<p>ಹೀಗೆ ಒಂದು ಹುಣ್ಣಿಮೆಯ ದಿನ<br /> ಎಳೆಯರು ಬುದ್ಧನ ಬಳಿಗೆ ಬಂದು<br /> ತಿಳಿಗೊಳದಲ್ಲಿ, ಮರ ಬಳ್ಳಿಯಲ್ಲಿ ಬಿಡಿಸಿ ತಂದ ಹೂಗಳನ್ನು<br /> ಮುಂದೆ ಚೆಲ್ಲಿ ಕುಳಿತರು ಸುತ್ತ</p>.<p>ತೆರೆದ ಕಣ್ಣು ತೆರೆದ ಹಾಗೆ<br /> ಬಿಟ್ಟ ಬಾಯಿ ಬಿಟ್ಟು, ಮೈಯ ರೋಮ ನಿಮಿರಿನಲ್ಲಿ<br /> ಕದಲಲಿಲ್ಲ, ಕನಲಲಿಲ್ಲ<br /> ಕಾದು ಕುಳಿತರು ಸುತ್ತ ಒಂದು ಸುತ್ತಕ್ಕಾಗಿ</p>.<p>ಬುದ್ಧ ಬಿಚ್ಚಲಿಲ್ಲ ತುಟಿಯನು<br /> ಹೊರಡಲಿಲ್ಲ ಒಂದು ಶಬ್ದ<br /> ಹೂವಿನೆಡೆಗೆ ಕೈಯ ಚಾಚಿ ಕಮಲವೊಂದನೆತ್ತಿಕೊಂಡು<br /> ಬೆರಳ ನಡುವೆ ಹಿಡಿದು ನೋಡುತ್ತಿದ್ದನು</p>.<p>ನೋಡುನೋಡುತಿದ್ದ ಹಾಗೆ<br /> ಚಿಮ್ಮಿತೊಂದು ಮುಗುಳುನಗೆ, ಆ ಮಹಾನಗೆ<br /> ತುಂಬಿ ತುಳುಕಿದಂತೆ ಆ ಚಂದ್ರನೆಂಬ ಬಿಂದಿಗೆ<br /> ಮಂತ್ರಮುಗ್ಧ ಮೌನದಲ್ಲಿ ಮಕ್ಕಳು<br /> ಬೆಚ್ಚಿಬಿದ್ದರು ಏನೂ ತೋಚದಾಯಿತು<br /> <br /> ಹೂವನ್ನೆ ದಿಟ್ಟಿಸುತ್ತಿದ್ದ ಮಹಾಕಸ್ಸಪ<br /> ಮರಳಿ ನಕ್ಕನು; ಅರ್ಥವಾಯಿತೆನ್ನುವಂತೆ<br /> ಬುದ್ಧನ ನಳಿಬೆರಳುಗಳಿಂದ ಆಗಷ್ಟೆ ಅರಳಿದಂತಿದ್ದ<br /> ಬಿಳಿದಾವರೆಯ ಬೆರಗಿಗೆ</p>.<p>ಹೊಳೆಯಿತು, ತಿಳಿಯಿತು ಎಳೆಯರಿಗೆ<br /> ಗಂಧದ ಕಾಡನ್ನು ಹೊಕ್ಕು<br /> ಒಂದು ಮರವನ್ನು ನೋಡದೆ ಹೊರಬರಬಹುದು<br /> ಪುಸ್ತಕವನ್ನು ಓದಿ ಮುಗಿಸಿದರೂ<br /> ಒಂದು ವಾಕ್ಯವೂ ತಿಳಿಯದಿರಬಹುದು</p>.<p>ನೋಡುವುದೆಂದರೆ ಬರಿ ನೋಟವಲ್ಲ<br /> ಅದು ಅಂತರಂಗ ಪಡೆವ ಅನುಭಾವ, ದಿವ್ಯಬೋಧಿ<br /> ಸಚಿತ್ತರಾಗುವುದು ಎಂದರೆ ಸತ್ಯವನ್ನು ಅರಿಯುವುದು<br /> ಮನಸ್ಸು ಈಗ, ಇಲ್ಲಿಯೆ ಇರದಿದ್ದರೆ<br /> ಅಚ್ಚ ಬಿಳಿಯ ಹೂವೂ ಕಾಣಿಸುವುದಿಲ್ಲ</p>.<p>ಇದೇ ಶಾಕ್ಯಮುನಿಯ<br /> ಶಬ್ದದೊಳಗಿನ ನಿಃಶ್ಶಬ್ದ ಉಪದೇಶ<br /> ವಚನವಿಲ್ಲದ ಮಹಾಪ್ರವಚನ<br /> ಬದುಕ ಬಟ್ಟೆಗೆ ಹಿಡಿದ<br /> ಬೆಳಕಿನ ಪಂಜು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೀಗೆ ಒಂದು ಹುಣ್ಣಿಮೆಯ ದಿನ<br /> ಎಳೆಯರು ಬುದ್ಧನ ಬಳಿಗೆ ಬಂದು<br /> ತಿಳಿಗೊಳದಲ್ಲಿ, ಮರ ಬಳ್ಳಿಯಲ್ಲಿ ಬಿಡಿಸಿ ತಂದ ಹೂಗಳನ್ನು<br /> ಮುಂದೆ ಚೆಲ್ಲಿ ಕುಳಿತರು ಸುತ್ತ</p>.<p>ತೆರೆದ ಕಣ್ಣು ತೆರೆದ ಹಾಗೆ<br /> ಬಿಟ್ಟ ಬಾಯಿ ಬಿಟ್ಟು, ಮೈಯ ರೋಮ ನಿಮಿರಿನಲ್ಲಿ<br /> ಕದಲಲಿಲ್ಲ, ಕನಲಲಿಲ್ಲ<br /> ಕಾದು ಕುಳಿತರು ಸುತ್ತ ಒಂದು ಸುತ್ತಕ್ಕಾಗಿ</p>.<p>ಬುದ್ಧ ಬಿಚ್ಚಲಿಲ್ಲ ತುಟಿಯನು<br /> ಹೊರಡಲಿಲ್ಲ ಒಂದು ಶಬ್ದ<br /> ಹೂವಿನೆಡೆಗೆ ಕೈಯ ಚಾಚಿ ಕಮಲವೊಂದನೆತ್ತಿಕೊಂಡು<br /> ಬೆರಳ ನಡುವೆ ಹಿಡಿದು ನೋಡುತ್ತಿದ್ದನು</p>.<p>ನೋಡುನೋಡುತಿದ್ದ ಹಾಗೆ<br /> ಚಿಮ್ಮಿತೊಂದು ಮುಗುಳುನಗೆ, ಆ ಮಹಾನಗೆ<br /> ತುಂಬಿ ತುಳುಕಿದಂತೆ ಆ ಚಂದ್ರನೆಂಬ ಬಿಂದಿಗೆ<br /> ಮಂತ್ರಮುಗ್ಧ ಮೌನದಲ್ಲಿ ಮಕ್ಕಳು<br /> ಬೆಚ್ಚಿಬಿದ್ದರು ಏನೂ ತೋಚದಾಯಿತು<br /> <br /> ಹೂವನ್ನೆ ದಿಟ್ಟಿಸುತ್ತಿದ್ದ ಮಹಾಕಸ್ಸಪ<br /> ಮರಳಿ ನಕ್ಕನು; ಅರ್ಥವಾಯಿತೆನ್ನುವಂತೆ<br /> ಬುದ್ಧನ ನಳಿಬೆರಳುಗಳಿಂದ ಆಗಷ್ಟೆ ಅರಳಿದಂತಿದ್ದ<br /> ಬಿಳಿದಾವರೆಯ ಬೆರಗಿಗೆ</p>.<p>ಹೊಳೆಯಿತು, ತಿಳಿಯಿತು ಎಳೆಯರಿಗೆ<br /> ಗಂಧದ ಕಾಡನ್ನು ಹೊಕ್ಕು<br /> ಒಂದು ಮರವನ್ನು ನೋಡದೆ ಹೊರಬರಬಹುದು<br /> ಪುಸ್ತಕವನ್ನು ಓದಿ ಮುಗಿಸಿದರೂ<br /> ಒಂದು ವಾಕ್ಯವೂ ತಿಳಿಯದಿರಬಹುದು</p>.<p>ನೋಡುವುದೆಂದರೆ ಬರಿ ನೋಟವಲ್ಲ<br /> ಅದು ಅಂತರಂಗ ಪಡೆವ ಅನುಭಾವ, ದಿವ್ಯಬೋಧಿ<br /> ಸಚಿತ್ತರಾಗುವುದು ಎಂದರೆ ಸತ್ಯವನ್ನು ಅರಿಯುವುದು<br /> ಮನಸ್ಸು ಈಗ, ಇಲ್ಲಿಯೆ ಇರದಿದ್ದರೆ<br /> ಅಚ್ಚ ಬಿಳಿಯ ಹೂವೂ ಕಾಣಿಸುವುದಿಲ್ಲ</p>.<p>ಇದೇ ಶಾಕ್ಯಮುನಿಯ<br /> ಶಬ್ದದೊಳಗಿನ ನಿಃಶ್ಶಬ್ದ ಉಪದೇಶ<br /> ವಚನವಿಲ್ಲದ ಮಹಾಪ್ರವಚನ<br /> ಬದುಕ ಬಟ್ಟೆಗೆ ಹಿಡಿದ<br /> ಬೆಳಕಿನ ಪಂಜು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>