<p>‘ರಾಮ ಕೃಷ್ಣ ಶಿವ – ಈ ಮೂವರು ಇಂಡಿಯಾದ ಪೂರ್ಣತ್ವದ ಮೂರು ಮಹತ್ ಸ್ವಪ್ನಗಳು. ರಾಮನದ್ದು ಸೀಮಿತ ವ್ಯಕ್ತಿತ್ವದಲ್ಲಿ ಪೂರ್ಣತೆ; ಕೃಷ್ಣನದ್ದು ಸಮೃದ್ಧ ವ್ಯಕ್ತಿತ್ವದಲ್ಲಿ ಪೂರ್ಣತೆ; ಶಿವನಾದರೋ ಪ್ರಮಾಣಾತೀತ...</p>.<p>‘ರಾಮ ತನ್ನ ಅಧಿಕಾರದ ಸುತ್ತ ರೇಖಿತವಾಗಿದ್ದ ನಿಯಮ ಘಟನೆಗಳ ವೃತ್ತವನ್ನು ಎಂದೂ ಹೆಜ್ಜೆ ದಾಟ್ಟಿದ್ದಿಲ್ಲ ಮತ್ತು, ಅಂಥ ಕಟ್ಟಳೆಯ ಗೆರೆಗಳಿಗೆ ಪ್ರಶ್ನೆಯಿಲ್ಲದೆ ಶರಣಾಗುತ್ತಿದ್ದುದೇ ಅವನ ಜೀವನದಲ್ಲಿನ ಮೂರು ನಾಲ್ಕು ಮಹತ್ ಕಲಂಕಗಳಿಗೆ ಕಾರಣವಾಯಿತು...</p>.<p>‘ರಾಮ ವಕ್ತಾರನಾಗಿದ್ದಕ್ಕಿಂತ ಶ್ರೋತಾರನಾಗಿದ್ದದ್ದೇ ಹೆಚ್ಚು. ಮಾತನಾಡುವಾಗ ಎದುರಿನವರಿಗೆ ತಾಳ್ಮೆಯಿಂದ ಕಿವಿಗೊಡುವುದು ದೊಡ್ಡವರಿಗೆ ಸಹಜವೇ. ಅಷ್ಟಲ್ಲದೆ ಎಲ್ಲರ ಮಾತಿಗೂ ರಾಮ ಕಿವಿಗೊಡುತ್ತಿದ್ದ. ತನ್ನ ಕಡೆಯವರು ಮತ್ತು ಶತ್ರುಪಕ್ಷದವರು ಮಾತಿನ ಮಲ್ಲಯುದ್ಧಕ್ಕಿಳಿದಾಗ ರಾಮ ಆಸಕ್ತಿಯಿಂದ ಕೇಳುವವನಾಗಿ ನಿಲ್ಲುತ್ತಿದ್ದುದುಂಟು...</p>.<p>‘ಅಪಹಾರವಿಲ್ಲದೆ ವಿಸ್ತರಣೆ, ರಾಜ್ಯದಾಹವಲ್ಲದ ಏಕೀಕರಣಸಾಧನೆ – ಇದು ರಾಮಕಥೆ... ಕಥಾನಾಯಕ ರಾಮ, ಉದ್ದಕ್ಕೂ, ಶತ್ರುಪಕ್ಷದಲ್ಲಿರುವ ಧಾರ್ಮಿಕರ ಸ್ನೇಹವನ್ನು ಹುಡುಕಿ ಎತ್ತಿಕೊಳ್ಳುವುದಕ್ಕೆ ಮುಂದಾಗು ತ್ತಿದ್ದುದನ್ನು ಕಾಣಬಹುದು...’</p>.<p><strong>– ರಾಮಮನೋಹರ ಲೋಹಿಯಾ</strong></p>.<p>(ಅನುವಾದ: ಕೆ. ವಿ. ಸುಬ್ಬಣ್ಣ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ರಾಮ ಕೃಷ್ಣ ಶಿವ – ಈ ಮೂವರು ಇಂಡಿಯಾದ ಪೂರ್ಣತ್ವದ ಮೂರು ಮಹತ್ ಸ್ವಪ್ನಗಳು. ರಾಮನದ್ದು ಸೀಮಿತ ವ್ಯಕ್ತಿತ್ವದಲ್ಲಿ ಪೂರ್ಣತೆ; ಕೃಷ್ಣನದ್ದು ಸಮೃದ್ಧ ವ್ಯಕ್ತಿತ್ವದಲ್ಲಿ ಪೂರ್ಣತೆ; ಶಿವನಾದರೋ ಪ್ರಮಾಣಾತೀತ...</p>.<p>‘ರಾಮ ತನ್ನ ಅಧಿಕಾರದ ಸುತ್ತ ರೇಖಿತವಾಗಿದ್ದ ನಿಯಮ ಘಟನೆಗಳ ವೃತ್ತವನ್ನು ಎಂದೂ ಹೆಜ್ಜೆ ದಾಟ್ಟಿದ್ದಿಲ್ಲ ಮತ್ತು, ಅಂಥ ಕಟ್ಟಳೆಯ ಗೆರೆಗಳಿಗೆ ಪ್ರಶ್ನೆಯಿಲ್ಲದೆ ಶರಣಾಗುತ್ತಿದ್ದುದೇ ಅವನ ಜೀವನದಲ್ಲಿನ ಮೂರು ನಾಲ್ಕು ಮಹತ್ ಕಲಂಕಗಳಿಗೆ ಕಾರಣವಾಯಿತು...</p>.<p>‘ರಾಮ ವಕ್ತಾರನಾಗಿದ್ದಕ್ಕಿಂತ ಶ್ರೋತಾರನಾಗಿದ್ದದ್ದೇ ಹೆಚ್ಚು. ಮಾತನಾಡುವಾಗ ಎದುರಿನವರಿಗೆ ತಾಳ್ಮೆಯಿಂದ ಕಿವಿಗೊಡುವುದು ದೊಡ್ಡವರಿಗೆ ಸಹಜವೇ. ಅಷ್ಟಲ್ಲದೆ ಎಲ್ಲರ ಮಾತಿಗೂ ರಾಮ ಕಿವಿಗೊಡುತ್ತಿದ್ದ. ತನ್ನ ಕಡೆಯವರು ಮತ್ತು ಶತ್ರುಪಕ್ಷದವರು ಮಾತಿನ ಮಲ್ಲಯುದ್ಧಕ್ಕಿಳಿದಾಗ ರಾಮ ಆಸಕ್ತಿಯಿಂದ ಕೇಳುವವನಾಗಿ ನಿಲ್ಲುತ್ತಿದ್ದುದುಂಟು...</p>.<p>‘ಅಪಹಾರವಿಲ್ಲದೆ ವಿಸ್ತರಣೆ, ರಾಜ್ಯದಾಹವಲ್ಲದ ಏಕೀಕರಣಸಾಧನೆ – ಇದು ರಾಮಕಥೆ... ಕಥಾನಾಯಕ ರಾಮ, ಉದ್ದಕ್ಕೂ, ಶತ್ರುಪಕ್ಷದಲ್ಲಿರುವ ಧಾರ್ಮಿಕರ ಸ್ನೇಹವನ್ನು ಹುಡುಕಿ ಎತ್ತಿಕೊಳ್ಳುವುದಕ್ಕೆ ಮುಂದಾಗು ತ್ತಿದ್ದುದನ್ನು ಕಾಣಬಹುದು...’</p>.<p><strong>– ರಾಮಮನೋಹರ ಲೋಹಿಯಾ</strong></p>.<p>(ಅನುವಾದ: ಕೆ. ವಿ. ಸುಬ್ಬಣ್ಣ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>