ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳದ ಹಾಡು ಮರೆತಿದ್ದಾರೆ

ಕವನ ಸ್ಪರ್ಧೆ 2014
Last Updated 1 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನೀವು ರಂಗದಲಿ ಸ್ವಚ್ಛಂದ ಛಂದದಲಿ ಮೆರೆದು
ಚಪ್ಪಾಳೆ ಸಿಳ್ಳೆ ಬಿದ್ದಾಗ
ಒಂದಲ್ಲ ಎರಡಲ್ಲ ನೂರು ನೂರು ಗಿರ್ಕಿ ಹೊಡೆದು
ಅರಸಾಗಬೇಕಾದವರು ಪುಂಡುವೇಷದವರಾದಿರಿ

ನಿಮಗೆ ಪಂಜನು ಹಿಡಿದು
ರಂಗ ತೋರಿದ ನಾವು
ಬೆಳಕು ಹರಿಯಲು
ರಾಮಕೃಷ್ಣರು ಬಂದೆ ಬರುವರು
ಎಂದು ಭಾವಿಸಿ ಚೌಕಿಯಲಿ ಕೈ ಕೈ ಹೊಸೆಯುತ್ತ
ಮಂಗಳದ ಹಾಡ ಬಯಸುತ್ತಿದ್ದೇವೆ
ಕುಣಿವ ನೀವೂ ಸೋತು
ಭಾಗವತರತ್ತ ನೋಡುತ್ತಲೇ ಇದ್ದೀರಿ

ಅವರು ಆ ಹಾಡ ಮರೆತು
ಮರಮರಳಿ ನಿಮ್ಮನ್ನು ಪುಂಡು ವೇಷಕ್ಕೆ ಅಣಿಮಾಡಿ
ಆರ್ಭಟೆ ಕೊಡುತ್ತಲೇ ಇದ್ದಾರೆ
ನಿಮಗೀಗ ಕುಣಿತ ಅನಿವಾರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT