<p>ಹಸೆ ಚಿತ್ತಾರವೆಂಬ ಕಲಾ ಪ್ರಕಾರವೊಂದು ಮಲೆನಾಡಿನ ಅಂಚಿನ ಸಮುದಾಯಗಳಲ್ಲಿ ಹಾಸು ಹೊಕ್ಕಾಗಿದೆ. ಸಾವಿರಾರು ವರ್ಷಗಳ ಬೆಟ್ಟಗಳ ಗುಹೆಗಳಲಿ, ಬಂಡೆಗಳ ಮೇಲೆ ಮೈದಳೆದುನಿಂತಿರುವ ಪ್ರಾಚೀನ ಮಾನವರ ಚಿತ್ತಾರದ ಮುಂದುವರಿದ ರೂಪವೇ ಈ ಹಸೆ ಚಿತ್ತಾರ.</p>.<p>ಮಲೆನಾಡಿನ ದೀವರೂ ಸೇರಿದಂತೆ ಆದಿಮ ಸಮುದಾಯಗಳ ಮದುವೆ ಸಮಾರಂಭದ ವೇಳೆ ಬರೆಯುವ ಈ ಚಿತ್ತಾರವು ಕೇವಲ ಚಿತ್ತಾರವಾಗಿ ಉಳಿಯದೆ ಅವರ ಬದುಕಿನ ವೈವಿದ್ಯಮಯ ಸಂತೋಷ ಹಾಗೂ ಸಂಕಟ, ಹಸಿವು, ವರ್ಣರಂಜಿತ ಬದುಕಿನ ಅಭಿವ್ಯಕ್ತಿಯಾಗಿ ಕಾಣುತ್ತದೆ.</p>.<p>ಆಧುನಿಕತೆಯ ಕಾಲದಲ್ಲಿ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಇಂತಹ ಕಲೆಯ ಕುರಿತು ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಮೋಹನಚಂದ್ರಗುತ್ತಿ ಅತ್ಯಂತ ಆಳವಾದ ಅಧ್ಯಯನವನ್ನು ಮಾಡಿ ಈ ಕೃತಿಯನ್ನು ಹೊರತಂದಿದ್ದಾರೆ.</p>.<p>ಹತ್ತುವರ್ಷಗಳ ನಿರಂತರ ಸಂಶೋಧನೆಯ ಫಲವೇ ಈ ಕೃತಿ. ಆದಿಮ ಕಾಲ ಪರಂಪರೆಯ ಬೇರುಗಳಿಂದ ಹಿಡಿದು ಆಧುನಿಕ ಸಂದರ್ಭದಲ್ಲಿ ಉಂಟಾಗಿರುವ ಪಲ್ಲಟಗಳನ್ನೂ ಈ ಕೃತಿಯಲ್ಲಿ ವಿವರಿಸಿದ್ದಾರೆ. ಇದರ ಜತೆಗೆ ಕಲಾವಿದರನ್ನೂ ಪರಿಚಯ ಮಾಡಿಕೊಟ್ಟಿದ್ದಾರೆ. ಕಲಾವಿದರ ಸೂಚಿಯನ್ನು ನೀಡುವುದರ ಮೂಲಕ ಸಮುದಾಯದ ಸಂಕಥನವಾಗಿ ಈ ಕೃತಿ ಮೂಡಿಬಂದಿದೆ.</p>.<p>ಚಿತ್ತಾರವೊಂದು ಆದಿಮ ಕಾಲದಲ್ಲಿ ತಾಂತ್ರಿಕವಾಗಿ ಬಳಕೆಯಾಗುತ್ತಿದ್ದುದರಿಂದ ಹಿಡಿದು ಇತ್ತೀಚಿನ ಭಿನ್ನ ರೀತಿಯ ಅನುಸಂದಾನವನ್ನು ಈ ಕೃತಿಯಲ್ಲಿ ತಾರ್ಕಿಕವಾಗಿ ಮಂಡಿಸಲಾಗಿದೆ. ಸಂಶೋಧನಾ ವಿಧ್ಯಾರ್ಥಿಗಳಿಗೆ ಎಷ್ಟು ಉಪಯುಕ್ತವೋ ಕಲಾವಿದರಿಗೂ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ಬರೆದಿರುವುದು ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ.</p>.<p>ಹಸೆ ಚಿತ್ತಾರ </p><p>ಲೇ: ಡಾ.ಮೋಹನ್ ಚಂದ್ರಗುತ್ತಿ </p><p>ಪ್ರ: ಸುವ್ವಿ ಪ್ರಕಾಶನ </p><p> ಸಂ: 9480544099</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಸೆ ಚಿತ್ತಾರವೆಂಬ ಕಲಾ ಪ್ರಕಾರವೊಂದು ಮಲೆನಾಡಿನ ಅಂಚಿನ ಸಮುದಾಯಗಳಲ್ಲಿ ಹಾಸು ಹೊಕ್ಕಾಗಿದೆ. ಸಾವಿರಾರು ವರ್ಷಗಳ ಬೆಟ್ಟಗಳ ಗುಹೆಗಳಲಿ, ಬಂಡೆಗಳ ಮೇಲೆ ಮೈದಳೆದುನಿಂತಿರುವ ಪ್ರಾಚೀನ ಮಾನವರ ಚಿತ್ತಾರದ ಮುಂದುವರಿದ ರೂಪವೇ ಈ ಹಸೆ ಚಿತ್ತಾರ.</p>.<p>ಮಲೆನಾಡಿನ ದೀವರೂ ಸೇರಿದಂತೆ ಆದಿಮ ಸಮುದಾಯಗಳ ಮದುವೆ ಸಮಾರಂಭದ ವೇಳೆ ಬರೆಯುವ ಈ ಚಿತ್ತಾರವು ಕೇವಲ ಚಿತ್ತಾರವಾಗಿ ಉಳಿಯದೆ ಅವರ ಬದುಕಿನ ವೈವಿದ್ಯಮಯ ಸಂತೋಷ ಹಾಗೂ ಸಂಕಟ, ಹಸಿವು, ವರ್ಣರಂಜಿತ ಬದುಕಿನ ಅಭಿವ್ಯಕ್ತಿಯಾಗಿ ಕಾಣುತ್ತದೆ.</p>.<p>ಆಧುನಿಕತೆಯ ಕಾಲದಲ್ಲಿ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಇಂತಹ ಕಲೆಯ ಕುರಿತು ಶಿವಮೊಗ್ಗ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಮೋಹನಚಂದ್ರಗುತ್ತಿ ಅತ್ಯಂತ ಆಳವಾದ ಅಧ್ಯಯನವನ್ನು ಮಾಡಿ ಈ ಕೃತಿಯನ್ನು ಹೊರತಂದಿದ್ದಾರೆ.</p>.<p>ಹತ್ತುವರ್ಷಗಳ ನಿರಂತರ ಸಂಶೋಧನೆಯ ಫಲವೇ ಈ ಕೃತಿ. ಆದಿಮ ಕಾಲ ಪರಂಪರೆಯ ಬೇರುಗಳಿಂದ ಹಿಡಿದು ಆಧುನಿಕ ಸಂದರ್ಭದಲ್ಲಿ ಉಂಟಾಗಿರುವ ಪಲ್ಲಟಗಳನ್ನೂ ಈ ಕೃತಿಯಲ್ಲಿ ವಿವರಿಸಿದ್ದಾರೆ. ಇದರ ಜತೆಗೆ ಕಲಾವಿದರನ್ನೂ ಪರಿಚಯ ಮಾಡಿಕೊಟ್ಟಿದ್ದಾರೆ. ಕಲಾವಿದರ ಸೂಚಿಯನ್ನು ನೀಡುವುದರ ಮೂಲಕ ಸಮುದಾಯದ ಸಂಕಥನವಾಗಿ ಈ ಕೃತಿ ಮೂಡಿಬಂದಿದೆ.</p>.<p>ಚಿತ್ತಾರವೊಂದು ಆದಿಮ ಕಾಲದಲ್ಲಿ ತಾಂತ್ರಿಕವಾಗಿ ಬಳಕೆಯಾಗುತ್ತಿದ್ದುದರಿಂದ ಹಿಡಿದು ಇತ್ತೀಚಿನ ಭಿನ್ನ ರೀತಿಯ ಅನುಸಂದಾನವನ್ನು ಈ ಕೃತಿಯಲ್ಲಿ ತಾರ್ಕಿಕವಾಗಿ ಮಂಡಿಸಲಾಗಿದೆ. ಸಂಶೋಧನಾ ವಿಧ್ಯಾರ್ಥಿಗಳಿಗೆ ಎಷ್ಟು ಉಪಯುಕ್ತವೋ ಕಲಾವಿದರಿಗೂ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ಬರೆದಿರುವುದು ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ.</p>.<p>ಹಸೆ ಚಿತ್ತಾರ </p><p>ಲೇ: ಡಾ.ಮೋಹನ್ ಚಂದ್ರಗುತ್ತಿ </p><p>ಪ್ರ: ಸುವ್ವಿ ಪ್ರಕಾಶನ </p><p> ಸಂ: 9480544099</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>