<p><em><strong>– ಶಿವಕುಮಾರ ಕರನಂದಿ</strong></em></p>.<p>ಮನದ ಗೂಡಿನೊಳಗೆ ಮಾತೊಂದು</p>.<p>ಮಲಗಿದೆ ಸದ್ದುಗದ್ದಲವಿಲ್ಲದೆ</p>.<p>ಮೌನ ಮೀರಿ ಬರಲೊಲ್ಲದು</p>.<p>ಅಹಂ ಎಂಬ ಬೇಲಿಯ ದಾಟಿ</p>.<p>ಚೆಂದದ ಗೆಳೆತನ ಮುರಿದು ಬಿದ್ದಿದೆ</p>.<p>ಅವಶೇಷಗಳಡಿ ಹುದುಗಿ ಹೋಗಿದೆ</p>.<p>ಒಂದೇ ಆತ್ಮ ಎರಡು ದೇಹಗಳಂದು</p>.<p>ತುಡಿದ ಜೀವ ದೂರ ಸರಿದಿವೆ ಇಂದು</p>.<p>ಮಾತಾಗಲು ಮನಸ್ಸಿಲ್ಲ ಇಬ್ಬರೊಳಗೆ</p>.<p>ನರಳುತಿವೆ ಮನಸುಗಳ ಒಳಗೊಳಗೆ</p>.<p>ಮುಖವಾಡ ಬಿಂಕ ಬಿಗುಮಾನದೊಳಗೆ</p>.<p>ಮೊಗದಲಿ ಮುಗುಳು ನಗೆ ತೋರಿಕೆಗೆ</p>.<p>ತಾನೇ ಮೇಲು ಎನ್ನುವುದ ಬಿಟ್ಟು</p>.<p>ಮಾತಿಗೆ ಮಾತಾಗಬೇಕು ಮನ</p>.<p>ಚೈತ್ರದ ಚಿಗುರಂತೆ ಸ್ನೇಹ ಮತ್ತೆ ಮೊಳೆಯಲಿ</p>.<p>ನಿತ್ಯ ಹಚ್ಚ ಹಸಿರಂತೆ ಕಂಗೊಳಿಸಲಿ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><em><strong>– ಶಿವಕುಮಾರ ಕರನಂದಿ</strong></em></p>.<p>ಮನದ ಗೂಡಿನೊಳಗೆ ಮಾತೊಂದು</p>.<p>ಮಲಗಿದೆ ಸದ್ದುಗದ್ದಲವಿಲ್ಲದೆ</p>.<p>ಮೌನ ಮೀರಿ ಬರಲೊಲ್ಲದು</p>.<p>ಅಹಂ ಎಂಬ ಬೇಲಿಯ ದಾಟಿ</p>.<p>ಚೆಂದದ ಗೆಳೆತನ ಮುರಿದು ಬಿದ್ದಿದೆ</p>.<p>ಅವಶೇಷಗಳಡಿ ಹುದುಗಿ ಹೋಗಿದೆ</p>.<p>ಒಂದೇ ಆತ್ಮ ಎರಡು ದೇಹಗಳಂದು</p>.<p>ತುಡಿದ ಜೀವ ದೂರ ಸರಿದಿವೆ ಇಂದು</p>.<p>ಮಾತಾಗಲು ಮನಸ್ಸಿಲ್ಲ ಇಬ್ಬರೊಳಗೆ</p>.<p>ನರಳುತಿವೆ ಮನಸುಗಳ ಒಳಗೊಳಗೆ</p>.<p>ಮುಖವಾಡ ಬಿಂಕ ಬಿಗುಮಾನದೊಳಗೆ</p>.<p>ಮೊಗದಲಿ ಮುಗುಳು ನಗೆ ತೋರಿಕೆಗೆ</p>.<p>ತಾನೇ ಮೇಲು ಎನ್ನುವುದ ಬಿಟ್ಟು</p>.<p>ಮಾತಿಗೆ ಮಾತಾಗಬೇಕು ಮನ</p>.<p>ಚೈತ್ರದ ಚಿಗುರಂತೆ ಸ್ನೇಹ ಮತ್ತೆ ಮೊಳೆಯಲಿ</p>.<p>ನಿತ್ಯ ಹಚ್ಚ ಹಸಿರಂತೆ ಕಂಗೊಳಿಸಲಿ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>