ಒಂದು ಕಾಲದಲ್ಲಿ ಧನುಷ್ಕೋಟಿ ಭಾರತದ ಪ್ರಮುಖ ನಗರವಾಗಿತ್ತು. ಭಾರತಕ್ಕೆ ಪ್ರವೇಶಿಸುವ ಮಾರ್ಗವೂ ಆಗಿತ್ತು. ಈಗಿನ ಶ್ರೀಲಂಕಾ ಆಗ ಸಿಲೋನ್ ಆಗಿತ್ತು. ಅಲ್ಲಿನ ತಲೈಮನ್ನಾರ್ಗೆ ಪ್ರವಾಸಿಗರು, ವ್ಯಾಪಾರಿಗಳು ಲಗ್ಗೆ ಇಡುತ್ತಿದ್ದರು. ಅಲ್ಲಿ ರೈಲು ನಿಲ್ದಾಣ, ಆಸ್ಪತ್ರೆ, ಶಾಲೆ ಹಾಗೂ ಅಂಚೆಕಚೇರಿ ಇದ್ದವು. ಹೋಟೆಲ್ಗಳು, ಅಂಗಡಿಗಳು, ರಾಮೇಶ್ವರಂಗೆ ಭೇಟಿ ನೀಡುತ್ತಿದ್ದ ಪ್ರವಾಸಿಗರಿಗಾಗಿ ವಿಶ್ರಾಂತಿ ಕೊಠಡಿಗಳು ಕೂಡ ಇದ್ದವು.