<p><strong>ಬೆಂಗಳೂರು</strong>: ನಾಯಕ ನಿಖಿಲ್ ರಾಜ್ ಮುರುಗೇಶ್ ಅವರ ಗಳಿಸಿದ ಎರಡು ಗೋಲುಗಳ ನೆರವಿನಿಂದ ಕರ್ನಾಟಕ ತಂಡವು ‘ಸಂತೋಷ್ ಟ್ರೋಫಿ’ಗಾಗಿ ನಡೆಯುತ್ತಿರುವ 79ನೇ ಸೀನಿಯರ್ ಪುರುಷರ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ಷಿಪ್ ಪಂದ್ಯದಲ್ಲಿ 3–0ಯಿಂದ ಲಕ್ಷದ್ವೀಪ ತಂಡವನ್ನು ನಿರಾಯಾಸವಾಗಿ ಮಣಿಸಿ ಶುಭಾರಂಭ ಮಾಡಿತು.</p>.<p>ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಅರ್ಹತಾ ಸುತ್ತಿನ ‘ಎಚ್’ ಗುಂಪಿನ ಪಂದ್ಯದಲ್ಲಿ ಬೆಂಗಳೂರು ಯುನೈಟೆಡ್ ಫುಟ್ಬಾಲ್ ಕ್ಲಬ್ ತಂಡದ ನಿಖಿಲ್ 8ನೇ ಮತ್ತು 43ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ಕಾರ್ತಿಕ್ ಗೋವಿಂದ್ ಸ್ವಾಮಿ ಮತ್ತೊಂದು ಗೋಲನ್ನು (90+3ನೇ) ತಂದಿತ್ತರು. </p>.<p>ರವಿಬಾಬು ರಾಜು ಮಾರ್ಗದರ್ಶನದ ಆತಿಥೇಯ ತಂಡವು ಎಂಟನೇ ನಿಮಿಷದಲ್ಲೇ ಮುನ್ನಡೆ ಪಡೆಯಿತು. ಪೆನಾಲ್ಟಿ ಕಾರ್ನರ್ ಅವಕಾಶವನ್ನು ನಿಖಿಲ್ ಅವರು ಎದುರಾಳಿ ಗೋಲ್ಕೀಪರ್ ಮೊಹಮ್ಮದ್ ಸಮೀರ್ ಶೇಕ್ ಅವರ ಕಣ್ತಪ್ಪಿಸಿ ಚೆಂಡನ್ನು ಗುರಿ ಸೇರಿಸಿದರು. </p>.<p>ಮೊದಲಾರ್ಧದ ಮುಕ್ತಾಯಕ್ಕೆ ಕೆಲವೇ ನಿಮಿಷ ಬಾಕಿ ಇರುವಂತೆ ಬೆಂಗಳೂರು ಎಫ್ಸಿ ತಂಡ ಪ್ರತಿಭೆ ಸಿ.ರೋಹನ್ ಸಿಂಗ್ ಅವರು ನೀಡಿದ ಪಾಸ್ನಲ್ಲಿ ನಿಖಿಲ್ ಮತ್ತೊಂದು ಗೋಲು ದಾಖಲಿಸಿ, ತಂಡದ ಮೊತ್ತವನ್ನು ದ್ವಿಗುಣಗೊಳಿಸಿದರು. </p>.<p>ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ರಕ್ಷಣಾತ್ಮಕ ಆಟದ ಮೊರೆ ಹೋದವು. ಆದರೆ, ಇಂಜುರಿ ಅವಧಿಯಲ್ಲಿ ಕಾರ್ತಿಕ್ ಅಮೋಘವಾಗಿ ಗೋಲು ಗಳಿಸಿ, ಕರ್ನಾಟಕದ ಗೆಲುವಿನ ಅಂತರವನ್ನು ಹೆಚ್ಚಿಸಿದರು.</p>.<p>ಕರ್ನಾಟಕ ತಂಡವು ಸೋಮವಾರ ಸರ್ವಿಸಸ್ ತಂಡವನ್ನು ಎದುರಿಸಲಿದೆ. </p>.<p><strong>ಸರ್ವಿಸಸ್ಗೆ ಗೆಲುವು:</strong> ದಿನದ ಮೊದಲ ಪಂದ್ಯದಲ್ಲಿ ಸರ್ವಿಸಸ್ ತಂಡವು 4–0ಯಿಂದ ಗೋವಾ ತಂಡವನ್ನು ಮಣಿಸಿತು. ಗೋವಾ ಪರ ಅಭಿಷೇಕ್ ಪವಾರ್ (59ನೇ ಮತ್ತು 64ನೇ) ಎರಡು ಗೋಲು ಗಳಿಸಿದರೆ, ರೋಶನ್ ಪನ್ನಾ (67ನೇ) ಮತ್ತು ವಿಜಯ್ ಜೆ. (69ನೇ) ತಲಾ ಒಂದು ಗೋಲು ದಾಖಲಿಸಿದರು. </p>.<p>ಅಂತರರಾಷ್ಟ್ರೀಯ ಫುಟ್ಬಾಲ್ ಆಟಗಾರ ಗುರುಪ್ರೀತ್ ಸಿಂಗ್, ಡಿಐಜಿಪಿ (ಆಡಳಿತ) ಯಡಾ ಮಾರ್ಟಿನ್, ಕೆಎಸ್ಸಿಎ ಪ್ರಧಾನ ಕಾರ್ಯದರ್ಶಿ ಎಂ. ಕುಮಾರ್ ಅವರು ಪಂದ್ಯ ಆರಂಭಕ್ಕೂ ಮುನ್ನ ತಂಡಗಳನ್ನು ಪರಿಚಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಾಯಕ ನಿಖಿಲ್ ರಾಜ್ ಮುರುಗೇಶ್ ಅವರ ಗಳಿಸಿದ ಎರಡು ಗೋಲುಗಳ ನೆರವಿನಿಂದ ಕರ್ನಾಟಕ ತಂಡವು ‘ಸಂತೋಷ್ ಟ್ರೋಫಿ’ಗಾಗಿ ನಡೆಯುತ್ತಿರುವ 79ನೇ ಸೀನಿಯರ್ ಪುರುಷರ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ಷಿಪ್ ಪಂದ್ಯದಲ್ಲಿ 3–0ಯಿಂದ ಲಕ್ಷದ್ವೀಪ ತಂಡವನ್ನು ನಿರಾಯಾಸವಾಗಿ ಮಣಿಸಿ ಶುಭಾರಂಭ ಮಾಡಿತು.</p>.<p>ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಅರ್ಹತಾ ಸುತ್ತಿನ ‘ಎಚ್’ ಗುಂಪಿನ ಪಂದ್ಯದಲ್ಲಿ ಬೆಂಗಳೂರು ಯುನೈಟೆಡ್ ಫುಟ್ಬಾಲ್ ಕ್ಲಬ್ ತಂಡದ ನಿಖಿಲ್ 8ನೇ ಮತ್ತು 43ನೇ ನಿಮಿಷಗಳಲ್ಲಿ ಗೋಲು ದಾಖಲಿಸಿದರು. ಕಾರ್ತಿಕ್ ಗೋವಿಂದ್ ಸ್ವಾಮಿ ಮತ್ತೊಂದು ಗೋಲನ್ನು (90+3ನೇ) ತಂದಿತ್ತರು. </p>.<p>ರವಿಬಾಬು ರಾಜು ಮಾರ್ಗದರ್ಶನದ ಆತಿಥೇಯ ತಂಡವು ಎಂಟನೇ ನಿಮಿಷದಲ್ಲೇ ಮುನ್ನಡೆ ಪಡೆಯಿತು. ಪೆನಾಲ್ಟಿ ಕಾರ್ನರ್ ಅವಕಾಶವನ್ನು ನಿಖಿಲ್ ಅವರು ಎದುರಾಳಿ ಗೋಲ್ಕೀಪರ್ ಮೊಹಮ್ಮದ್ ಸಮೀರ್ ಶೇಕ್ ಅವರ ಕಣ್ತಪ್ಪಿಸಿ ಚೆಂಡನ್ನು ಗುರಿ ಸೇರಿಸಿದರು. </p>.<p>ಮೊದಲಾರ್ಧದ ಮುಕ್ತಾಯಕ್ಕೆ ಕೆಲವೇ ನಿಮಿಷ ಬಾಕಿ ಇರುವಂತೆ ಬೆಂಗಳೂರು ಎಫ್ಸಿ ತಂಡ ಪ್ರತಿಭೆ ಸಿ.ರೋಹನ್ ಸಿಂಗ್ ಅವರು ನೀಡಿದ ಪಾಸ್ನಲ್ಲಿ ನಿಖಿಲ್ ಮತ್ತೊಂದು ಗೋಲು ದಾಖಲಿಸಿ, ತಂಡದ ಮೊತ್ತವನ್ನು ದ್ವಿಗುಣಗೊಳಿಸಿದರು. </p>.<p>ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ರಕ್ಷಣಾತ್ಮಕ ಆಟದ ಮೊರೆ ಹೋದವು. ಆದರೆ, ಇಂಜುರಿ ಅವಧಿಯಲ್ಲಿ ಕಾರ್ತಿಕ್ ಅಮೋಘವಾಗಿ ಗೋಲು ಗಳಿಸಿ, ಕರ್ನಾಟಕದ ಗೆಲುವಿನ ಅಂತರವನ್ನು ಹೆಚ್ಚಿಸಿದರು.</p>.<p>ಕರ್ನಾಟಕ ತಂಡವು ಸೋಮವಾರ ಸರ್ವಿಸಸ್ ತಂಡವನ್ನು ಎದುರಿಸಲಿದೆ. </p>.<p><strong>ಸರ್ವಿಸಸ್ಗೆ ಗೆಲುವು:</strong> ದಿನದ ಮೊದಲ ಪಂದ್ಯದಲ್ಲಿ ಸರ್ವಿಸಸ್ ತಂಡವು 4–0ಯಿಂದ ಗೋವಾ ತಂಡವನ್ನು ಮಣಿಸಿತು. ಗೋವಾ ಪರ ಅಭಿಷೇಕ್ ಪವಾರ್ (59ನೇ ಮತ್ತು 64ನೇ) ಎರಡು ಗೋಲು ಗಳಿಸಿದರೆ, ರೋಶನ್ ಪನ್ನಾ (67ನೇ) ಮತ್ತು ವಿಜಯ್ ಜೆ. (69ನೇ) ತಲಾ ಒಂದು ಗೋಲು ದಾಖಲಿಸಿದರು. </p>.<p>ಅಂತರರಾಷ್ಟ್ರೀಯ ಫುಟ್ಬಾಲ್ ಆಟಗಾರ ಗುರುಪ್ರೀತ್ ಸಿಂಗ್, ಡಿಐಜಿಪಿ (ಆಡಳಿತ) ಯಡಾ ಮಾರ್ಟಿನ್, ಕೆಎಸ್ಸಿಎ ಪ್ರಧಾನ ಕಾರ್ಯದರ್ಶಿ ಎಂ. ಕುಮಾರ್ ಅವರು ಪಂದ್ಯ ಆರಂಭಕ್ಕೂ ಮುನ್ನ ತಂಡಗಳನ್ನು ಪರಿಚಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>