<p>‘ಕೋಗಿಲು ಕಾಡಿದೆ ಕೇಳಿದೆಯಾ, ಹೊಸ ಫ್ಲಾಟನು ಕೇಳಿದೆ ನೋಡಿದೆಯಾ?’ ತಿಪ್ಪಣ್ಣ ಹಾಡಿಕ್ಯಂದು ನನ್ನ ಮೂತಿಗೆ ತಿವೀತಿದ್ದ.</p>.<p>‘ಸುಮ್ಮಗಿರ್ಲಾ ಅಣ್ತಮ್ಮ. ಯಾವುದನ್ನ ದೊಂಬಿ ಯಾಟದ ಹಾಡು ಹೇಳದು ಬುಟ್ಟು ಇದೇನಿದು’ ಅಂತಂದೆ.</p>.<p>‘ಕಂಗ್ರಾಜುಲೇಸನ್ ಡಾನು, ಇದೇ ನೋಡು ನನ್ನ ಪ್ಲಾನು. ಬ್ಯಾನರು ಬಳ್ಳಾರಿ ಬ್ಯಾನರು ಬಳ್ಳಾರಿ’ ಅಂತ ಹಾಡಿಕ್ಯಂದು ಮಗ್ಗುಲಗೆ ಕೂಕಂದ.</p>.<p>‘ಜಮೀರಣ್ಣ ಏನೋ ಮಾಡ್ತೀನಿ ಅಂತ ಕಡೆದೋಗಿದ್ನಲ್ಲಾ ಏನಾತ್ರೋ?’ ಯಂಟಪ್ಪಣ್ಣ ವಿಚಾರಿಸಿತು.</p>.<p>‘ಜಮೀರಣ್ಣ ಸ್ಯಾನೆ ದಿಲ್ದಾರ್ ಕನಣೈ. ಕೋಗಿಲುಗಳಿಗೂ ಗೂಡು ಮಾಡಿಕೊಡ್ತೀವಿ ಅಂದದೆ. ಬಳ್ಳಾರಿ ಉಸ್ತುವಾರಿ ಜಮೀರಣ್ಣನೇ ಅಲ್ಲುವೇ? ದೊಂಬೀಲಿ ಜೀವ ಬುಟ್ಟ ಪಾಪದ ಕಾರ್ಯಕರ್ತನಿಗೆ ಇಸ್ಲಾಂ ಬೋರ್ಡಿಂದ ಮನೆ ಕಟ್ಟಿಸಿಕೊಡ್ತೀನಿ ಅಂದವ್ನೆ’ ತಿಪ್ಪಣ್ಣ ಸುದ್ದಿ ಕೊಟ್ಟ.</p>.<p>‘ತಿಪ್ಪಣ್ಣ ವಸಿ ಸುಮ್ಮಗಿರು. ನೀನು ಯಾವ್ಯಾವುದನ್ನೋ ಎಲ್ಲೆಲ್ಲಿಗೋ ಸಿಗೇ ಹಾಕಬ್ಯಾಡ. ಅದು ಇಸ್ಲಾಂ ಬೋರ್ಡಲ್ಲ. ಸ್ಲಂ ಬೋರ್ಡು’ ತುರೇಮಣೆ ತಿದ್ದಿದರು.</p>.<p>‘ಏನೋ ಆಗದು ಅಗೋತು. ಈಗ ದಿಟವಾದ ಕೋಗಿಲೆಗಳು ಯಾರು? ಬಳ್ಳಾರೀಲಿ ಸತ್ತೋನಿಗೆ ಗುಂಡಾಕಿದ್ದು ಯಾರು? ಯಾರಿಗೆ ಯಾರು ಗುರಿ ಇಟ್ಟವರೆ ಅಂತ ತಿಳಕಣದು ಹ್ಯಂಗೆ?’ ನನ್ನ ಪ್ರಶ್ನೆ ಮುಂದಿಟ್ಟೆ.</p>.<p>‘ದುಡ್ಡಸ್ತರು ಏನೇನೋ ಹುನ್ನಾರು ಮಾಡಿಕ್ಯತ್ತರೆ ನಮಗ್ಯಾಕೆ ಬುಡ್ಲಾ. ಐನಾತಿ ಪಾರಿನ್ ಕುಳಗಳು ಬೆಂಗಳೂರಿಗೆ ಬಂದು ಪೆಡ್ಲು ಹೊಡಕಂದು ಡ್ರಗ್ ಹಂಚ್ತಾ ನಮ್ಮ ಹುಡ್ಲುಗೆಲ್ಲಾ ಡ್ರಗ್ಗು ಪಾಟಾಗಿಸಿ ಬಾಳಗೆಡಸ್ತಾವೆ. ಈ ಡ್ರಗ್ಗಿಸ್ಟುಗಳುನ್ನೆಲ್ಲಾ ಯಂಗೆ ಬಲಿ ಹಾಕದು?’ ತುರೇಮಣೆ ವಿಚಾರ ಮಂಡಿಸಿದರು.</p>.<p>‘ಜಂಬರ ಇಲ್ದಿರೋ ಇಂತೇ ಮನಿಯಾಳರನೆಲ್ಲಾ ವಾಪಸ್ ಅವರ ದೇಸಕ್ಕೆ ಕಳುಗಿಸಕ್ಕೆ ಮುಂಚೆ ಜೈಲಗಿಟ್ರೆ ಕಾಣದಂಗೆ ಕದ್ದು ಹೋತವಂತೆ. ಇವುಕ್ಕೆ ಕುತ್ತಿಗೆ ಮ್ಯಾಲೆ ಮಿದ್ದು ವಾಪಾಸ್ ಗದುಮಬೇಕು’ ನಾನು ಸಿಟ್ಟಲ್ಲಿ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಕೋಗಿಲು ಕಾಡಿದೆ ಕೇಳಿದೆಯಾ, ಹೊಸ ಫ್ಲಾಟನು ಕೇಳಿದೆ ನೋಡಿದೆಯಾ?’ ತಿಪ್ಪಣ್ಣ ಹಾಡಿಕ್ಯಂದು ನನ್ನ ಮೂತಿಗೆ ತಿವೀತಿದ್ದ.</p>.<p>‘ಸುಮ್ಮಗಿರ್ಲಾ ಅಣ್ತಮ್ಮ. ಯಾವುದನ್ನ ದೊಂಬಿ ಯಾಟದ ಹಾಡು ಹೇಳದು ಬುಟ್ಟು ಇದೇನಿದು’ ಅಂತಂದೆ.</p>.<p>‘ಕಂಗ್ರಾಜುಲೇಸನ್ ಡಾನು, ಇದೇ ನೋಡು ನನ್ನ ಪ್ಲಾನು. ಬ್ಯಾನರು ಬಳ್ಳಾರಿ ಬ್ಯಾನರು ಬಳ್ಳಾರಿ’ ಅಂತ ಹಾಡಿಕ್ಯಂದು ಮಗ್ಗುಲಗೆ ಕೂಕಂದ.</p>.<p>‘ಜಮೀರಣ್ಣ ಏನೋ ಮಾಡ್ತೀನಿ ಅಂತ ಕಡೆದೋಗಿದ್ನಲ್ಲಾ ಏನಾತ್ರೋ?’ ಯಂಟಪ್ಪಣ್ಣ ವಿಚಾರಿಸಿತು.</p>.<p>‘ಜಮೀರಣ್ಣ ಸ್ಯಾನೆ ದಿಲ್ದಾರ್ ಕನಣೈ. ಕೋಗಿಲುಗಳಿಗೂ ಗೂಡು ಮಾಡಿಕೊಡ್ತೀವಿ ಅಂದದೆ. ಬಳ್ಳಾರಿ ಉಸ್ತುವಾರಿ ಜಮೀರಣ್ಣನೇ ಅಲ್ಲುವೇ? ದೊಂಬೀಲಿ ಜೀವ ಬುಟ್ಟ ಪಾಪದ ಕಾರ್ಯಕರ್ತನಿಗೆ ಇಸ್ಲಾಂ ಬೋರ್ಡಿಂದ ಮನೆ ಕಟ್ಟಿಸಿಕೊಡ್ತೀನಿ ಅಂದವ್ನೆ’ ತಿಪ್ಪಣ್ಣ ಸುದ್ದಿ ಕೊಟ್ಟ.</p>.<p>‘ತಿಪ್ಪಣ್ಣ ವಸಿ ಸುಮ್ಮಗಿರು. ನೀನು ಯಾವ್ಯಾವುದನ್ನೋ ಎಲ್ಲೆಲ್ಲಿಗೋ ಸಿಗೇ ಹಾಕಬ್ಯಾಡ. ಅದು ಇಸ್ಲಾಂ ಬೋರ್ಡಲ್ಲ. ಸ್ಲಂ ಬೋರ್ಡು’ ತುರೇಮಣೆ ತಿದ್ದಿದರು.</p>.<p>‘ಏನೋ ಆಗದು ಅಗೋತು. ಈಗ ದಿಟವಾದ ಕೋಗಿಲೆಗಳು ಯಾರು? ಬಳ್ಳಾರೀಲಿ ಸತ್ತೋನಿಗೆ ಗುಂಡಾಕಿದ್ದು ಯಾರು? ಯಾರಿಗೆ ಯಾರು ಗುರಿ ಇಟ್ಟವರೆ ಅಂತ ತಿಳಕಣದು ಹ್ಯಂಗೆ?’ ನನ್ನ ಪ್ರಶ್ನೆ ಮುಂದಿಟ್ಟೆ.</p>.<p>‘ದುಡ್ಡಸ್ತರು ಏನೇನೋ ಹುನ್ನಾರು ಮಾಡಿಕ್ಯತ್ತರೆ ನಮಗ್ಯಾಕೆ ಬುಡ್ಲಾ. ಐನಾತಿ ಪಾರಿನ್ ಕುಳಗಳು ಬೆಂಗಳೂರಿಗೆ ಬಂದು ಪೆಡ್ಲು ಹೊಡಕಂದು ಡ್ರಗ್ ಹಂಚ್ತಾ ನಮ್ಮ ಹುಡ್ಲುಗೆಲ್ಲಾ ಡ್ರಗ್ಗು ಪಾಟಾಗಿಸಿ ಬಾಳಗೆಡಸ್ತಾವೆ. ಈ ಡ್ರಗ್ಗಿಸ್ಟುಗಳುನ್ನೆಲ್ಲಾ ಯಂಗೆ ಬಲಿ ಹಾಕದು?’ ತುರೇಮಣೆ ವಿಚಾರ ಮಂಡಿಸಿದರು.</p>.<p>‘ಜಂಬರ ಇಲ್ದಿರೋ ಇಂತೇ ಮನಿಯಾಳರನೆಲ್ಲಾ ವಾಪಸ್ ಅವರ ದೇಸಕ್ಕೆ ಕಳುಗಿಸಕ್ಕೆ ಮುಂಚೆ ಜೈಲಗಿಟ್ರೆ ಕಾಣದಂಗೆ ಕದ್ದು ಹೋತವಂತೆ. ಇವುಕ್ಕೆ ಕುತ್ತಿಗೆ ಮ್ಯಾಲೆ ಮಿದ್ದು ವಾಪಾಸ್ ಗದುಮಬೇಕು’ ನಾನು ಸಿಟ್ಟಲ್ಲಿ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>