ಸ್ವಚ್ಛಂದದ ಸ್ವಾತಂತ್ರ್ಯದ ಬಾಲ್ಯ
ಕಳೆದುಕೊಂಡ ಪುಟ್ಟ ಪುಟ್ಟ ಮಕ್ಕಳು
ಬಲಿಬಿದ್ದವು ಯಾರುಯಾರದೋ
ಸ್ವಾರ್ಥದ ಪಂಜರಕೆ
ಎಲ್ಲಿ ಹೋಯಿತು ಆ ಪುಟ್ಟ ಹಕ್ಕಿಗಳ ಕಲರವ?
ಮರೆಯಾದವೇ ಕನಸುಗಣ್ಣುಗಳ ಹಿಂದೆ?
ರಕ್ಷಣೆಗೆ ಹೊರಟ ಈ ಮಹಾತ್ಮ ಸತ್ಯಾರ್ಥಿ
ಇಂದೋ ನಾಳೆಯೋ ಕೇಳಸಿಗುವುದೇ
ಮಕ್ಕಳ ಕಲರವ?
ಕಾಣಸಿಗುವುದೇ ಪಕ್ಷಿಗಳ ಹಿಂಡು?
ದಣಿಯುವ ಬಿಸಿಲಲ್ಲೂ
ಧೋಯೆಂದು ಸುರಿಯುವ ಮಳೆಯಲ್ಲೂ
ಕೊರೆಯುವ ಚಳಿಯಲ್ಲೂ
ಎದೆಗುಂದದೆ ನಡೆದನೀತ
ಮಕ್ಕಳ ಹಕ್ಕುಗಳಿಗಾಗಿ ಅಭ್ಯುದಯಕಾಗಿ
ಹೋರಾಡಿದನೀತ ಸತ್ಯಾರ್ಥಿ ತ್ಯಾಗಿ
ಮೋಡ ಕರಗಿದ ಆಗಸ,
ಮಳೆ ತೊಳೆದ ಇಳೆ
ದುಃಖದ ಹಿಂದೆ ಸುಖ
ಕತ್ತಲೆಯ ಹಿಂದೆ ಬೆಳಕು
ಇದುವೇ ಜೀವನದ ಸತ್ಯ
ಸತ್ಯಾರ್ಥಿಯ ಧ್ಯೇಯಪಥ!