‘ಶತದಳ ಪದ್ಮ–ನೆನಪಿನ ಗೋಪುರಕ್ಕೊಂದು ಕಲಶ’ ಎಂಬ ಕೃತಿಯ ಪ್ರಾರಂಭಿಕ ಲೇಖನದಲ್ಲಿ ಬಿ.ಎ.ವಿವೇಕ್ ರೈ ಅವರು ಪದ್ಮಾವತಿ ಶಿವರಾಮ ರಾವ್ ಅವರ ಕಿರುಪರಿಚಯ ಮಾಡಿಕೊಟ್ಟಿದ್ದಾರೆ. ಅವರು ಹರಿಕಥೆಯ ರಂಗಕ್ಕೆ ಪ್ರವೇಶಿಸಿದ್ದು, ಅದರಲ್ಲಿ ಮಾಡಿದ ಪ್ರಯೋಗಗಳು, ಅವರ ಕುರಿತು ಮೂಡಿಬಂದ ಸಂದರ್ಶನಗಳ ಮೆಲುಕು ಈ ಲೇಖನದಲ್ಲಿ ಸಿಗುತ್ತವೆ.