಧ ಕಾರ್ಯಗಳಿಗೆ ಸುಮಾರು 400 ಮಂದಿಗೆ ಉದ್ಯೋಗ ಸಿಗುತ್ತದೆ. ಕೋಣಗಳನ್ನು ಸಾಕಲು ವರ್ಷಪೂರ್ತಿ ಕೆಲಸದವರನ್ನು ಇಡಲಾಗುತ್ತದೆ. ಒಟ್ಟಾರೆ 500ಕ್ಕೂ ಹೆಚ್ಚು ಕುಟುಂಬಗಳಿಗೆ ಕಂಬಳವೇ ಆದಾಯದ ಮೂಲವಾಗಿದೆ’ ಎನ್ನುತ್ತಾರೆ.</p>.<p>ಕನೆಹಲಗೆ ವಿಭಾಗದಲ್ಲಿ ಹೆಸರು ಮಾಡಿರುವ ಕುಂದಾಪುರದ ಉದಯ್ ಗೌಡ, ಅಡ್ಡಹಲಗೆಯಲ್ಲಿ ಮಿಂಚುವ ಭಟ್ಕಳ ಹರೀಶ್, ಎರಡೂ ವಿಭಾಗಗಳಲ್ಲಿ ಓಡುವ ರಾಪುಹಿತ್ಲು ರಾಘು, ಕನೆಹಲಗೆ ಸ್ಪೆಷಲಿಸ್ಟ್ ಭಾಸ್ಕರ ದೇವಾಡಿಗ, ರಾಘವೇಂದ್ರ ಪೂಜಾರಿ ಕಾಮನಮನೆ, ವಿಶ್ವನಾಥ ದೇವಾಡಿಗ, ಟಾಪ್ ಓಟಗಾರ ಮಂಜುನಾಥ ಗೌಡ ಇವರೆಲ್ಲರ ಬದುಕು ಕಂಬಳದ ಕರೆಯ ಜೊತೆ ಬೆಸೆದುಕೊಂಡಿದೆ.</p>.<p>ಜನಪದ ಕ್ರೀಡೆಗಳಿಗೆ ವಿದ್ಯಾವಂತ ಯುವಕರು ಒಲಿದಷ್ಟೂ ಆ ಕ್ರೀಡೆಗೆ ಗೌರವ ಹೆಚ್ಚುತ್ತದೆ. ಪೈಪೋಟಿ, ಪರಂಪರೆ, ಆರ್ಥಿಕ ಬಲ– ಈ ಮೂರು ಅಂಶಗಳ ಸಂಗಮವಾಗಿರುವ ಕಂಬಳ, ಕರಾವಳಿಯ ಮಣ್ಣಿನಲ್ಲಿ ಓಡುವ ಈ ಯುವಕರಿಂದ ಮುಂದಿನ ತಲೆಮಾರಿಗೆ ಸಾಗುತ್ತಿದೆ.</p>.<p><strong>ಮಹಿಳೆಯರ ಪ್ರವೇಶದ ಪ್ರಶ್ನೆ</strong></p>.<p>ಕೋಣಗಳನ್ನು ಸಾಕುವ ಕಾರ್ಯದಲ್ಲಿ, ಮಾಲೀಕರಾಗಿ, ಪ್ರೇಕ್ಷಕರಾಗಿ ಮಹಿಳೆಯರು ಭಾಗಿಯಾಗುತ್ತಿದ್ದರೂ, ಕರೆಗೆ ಇಳಿದು ಕೋಣ ಓಡಿಸುವ ಕಾರ್ಯಕ್ಕೆ ಇನ್ನೂ ಮುಂದಾಗಿಲ್ಲ. ಬೆಳ್ಳಂಪಳ್ಳಿ ಪರಮೇಶ್ವರ ಭಟ್ ಅವರ ಪುತ್ರಿ ಚೈತ್ರಾ ಕರೆಯ ಗಂತ್ ಮತ್ತು ಮಂಜೊಟ್ಟಿ ಪ್ರವೇಶಿಸಿ ಗಮನ ಸೆಳೆದಿದ್ದರು. ಈಗ ಕುಂದಾಪುರ ಜನತಾ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ಅವರು ಕಂಬಳದಲ್ಲಿ ಮಹಿಳೆಯರ ಹೆಜ್ಜೆಗೆ ಮುನ್ನುಡಿಯಂತಿದ್ದಾರೆ.</p>.<p>ಮಹಿಳೆಯರು ಕರೆಗೆ ಇಳಿಯದಿರುವುದಕ್ಕೆ ಹಲವು ಕಾರಣಗಳನ್ನು ಉಲ್ಲೇಖಿಸಲಾಗುತ್ತದೆ. ದೈಹಿಕ ಮತ್ತು ಜೈವಿಕ ಅಂಶಗಳ ಬಗ್ಗೆ ಆತಂಕವಿದೆ ಎನ್ನಲಾಗುತ್ತದೆ. ಆದರೆ ಕಾಲ ಬದಲಾಗುತ್ತಿರುವಂತೆ ಈ ಪ್ರಶ್ನೆಯೂ ಚರ್ಚೆಗೆ ಬರುತ್ತಿದೆ. ಭವಿಷ್ಯದಲ್ಲಿ ಕಂಬಳದ ಕರೆಯಲ್ಲೂ ಮಹಿಳೆಯರ ಹೆಜ್ಜೆ ಗಟ್ಟಿ ಆಗುವ ದಿನ ದೂರವಿಲ್ಲ ಎನ್ನುವ ನಿರೀಕ್ಷೆಯೂ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಸರಿನ ಕರೆಯ ಮೇಲೆ ನೀರು ಚಿಮ್ಮಿಸುವ ಕ್ಷಣದಲ್ಲಿ ಯುವಕರ ಕನಸುಗಳೂ ಚಿಮ್ಮುತ್ತಿವೆ. ಕೆಲವೇ ಸೆಕೆಂಡುಗಳ ಓಟ ಅವರ ಬದುಕಿನ ದಿಕ್ಕೇ ಬದಲಿಸುತ್ತಿದೆ. ಕಂಬಳ ಈಗ ಕೇವಲ ಕ್ರೀಡೆಯಲ್ಲ; ಅದು ಕರಾವಳಿಯ ಹೊಸತಲೆಮಾರಿನ ವೃತ್ತಿ, ಗೌರವ ಮತ್ತು ಆರ್ಥಿಕ ಬಲದ ಸಂಕೇತವಾಗಿದೆ.</strong></p><p><strong>****</strong></p> <p>ಕರೆ ಮೇಲೆ ನೀರು ಚಿಮ್ಮುತ್ತದೆ. ಕಚ್ಚೆ ಕಟ್ಟಿದ ಕಟ್ಟುಮಸ್ತಾದ ಯುವಕ ಬೆತ್ತ ಹಿಡಿದು ಕೋಣಗಳ ಜೊತೆಗೆ ಗಂತಿಗೆ ಇಳಿಯುತ್ತಾನೆ. ಕ್ಷಣಕಾಲದಲ್ಲಿ ಕೆಸರಿನ ಕರೆಯ ಮೇಲೆ ಮಿಂಚಿನಂತೆ ಓಟ ಮುಗಿಯುತ್ತದೆ.</p>.<p>ಪುತ್ತೂರಿನಲ್ಲಿ ಜನವರಿ 24ರಂದು ನಡೆದ ಕಂಬಳದಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ ದಾಖಲೆ ಬರೆದ ಪೃಥ್ವಿರಾಜ್ ಪೂಜಾರಿ ಈ ಹೊಸ ತಲೆಮಾರಿನ ಪ್ರತಿನಿಧಿ. ಸಿವಿಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಪಡೆದ ಈ ಯುವಕ, ಉಡುಪಿ ಜಿಲ್ಲೆಯ ಪಡುಬಿದ್ರಿಯ ಪಡುಶಾಂತೂರಿನವರು. ಈಗ ಅವರ ಬದುಕಿನ ಕೇಂದ್ರಬಿಂದುವೇ ಕಂಬಳ. ‘ಉದ್ಯೋಗಕ್ಕೆ ಸೇರುವ ಪ್ರಯತ್ನ ಮಾಡುತ್ತಿದ್ದೇನೆ. ಉದ್ಯೋಗ ಸಿಕ್ಕರೂ ಕಂಬಳ ಬಿಡುವುದಿಲ್ಲ’ ಎಂದು ಅವರು ಖಚಿತ ಧ್ವನಿಯಲ್ಲಿ ಹೇಳುತ್ತಾರೆ.</p>.<p>ಕಳೆದ ಡಿಸೆಂಬರ್ನಲ್ಲಿ ಮಂಗಳೂರಿನಲ್ಲಿ ನಡೆದ ಕಂಬಳದಲ್ಲಿ ಕುಂದಾಪುರ ತಾಲ್ಲೂಕಿನ ಮಾಸ್ತಿಕಟ್ಟೆ ಕುಂದಬಾರಂದಾಡಿಯ ಸ್ವರೂಪ್ ಮಾಡಿದ ದಾಖಲೆಯನ್ನು ಮುರಿದವರು ಪೃಥ್ವಿರಾಜ್. ಸ್ವರೂಪ್ ಕೂಡ ಕಂಬಳಕ್ಕಾಗಿ ಉದ್ಯೋಗವನ್ನೇ ತೊರೆದವರು. ಐಟಿಐ ಮುಗಿಸಿ ಬೆಂಗಳೂರಿನ ನೇತ್ರ ಸಂರಕ್ಷಣೆ ಉಪಕರಣ ತಯಾರಿಕಾ ಕಂಪನಿಯಲ್ಲಿ ಎಂಟು ತಿಂಗಳು ಕೆಲಸ ಮಾಡಿದರೂ, ಕಂಬಳದ ಸೆಳೆತ ಅವರನ್ನು ಮತ್ತೆ ಊರಿಗೆ ಕರೆತಂದಿತು. ‘ಉದ್ಯೋಗದಲ್ಲಿ ಒಂದು ವರ್ಷ ಗಳಿಸುವ ಹಣವನ್ನು ಕಂಬಳದ ಒಂದು ಋತುವಿನ ಮೂರೇ ಓಟಗಳಲ್ಲಿ ಗಳಿಸಬಹುದು. ಹಾಗಿರುವಾಗ ನಗರದ ಹಂಗ್ಯಾಕೆ?’ ಎಂಬ ಅವರ ಪ್ರಶ್ನೆಯಲ್ಲೇ ಕಂಬಳದ ಆಕರ್ಷಣೆಯ ತೀವ್ರತೆ ಗೊತ್ತಾಗುತ್ತದೆ.</p>.<p>ಬೆಂಗಳೂರಿನಲ್ಲಿ ನಡೆದ ಕಂಬಳದಲ್ಲಿ ನೇಗಿಲು ವಿಭಾಗದ 100 ಮೀಟರ್ ಕರೆಯನ್ನು 9.09 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ ಕಕ್ಕೆಪದವು ಕೃತಿಕ್ ಗೌಡ ಯೆನೆಪೋಯ ವಿಶ್ವವಿದ್ಯಾಲಯದಲ್ಲಿ ಬಿಬಿಎ ಪದವಿ ಪಡೆದು ಉದ್ಯಮದಲ್ಲಿದ್ದಾರೆ. ಆದರೆ ಕಂಬಳ ಋತುವು ಬಂದರೆ, ಕೋಣಗಳ ಮಾಲೀಕರೊಂದಿಗೆ ಲಕ್ಷಾಂತರ ಮೊತ್ತದ ಒಡಂಬಡಿಕೆ ಮಾಡಿಕೊಂಡು ಕರೆಗೆ ಇಳಿಯುತ್ತಾರೆ. ‘ಕಂಬಳ ಈಗ ನನ್ನ ವೃತ್ತಿಯೂ ಆಗಿದೆ. ಇದರಲ್ಲಿ ಸಿಗುವ ಸುಖವೇ ಬೇರೆ. ಒಳ್ಳೆಯ ಹೆಸರೂ ಬಂದಿದೆ. ಇನ್ನೇನು ಬೇಕು?’ ಎಂದು ಅವರು ನಗೆ ಬೀರುತ್ತಾರೆ.</p>.<p>ಪಿಯುಸಿ ಮುಗಿಸಿ ಉದ್ಯೋಗದಲ್ಲಿರುವ ಮೂಡುಬಿದಿರೆಯ ಮರಿಯಾಡಿಯ ಮಹಮ್ಮದ್ ಅನ್ವರ್, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬಿಪಿಎಡ್ ಮಾಡುತ್ತಿರುವ ಬಂಟ್ವಾಳ ರಾಯಿಯ ಗರ್ಷಣ್ ಗೌಡ, ವಾಮದಪದವು ಸರ್ಕಾರಿ ಕಾಲೇಜಿನಲ್ಲಿ ಎಂಕಾಂ ಓದುತ್ತಿರುವ ಬೆಳ್ತಂಗಡಿ ತಾಲ್ಲೂಕಿನ ಕಾರ್ತೇಶ್– ಹೀಗೆ ಹಲವರು ವಿದ್ಯಾಭ್ಯಾಸದ ಜೊತೆಗೆ ಕಂಬಳದ ಕರೆಯಲ್ಲೂ ತಮ್ಮ ಹೆಸರನ್ನು ಗಟ್ಟಿಗೊಳಿಸುತ್ತಿದ್ದಾರೆ. ಕರಾವಳಿಯ ಅಸ್ಮಿತೆಯಾಗಿ ಬೆಳೆದ ಈ ಜನಪದ ಕ್ರೀಡೆ ಅವರಿಗೆ ಖ್ಯಾತಿ ಮಾತ್ರವಲ್ಲ, ಆತ್ಮಗೌರವ ಮತ್ತು ಆರ್ಥಿಕ ಬಲವನ್ನೂ ನೀಡುತ್ತಿದೆ.</p>.<p>ಹಿಂದಿನ ಋತುವಿನಲ್ಲಿ ತೋರಿದ ಸಾಮರ್ಥ್ಯವೇ ಮುಂದಿನ ಋತುವಿನ ಮೌಲ್ಯವನ್ನು ನಿರ್ಧರಿಸುತ್ತದೆ. ಕೋಣಗಳ ಮಾಲೀಕರು ತಮ್ಮ ಕೋಣಗಳಿಗೆ ವೇಗ ಮತ್ತು ಪದಕ ತಂದುಕೊಡಬಲ್ಲ ಓಟಗಾರರನ್ನು ಸೆಳೆಯಲು ಪೈಪೋಟಿ ನಡೆಸುತ್ತಾರೆ. ಒಂದು ಋತುವಿನ 20 ಕಂಬಳಗಳಿಗೆ ಕನಿಷ್ಠ ₹5 ಲಕ್ಷದ ಒಡಂಬಡಿಕೆ ಸಾಮಾನ್ಯ. ಪ್ರತಿ ಕಂಬಳಕ್ಕೆ ಕನಿಷ್ಠ ₹5 ಸಾವಿರ ಸಂಭಾವನೆ. ವಾರಾಂತ್ಯ<br>ಗಳೆಲ್ಲವೂ ಓಟದಿಂದ ತುಂಬಿರುತ್ತದೆ. ದೈಹಿಕ ಸಾಮರ್ಥ್ಯ ಇದ್ದರೆ 20 ವಾರಗಳ ಅವಧಿಯು ಒಬ್ಬ ಯುವಕನ ಆರ್ಥಿಕ ಭವಿಷ್ಯ ಕಟ್ಟುವ ಕಾಲವಾಗುತ್ತದೆ.</p>.<p>ಕಚ್ಚೆ, ಮುಂಡಾಸು, ಬೆತ್ತ... ಇವು ಕೇವಲ ಅಲಂಕಾರವಲ್ಲ; ಅವು ಕಂಬಳದ ಶಿಸ್ತಿನ ಸಂಕೇತಗಳು. ಕಟ್ಟುಮಸ್ತಾದ ದೇಹ, ಕಸರತ್ತು ಮಾಡಿದ ಮಾಂಸಖಂಡಗಳು, ಕರೆಯ ಮೇಲೆ ನಿಯಂತ್ರಿತ ವೇಗ– ಇವುಗಳ ಹಿಂದೆ ಕಟ್ಟುನಿಟ್ಟಾದ ಅಭ್ಯಾಸವಿದೆ. ಲಕ್ಷಾಂತರ ರೂಪಾಯಿ ವ್ಯಯಿಸಿ ಕೋಣಗಳನ್ನು ಸಾಕುವ ಮಾಲೀಕರಿಗೆ ಚಿನ್ನದ ಪದಕ ಪ್ರತಿಷ್ಠೆಯ ವಿಚಾರ. ಹೀಗಾಗಿ ಉತ್ತಮ ಓಟಗಾರರ ಮೇಲೆ ಹೂಡಿಕೆ ಮಾಡಲು ಅವರು ಹಿಂದೇಟು ಹಾಕುವುದಿಲ್ಲ. ಕೋಣ ಹಿಡಿಯುವವರು, ಕೆಲಸ ಮಾಡುವವರು, ತರಬೇತುದಾರರು ಸೇರಿ ಜೋಡಿ ಕೋಣದ ಹಿಂದೆ ಅನೇಕ ಕೈಗಳು ಕೆಲಸ ಮಾಡುತ್ತವೆ. ಆದರೆ ಆ ತಂಡದಲ್ಲಿ ಅತಿ ಹೆಚ್ಚಿನ ಸಂಭಾವನೆ ಪಡೆಯುವವರು ಓಟಗಾರರೇ.</p>.<p><strong>ಅಕಾಡೆಮಿಯ ಪಾಠ...</strong></p>.<p>ಈಗಿನ ಓಟಗಾರರಲ್ಲಿ ಹಲವರು ಅಕಾಡೆಮಿಗಳಲ್ಲಿ ತರಬೇತಿ ಪಡೆದವರು. ಕೇವಲ ಪರಂಪರೆಯಿಂದಲೇ ಅಲ್ಲ, ತಂತ್ರಜ್ಞಾನ ಮತ್ತು ತರಬೇತಿ ಕ್ರಮಗಳಿಂದಲೂ ಕಂಬಳದ ವೇಗ ಹೆಚ್ಚುತ್ತಿದೆ. ಆದರೂ ಕೋಣಗಳ ಚಾಕರಿ ಮಾಡುತ್ತಲೇ ಓಟ ಕಲಿತ ಬಂಗಾಡಿ ಕಿಲ್ಲೂರು ಅಶ್ರಫ್ ಅವರಂಥ ‘ಏಕಲವ್ಯ’ರಿಗೂ ಈ ಕ್ಷೇತ್ರದಲ್ಲಿ ಸ್ಥಾನವಿದೆ. ಗಂತಿನಿಂದ ಮಂಜೊಟ್ಟಿವರೆಗೆ ಇರುವ 125 ಮೀಟರ್ ಕರೆಯ ಓಟ ಕೆಲವೊಮ್ಮೆ ಬದುಕಿನ ತಿರುವಾಗುತ್ತದೆ.</p>.<p>ಶ್ರೀನಿವಾಸ ಗೌಡ ಅವರ ಸಾಧನೆಯ ನಂತರ ಕಂಬಳ ಓಟಗಾರರ ಹೆಸರು ಬೆಳಗಲು ಆರಂಭವಾಯಿತು. ಕಾಲೇಜು ದಿನಗಳಲ್ಲಿ ಅಕಾಡೆಮಿಯಲ್ಲಿ ತರಬೇತಿ ಪಡೆದ ಕಾರ್ತೇಶ್, ಮೂರು ವರ್ಷಗಳಲ್ಲಿ 40ಕ್ಕೂ ಹೆಚ್ಚು ಕಂಬಳಗಳಲ್ಲಿ ಪಾಲ್ಗೊಂಡಿದ್ದಾರೆ. ‘ಆರು ತಿಂಗಳ ಒಪ್ಪಂದ ಇರುತ್ತದೆ. ಕಂಬಳಕ್ಕೆ ಎರಡು ದಿನ ಬಾಕಿ ಇರುವಾಗ ಅಂತಿಮ ಸಿದ್ಧತೆ ಗಟ್ಟಿಯಾಗುತ್ತದೆ. ಉಳಿದ ಸಮಯದಲ್ಲಿ ಓದಿಗೆ ತೊಂದರೆ ಇಲ್ಲ. ಪದಕ ಗೆದ್ದರೆ ಕಾಲೇಜು ಕ್ಯಾಂಪಸ್ ಕೂಡ ಸಂಭ್ರಮಿಸು<br>ತ್ತದೆ’ ಎನ್ನುತ್ತಾರೆ ಅವರು. ಕಂಬಳದ ಕೋಣಗಳನ್ನು ಓಡಿಸುವ ಅವಕಾಶ ಸಿಕ್ಕರೆ ಅದು ಗೌರವದ ಸಂಗತಿ ಎಂಬುದು ಅವರ ಮಾತಿನ ಅರ್ಥ.</p>.<p>‘ಅಡಿಕೆ ಸುಲಿಯುವುದು ಸೇರಿದಂತೆ ಹಲವು ಕೆಲಸ ಮಾಡುತ್ತಿದ್ದೆ. ನಂತರ ಅಕಾಡೆಮಿಯಲ್ಲಿ ತರಬೇತಿ ಪಡೆದು ಕಂಬಳಕ್ಕೆ ಬಂದೆ. ಎಸ್ಎಸ್ಎಲ್ಸಿ ನಂತರದ ಕಲಿಕೆಗೆ ಕಂಬಳವೇ ನೆರವಾಯಿತು’ ಎಂದು <br>ಹೇಳುತ್ತಾರೆ ಗರ್ಷಣ್ ಗೌಡ. ನಾಲ್ಕು ವರ್ಷಗಳಲ್ಲಿ 60ಕ್ಕೂ ಹೆಚ್ಚು ಕಂಬಳಗಳಲ್ಲಿ ಕೋಣ ಓಡಿಸಿರುವ ಅವರು, ನೇಗಿಲು ಕಿರಿಯರ ವಿಭಾಗದಲ್ಲಿ ಭಾಗವಹಿಸುತ್ತಿದ್ದರು. ಈಗ ನೇಗಿಲು ಹಿರಿಯ ವಿಭಾಗದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.</p>.<p><strong>ಬದುಕಿನ ಮಾರ್ಗವಾದ ಕಂಬಳ</strong></p>.<p>‘ಇಂದು ಕಂಬಳ ಹಲವರ ಬದುಕಿನ ಮಾರ್ಗವಾಗಿದೆ’ ಎನ್ನುತ್ತಾರೆ ರಾಜ್ಯ ಕಂಬಳ ಸಂಸ್ಥೆಯ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ. ‘ಉತ್ತಮ ಸಾಮರ್ಥ್ಯ ತೋರಿದ ಓಟಗಾರರಿಗೆ ₹10 ಲಕ್ಷದವರೆಗೆ ಪ್ಯಾಕೇಜ್ ಸಿಗುತ್ತದೆ. ಪ್ರತಿ ಕಂಬಳದಲ್ಲಿ ವಿವಿಧ ಕಾರ್ಯಗಳಿಗೆ ಸುಮಾರು 400 ಮಂದಿಗೆ ಉದ್ಯೋಗ ಸಿಗುತ್ತದೆ. ಕೋಣಗಳನ್ನು ಸಾಕಲು ವರ್ಷಪೂರ್ತಿ ಕೆಲಸದವರನ್ನು ಇಡಲಾಗುತ್ತದೆ. ಒಟ್ಟಾರೆ 500ಕ್ಕೂ ಹೆಚ್ಚು ಕುಟುಂಬಗಳಿಗೆ ಕಂಬಳವೇ ಆದಾಯದ ಮೂಲವಾಗಿದೆ’ ಎನ್ನುತ್ತಾರೆ.</p>.<p>ಕನೆಹಲಗೆ ವಿಭಾಗದಲ್ಲಿ ಹೆಸರು ಮಾಡಿರುವ ಕುಂದಾಪುರದ ಉದಯ್ ಗೌಡ, ಅಡ್ಡಹಲಗೆಯಲ್ಲಿ ಮಿಂಚುವ ಭಟ್ಕಳ ಹರೀಶ್, ಎರಡೂ ವಿಭಾಗಗಳಲ್ಲಿ ಓಡುವ ರಾಪುಹಿತ್ಲು ರಾಘು, ಕನೆಹಲಗೆ ಸ್ಪೆಷಲಿಸ್ಟ್ ಭಾಸ್ಕರ ದೇವಾಡಿಗ, ರಾಘವೇಂದ್ರ ಪೂಜಾರಿ ಕಾಮನಮನೆ, ವಿಶ್ವನಾಥ ದೇವಾಡಿಗ, ಟಾಪ್ ಓಟಗಾರ ಮಂಜುನಾಥ ಗೌಡ ಇವರೆಲ್ಲರ ಬದುಕು ಕಂಬಳದ ಕರೆಯ ಜೊತೆ ಬೆಸೆದುಕೊಂಡಿದೆ.</p>.<p>ಜನಪದ ಕ್ರೀಡೆಗಳಿಗೆ ವಿದ್ಯಾವಂತ ಯುವಕರು ಒಲಿದಷ್ಟೂ ಆ ಕ್ರೀಡೆಗೆ ಗೌರವ ಹೆಚ್ಚುತ್ತದೆ. ಪೈಪೋಟಿ, ಪರಂಪರೆ, ಆರ್ಥಿಕ ಬಲ– ಈ ಮೂರು ಅಂಶಗಳ ಸಂಗಮವಾಗಿರುವ ಕಂಬಳ, ಕರಾವಳಿಯ ಮಣ್ಣಿನಲ್ಲಿ ಓಡುವ ಈ ಯುವಕರಿಂದ ಮುಂದಿನ ತಲೆಮಾರಿಗೆ ಸಾಗುತ್ತಿದೆ.</p>.<p><strong>ಮಹಿಳೆಯರ ಪ್ರವೇಶದ ಪ್ರಶ್ನೆ</strong></p>.<p>ಕೋಣಗಳನ್ನು ಸಾಕುವ ಕಾರ್ಯದಲ್ಲಿ, ಮಾಲೀಕರಾಗಿ, ಪ್ರೇಕ್ಷಕರಾಗಿ ಮಹಿಳೆಯರು ಭಾಗಿಯಾಗುತ್ತಿದ್ದರೂ, ಕರೆಗೆ ಇಳಿದು ಕೋಣ ಓಡಿಸುವ ಕಾರ್ಯಕ್ಕೆ ಇನ್ನೂ ಮುಂದಾಗಿಲ್ಲ. ಬೆಳ್ಳಂಪಳ್ಳಿ ಪರಮೇಶ್ವರ ಭಟ್ ಅವರ ಪುತ್ರಿ ಚೈತ್ರಾ ಕರೆಯ ಗಂತ್ ಮತ್ತು ಮಂಜೊಟ್ಟಿ ಪ್ರವೇಶಿಸಿ ಗಮನ ಸೆಳೆದಿದ್ದರು. ಈಗ ಕುಂದಾಪುರ ಜನತಾ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ಅವರು ಕಂಬಳದಲ್ಲಿ ಮಹಿಳೆಯರ ಹೆಜ್ಜೆಗೆ ಮುನ್ನುಡಿಯಂತಿದ್ದಾರೆ.</p>.<p>ಮಹಿಳೆಯರು ಕರೆಗೆ ಇಳಿಯದಿರುವುದಕ್ಕೆ ಹಲವು ಕಾರಣಗಳನ್ನು ಉಲ್ಲೇಖಿಸಲಾಗುತ್ತದೆ. ದೈಹಿಕ ಮತ್ತು ಜೈವಿಕ ಅಂಶಗಳ ಬಗ್ಗೆ ಆತಂಕವಿದೆ ಎನ್ನಲಾಗುತ್ತದೆ. ಆದರೆ ಕಾಲ ಬದಲಾಗುತ್ತಿರುವಂತೆ ಈ ಪ್ರಶ್ನೆಯೂ ಚರ್ಚೆಗೆ ಬರುತ್ತಿದೆ. ಭವಿಷ್ಯದಲ್ಲಿ ಕಂಬಳದ ಕರೆಯಲ್ಲೂ ಮಹಿಳೆಯರ ಹೆಜ್ಜೆ ಗಟ್ಟಿ ಆಗುವ ದಿನ ದೂರವಿಲ್ಲ ಎನ್ನುವ ನಿರೀಕ್ಷೆಯೂ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>