ಕೃತಿಯಲ್ಲಿನ ‘ಗಂಧಕ್ಕೊಂದು ಬರೆ’, ‘ಬಿಳಲು ಬೇರು’, ‘ಸದ್ಗತಿ’, ‘ಉಡಾಳ ಬಸ್ಯಾನ ಖೂನಿ’ ಮೊದಲಾದ ಕಥೆಗಳು ಇದಕ್ಕೆ ಸಾಕ್ಷ್ಯ ಒದಗಿಸುತ್ತವೆ ಜೀವನಾನುಭವ, ಬದುಕಿನಲ್ಲಿ ಕಣ್ಣೆದುರಿಗೆ ಗ್ರಹಿಕೆಗೆ ಬಂದ ವಿಷಯಾಧಾರಿತ ಕಥೆಗಳು, ಓದುಗನಿಗೂ ಹತ್ತಿರವಾಗುತ್ತವೆ. ಗ್ರಾಮ್ಯ ಭಾಷೆ, ಸರಳವಾದ ನಿರೂಪಣಾ ಶೈಲಿ ಇಲ್ಲಿನ ಕಥೆಗಳ ವೈಶಿಷ್ಟ್ಯ.