ಗಾಂಧಿ, ಅಂಬೇಡ್ಕರ್, ಬೇಂದ್ರೆ, ಕುವೆಂಪು, ಗೋವಿಂದ ಪೈ… ಹೀಗೆ ಇಲ್ಲಿ ಮೇಳೈಸಿರುವ ಸಾಧಕರ ಪಟ್ಟಿ ದೊಡ್ಡದಿದೆ. ಹಾಗೆಯೇ ಪತ್ತಾರರು ಯಾರ ಕುರಿತು ಬೇಕಾದರೂ ಪದ್ಯ ಬರೆಯಬಲ್ಲರು ಎನ್ನುವುದಕ್ಕೂ ಉದಾಹರಣೆಗಳು ಇಲ್ಲಿವೆ. ಇವರೆಲ್ಲ ಹೇಗೆ ಈಕಾವ್ಯಮಾಲೆಯಲ್ಲಿ ಒಂದಾದರು ಎಂಬ ಪ್ರಶ್ನೆ ಕಾಡುತ್ತದೆ. ವ್ಯಕ್ತಿಯ ಆಯ್ಕೆಯ ಮಾನದಂಡ ಕೂಡ ಮುಖ್ಯ ಎಂದು ಬರಗೂರು ರಾಮಚಂದ್ರಪ್ಪ ಅವರು ಮುನ್ನುಡಿಯಲ್ಲಿ ಹೇಳಿರುವುದು ಸರಿಯಾಗಿಯೇ ಇದೆ.