ಕೃತಿಯಲ್ಲಿ ಮಲೆನಾಡಿನ ಹಸಿರು, ತರಕಾರಿಗಳು, ಕೃಷಿ ಪರಿಕರಗಳು, ಜಾನುವಾರುಗಳು ಎಲ್ಲವೂ ಮಾತನಾಡಿವೆ. ಹಲವೆಡೆ ಸ್ವಗತದ ರೂಪದಲ್ಲಿ, ಸುಮ್ಮನೆ ಇರುವಿಕೆಯ ರೂಪದಲ್ಲಿ ಧ್ವನಿ ಎತ್ತಿವೆ. ಶಿವಕುಮಾರ, ತನಿಯ ಪಾತ್ರಗಳು ಬಹುಶಃ ಲೇಖಕರು ತಾವು ಹತ್ತಿರದಲ್ಲಿ ಕಂಡು, ಅನುಭವಿಸಿದಂತಿವೆ. ಹಲವು ಸಂಕಷ್ಟಗಳಿಂದ ಮೇಲೆದ್ದು ಬಂದು ಶಿವಾನಂದರು ಈ ಕಾದಂಬರಿಯ ಮೂಲಕ ಮತ್ತೆ ಪುಟಿದೆದ್ದಿದ್ದಾರೆ. ಅದೇ ಕಸುವು ತುಂಬಿಕೊಂಡಿದ್ದಾರೆ.