ಲೋಕದ ಜನರಿಗಿರುವ ಪಾಪ, ಪುಣ್ಯ, ಸ್ವರ್ಗ, ನರಕದ ಮೂಲಭೂತ ಪ್ರಶ್ನೆಗಳ ಕುರಿತು, ಕಳ್ಳಸ್ವಾಮಿ ಸುಳ್ಳಾಶ್ರಮದ ಕುರಿತು, ಕೋಮುಗಲಭೆಯ ಕುರಿತು, ಪೂಜಾರಿಗಳ ಕುರಿತು ಈ ನಾಟಕದ ಅಂಕಗಳು ಮಾತನಾಡುತ್ತವೆ. ಮಠದ ಪೀಠಾಧಿಪತಿ ಬಡಂಗ ಬಾಬಾನನ್ನು ಭಕ್ತೆಯೊಬ್ಬಳು ‘ಆ ಮಠಾ ಮಣ್ಣಾಗಿಟ್ಟು, ಈ ಮಠಾ ಮುಳುಗಿಸೋಕೆ ಬಂದಿದೀಯೇನೋ ಮುಠ್ಠಾಳಾ’ ಎಂದು ಕೇಳುವ ಪ್ರಸಂಗ ಭಲೇ ಮಜವಾಗಿದೆ. ಸಂಭಾಷಣೆಗಳ ಚುರುಕುತನ ಗಮನಸೆಳೆಯುತ್ತದೆ.