<p>ಬೆಂಗಳೂರು ಲಲಿತಕಲಾ ಪರಿಷತ್ನ 750ನೇ ಕಾರ್ಯಕ್ರಮದಲ್ಲಿ ಹಾಡಿದ ಆರ್.ಕೆ. ಪದ್ಮನಾಭ ಸುಪರಿಚಿತರು. `ಸರಸೀ ವರ್ಣ~ದಿಂದ ಪ್ರಾರಂಭಿಸಿ, ಗಂಭೀರ ಕೃತಿ ಶ್ರೀವರಲಕ್ಷ್ಮೀ ತೆಗೆದುಕೊಂಡರು. `ರಾಮ ಎಂಬ~ ಒಂದು ಅರ್ಥಪೂರ್ಣ ದೇವರನಾಮ. `ಮಾಕೇಲರಾ~ ಗತ ಮಧುರ ಸ್ಮೃತಿಗಳನ್ನು ತಂದಿತು. <br /> <br /> ಪ್ರಧಾನವಾಗಿ ವಿಸ್ತರಿಸಿದ ಕೋಸಲ 71ನೇ ಮೇಳಕರ್ತ ರಾಗ. ಮಂದ್ರದಿಂದ ಪ್ರಾರಂಭಿಸಿ, ಕ್ರಮೇಣ ಮಧ್ಯಸ್ಥಾಯಿಗೆ ಬಂದು, ತಾರಸ್ಥಾಯಿಯಲ್ಲಿ ಸಂಚರಿಸಿ, ರಾಗಕ್ಕೆ ಪೂರ್ಣತ್ವ ನೀಡಿದರು. <br /> <br /> ತಮ್ಮ ಸ್ವಂತ ರಚನೆ `ವಿಶ್ವವೇ ವೀಣೆ~ಗೆ ನೆರವಲ್ (ವೀಣೆಯ ನುಡಿಸಿದರೆ), ಸ್ವರ ಸೇರಿಸಿ ಭರ್ಜರಿಯಾಗಿ ಹಾಡಿದರು. ನುರಿತ ಪಕ್ಕವಾದ್ಯಗಾರರಾದ ಆರ್.ಕೆ. ಶ್ರೀರಾಂಕುಮಾರ್ ಮತ್ತು ಅರುಣ ಪ್ರಕಾಶ್ ಅವರು ಪಿಟೀಲು, ಮೃದಂಗಗಳಲ್ಲಿ ಒತ್ತಾಸೆ ನೀಡಿದರೆ, ಖಂಜರಿಯಲ್ಲಿ ಜಿ. ಗುರುಪ್ರಸನ್ನ ನೆರವಾದರು.<br /> <br /> <strong>ಲಾಲಿತ್ಯದ ಲಲಿತ ಸಂಗೀತ</strong><br /> ಮಲ್ಲೆೀಶ್ವರದ ಎಲ್ಲಪ್ಪನ ತೋಟದ ಯುವ ಗೆಳೆಯರ ಕೂಟ `ಗಾರ್ಡನ್ ಯೂತ್ ಫ್ರೆಂಡ್ಸ್ ಅಸೋಸಿಯೇಷನ್~ ತನ್ನ ಆರನೇ ವಾರ್ಷಿಕೋತ್ಸವ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧೆ, ಧಾರ್ಮಿಕ ಪೂಜೆ, ಮೆರವಣಿಗೆ ಮುಂತಾದ ವುಗಳನ್ನು ಸಡಗರ, ಸಂಭ್ರಮಗಳಿಂದ ಆಚರಿಸಿತು. <br /> <br /> ಇಲ್ಲಿ ಲಲಿತ ಸಂಗೀತ ಹಾಡಿದ ಸ್ನೇಹಲತಾ ಅವರು ಕರ್ನಾಟಕದ ಹರಿದಾಸರುಗಳಲ್ಲದೆ ಸೂರ್ದಾಸ್ ಮುಂತಾದ ಸಂತರು ಹಾಗೂ ಕನ್ನಡದ ಪ್ರಸಿದ್ಧ ಕವಿಗಳ ಭಾವಗೀತೆಗಳಿಂದ ಕೇಳುಗರನ್ನು ಸಂತೋಷಗೊಳಿಸಿದರು. <br /> <br /> ಜನಪ್ರಿಯ ಪದ `ನಮ್ಮಮ್ಮ ಶಾರದೆ~ಯಿಂದ ಶುಭವಾಗಿ ಗಾಯನ ಪ್ರಾರಂಭಿಸಿ `ಶ್ರೀಮನ್ ನಾರಾಯಣ~ದಿಂದ ಮುಂದುವರೆಸಿದರು.<br /> <br /> ದಾಸರ `ರಂಗ ಬಂದ ಮನೆಗೆ~ ಮತ್ತು `ಗೋವಿಂದ ನಿನ್ನಯ ನಾಮವೆ ಚೆಂದ~ ಎರಡೂ ಕೇಳುಗರಿಗೆ ಎಂದೂ ಪ್ರಿಯವಾದ ದೇವರನಾಮಗಳು. `ಹೇ ಗೋವಿಂದ, ಗೋವರ್ಧನ ಗಿರಿಧಾರಿ, ಬೃಂದಾವನಕೆ ಹಾಲನು ಮಾರಲು~ ಹೀಗೆ ಒಂದಾದ ಮೇಲೊಂದರಂತೆ ಕನ್ನಡ ಕೃತಿಗಳು ಸಭೆಯಲ್ಲಿ ಮಾರ್ದನಿಗೊಂಡವು. <br /> <br /> ಪಿಟೀಲಿನಲ್ಲಿ ಟಿ.ಕೆ. ದ್ವಾರಕಾನಾಥ್, ಕೀ ಬೋರ್ಡ್ನಲ್ಲಿ ಶ್ರೀನಿವಾಸ್ ಹಾಗೂ ಮೃದಂಗದಲ್ಲಿ ಗಣೇಶ್ ನೆರವಾದರು. ಕಥಕ್ನ ಕಂಪು, ಒಡಿಸ್ಸಿಯ ಒನಪು<br /> ಬೆಂಗಳೂರು ಅಂತರರಾಷ್ಟ್ರೀಯ ಕಲಾ ಮಹೋತ್ಸವದಲ್ಲಿ ನಡೆದ ಎರಡೂ ನೃತ್ಯ ಕಾರ್ಯಕ್ರಮಗಳು ಬೆಡಗಿನಿಂದ ಕೂಡಿದ್ದವು.<br /> <br /> ಮೊದಲಿಗೆ ಒಡಿಸ್ಸಿ ನೃತ್ಯ ಮಾಡಿದ ಅರುಣಾ ಮೊಹಂತಿ ಅವರ ತಂಡ ಜಗನ್ನಾಥ ಉತ್ಸವವನ್ನು ಆಧರಿಸಿದ ನೃತ್ಯ ರೂಪಕ ಆರಿಸಿತು. ರಥೋತ್ಸವದ ಸಿದ್ಧತೆ, ವಿಧಿ-ವಿಧಾನ, ಸಂಭ್ರಮ-ಉತ್ಸಾಹಗಳ ವಿವಿಧ ಆಚರಣೆಗಳನ್ನು ನರ್ತಕರ ಒಂದು ದೊಡ್ಡ ತಂಡವೇ ಮಾಡಿತು. <br /> <br /> ವಂದೇ ಮಾತರಂ ನಲ್ಲಿ ಭಾರತ ಮಾತೆಯಿಂದ ಪ್ರಾರಂಭಿಸಿ ಉತ್ಕಲದ ವೈಭವವನ್ನು ಕಣ್ಣಿಗೆ ಕಟ್ಟಿದರು. ಧ್ವನಿಮುದ್ರಿತ ಸಂಗೀತ ಪದೇ ಪದೇ ಕೆಟ್ಟು ರಸಭಂಗವಾಗುತ್ತಿತ್ತು. ನೃತ್ಯಕ್ಕಿಂತ ನಾಟಕ, ಮೈಮ್ಗಳೇ ಮುಂದಾಗಿದ್ದವು!<br /> <br /> ಎರಡನೆಯದಾಗಿ ಕಥಕ್ ಆಧರಿಸಿದ ನತ್ಯ ರೂಪಕಗಳನ್ನು ಮಾಡಿದ ದೃಷ್ಟಿಕೋನ್ ಡಾನ್ಸ್ ಫೌಂಡೇಷನ್ ಹೊಸ ಆಯಾಮವನ್ನೇ ತೆರೆದಿಟ್ಟಿತು. <br /> <br /> ಮನುಷ್ಯನ ಶೋಧ-ತಡಕಾಟಗಳು ನಿರಂತರ! ಈ ವಸ್ತುವಿನ ಕಾವ್ಯಕ್ಕೆ ಮೂರ್ತರೂಪ ಕೊಡುವ ಪ್ರಯತ್ನದಲ್ಲಿ ದೀಪ ಬೆಳಗುತ್ತಾ ಸಾಗಿದ ಕಲಾವಿದರು, ರಭಸದ ಚಕ್ಕರ್ಗಳನ್ನು ಹಾಕುತ್ತಾ ವಿವಿಧ ಭಾವಗಳನ್ನು ಬಿಂಬಿಸಿದರು. <br /> <br /> ಉಡುಗೆ, ಬೆಳಕು, ಹೆಜ್ಜೆ, ಸಂಗೀತಗಳೆಲ್ಲವೂ ವಸ್ತುವಿಗೆ ಪೂರಕವಾಗಿ ಹೊಮ್ಮಿದ್ದು, ನಿರ್ದೇಶಕಿ ಅದಿತಿ ಮಂಗಳದಾಸ್ ಅವರ ಪ್ರತಿಭೆ, ಅನುಭವಗಳಿಗೆ ಸಾಕ್ಷಿಯಾಗಿತ್ತು.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು ಲಲಿತಕಲಾ ಪರಿಷತ್ನ 750ನೇ ಕಾರ್ಯಕ್ರಮದಲ್ಲಿ ಹಾಡಿದ ಆರ್.ಕೆ. ಪದ್ಮನಾಭ ಸುಪರಿಚಿತರು. `ಸರಸೀ ವರ್ಣ~ದಿಂದ ಪ್ರಾರಂಭಿಸಿ, ಗಂಭೀರ ಕೃತಿ ಶ್ರೀವರಲಕ್ಷ್ಮೀ ತೆಗೆದುಕೊಂಡರು. `ರಾಮ ಎಂಬ~ ಒಂದು ಅರ್ಥಪೂರ್ಣ ದೇವರನಾಮ. `ಮಾಕೇಲರಾ~ ಗತ ಮಧುರ ಸ್ಮೃತಿಗಳನ್ನು ತಂದಿತು. <br /> <br /> ಪ್ರಧಾನವಾಗಿ ವಿಸ್ತರಿಸಿದ ಕೋಸಲ 71ನೇ ಮೇಳಕರ್ತ ರಾಗ. ಮಂದ್ರದಿಂದ ಪ್ರಾರಂಭಿಸಿ, ಕ್ರಮೇಣ ಮಧ್ಯಸ್ಥಾಯಿಗೆ ಬಂದು, ತಾರಸ್ಥಾಯಿಯಲ್ಲಿ ಸಂಚರಿಸಿ, ರಾಗಕ್ಕೆ ಪೂರ್ಣತ್ವ ನೀಡಿದರು. <br /> <br /> ತಮ್ಮ ಸ್ವಂತ ರಚನೆ `ವಿಶ್ವವೇ ವೀಣೆ~ಗೆ ನೆರವಲ್ (ವೀಣೆಯ ನುಡಿಸಿದರೆ), ಸ್ವರ ಸೇರಿಸಿ ಭರ್ಜರಿಯಾಗಿ ಹಾಡಿದರು. ನುರಿತ ಪಕ್ಕವಾದ್ಯಗಾರರಾದ ಆರ್.ಕೆ. ಶ್ರೀರಾಂಕುಮಾರ್ ಮತ್ತು ಅರುಣ ಪ್ರಕಾಶ್ ಅವರು ಪಿಟೀಲು, ಮೃದಂಗಗಳಲ್ಲಿ ಒತ್ತಾಸೆ ನೀಡಿದರೆ, ಖಂಜರಿಯಲ್ಲಿ ಜಿ. ಗುರುಪ್ರಸನ್ನ ನೆರವಾದರು.<br /> <br /> <strong>ಲಾಲಿತ್ಯದ ಲಲಿತ ಸಂಗೀತ</strong><br /> ಮಲ್ಲೆೀಶ್ವರದ ಎಲ್ಲಪ್ಪನ ತೋಟದ ಯುವ ಗೆಳೆಯರ ಕೂಟ `ಗಾರ್ಡನ್ ಯೂತ್ ಫ್ರೆಂಡ್ಸ್ ಅಸೋಸಿಯೇಷನ್~ ತನ್ನ ಆರನೇ ವಾರ್ಷಿಕೋತ್ಸವ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧೆ, ಧಾರ್ಮಿಕ ಪೂಜೆ, ಮೆರವಣಿಗೆ ಮುಂತಾದ ವುಗಳನ್ನು ಸಡಗರ, ಸಂಭ್ರಮಗಳಿಂದ ಆಚರಿಸಿತು. <br /> <br /> ಇಲ್ಲಿ ಲಲಿತ ಸಂಗೀತ ಹಾಡಿದ ಸ್ನೇಹಲತಾ ಅವರು ಕರ್ನಾಟಕದ ಹರಿದಾಸರುಗಳಲ್ಲದೆ ಸೂರ್ದಾಸ್ ಮುಂತಾದ ಸಂತರು ಹಾಗೂ ಕನ್ನಡದ ಪ್ರಸಿದ್ಧ ಕವಿಗಳ ಭಾವಗೀತೆಗಳಿಂದ ಕೇಳುಗರನ್ನು ಸಂತೋಷಗೊಳಿಸಿದರು. <br /> <br /> ಜನಪ್ರಿಯ ಪದ `ನಮ್ಮಮ್ಮ ಶಾರದೆ~ಯಿಂದ ಶುಭವಾಗಿ ಗಾಯನ ಪ್ರಾರಂಭಿಸಿ `ಶ್ರೀಮನ್ ನಾರಾಯಣ~ದಿಂದ ಮುಂದುವರೆಸಿದರು.<br /> <br /> ದಾಸರ `ರಂಗ ಬಂದ ಮನೆಗೆ~ ಮತ್ತು `ಗೋವಿಂದ ನಿನ್ನಯ ನಾಮವೆ ಚೆಂದ~ ಎರಡೂ ಕೇಳುಗರಿಗೆ ಎಂದೂ ಪ್ರಿಯವಾದ ದೇವರನಾಮಗಳು. `ಹೇ ಗೋವಿಂದ, ಗೋವರ್ಧನ ಗಿರಿಧಾರಿ, ಬೃಂದಾವನಕೆ ಹಾಲನು ಮಾರಲು~ ಹೀಗೆ ಒಂದಾದ ಮೇಲೊಂದರಂತೆ ಕನ್ನಡ ಕೃತಿಗಳು ಸಭೆಯಲ್ಲಿ ಮಾರ್ದನಿಗೊಂಡವು. <br /> <br /> ಪಿಟೀಲಿನಲ್ಲಿ ಟಿ.ಕೆ. ದ್ವಾರಕಾನಾಥ್, ಕೀ ಬೋರ್ಡ್ನಲ್ಲಿ ಶ್ರೀನಿವಾಸ್ ಹಾಗೂ ಮೃದಂಗದಲ್ಲಿ ಗಣೇಶ್ ನೆರವಾದರು. ಕಥಕ್ನ ಕಂಪು, ಒಡಿಸ್ಸಿಯ ಒನಪು<br /> ಬೆಂಗಳೂರು ಅಂತರರಾಷ್ಟ್ರೀಯ ಕಲಾ ಮಹೋತ್ಸವದಲ್ಲಿ ನಡೆದ ಎರಡೂ ನೃತ್ಯ ಕಾರ್ಯಕ್ರಮಗಳು ಬೆಡಗಿನಿಂದ ಕೂಡಿದ್ದವು.<br /> <br /> ಮೊದಲಿಗೆ ಒಡಿಸ್ಸಿ ನೃತ್ಯ ಮಾಡಿದ ಅರುಣಾ ಮೊಹಂತಿ ಅವರ ತಂಡ ಜಗನ್ನಾಥ ಉತ್ಸವವನ್ನು ಆಧರಿಸಿದ ನೃತ್ಯ ರೂಪಕ ಆರಿಸಿತು. ರಥೋತ್ಸವದ ಸಿದ್ಧತೆ, ವಿಧಿ-ವಿಧಾನ, ಸಂಭ್ರಮ-ಉತ್ಸಾಹಗಳ ವಿವಿಧ ಆಚರಣೆಗಳನ್ನು ನರ್ತಕರ ಒಂದು ದೊಡ್ಡ ತಂಡವೇ ಮಾಡಿತು. <br /> <br /> ವಂದೇ ಮಾತರಂ ನಲ್ಲಿ ಭಾರತ ಮಾತೆಯಿಂದ ಪ್ರಾರಂಭಿಸಿ ಉತ್ಕಲದ ವೈಭವವನ್ನು ಕಣ್ಣಿಗೆ ಕಟ್ಟಿದರು. ಧ್ವನಿಮುದ್ರಿತ ಸಂಗೀತ ಪದೇ ಪದೇ ಕೆಟ್ಟು ರಸಭಂಗವಾಗುತ್ತಿತ್ತು. ನೃತ್ಯಕ್ಕಿಂತ ನಾಟಕ, ಮೈಮ್ಗಳೇ ಮುಂದಾಗಿದ್ದವು!<br /> <br /> ಎರಡನೆಯದಾಗಿ ಕಥಕ್ ಆಧರಿಸಿದ ನತ್ಯ ರೂಪಕಗಳನ್ನು ಮಾಡಿದ ದೃಷ್ಟಿಕೋನ್ ಡಾನ್ಸ್ ಫೌಂಡೇಷನ್ ಹೊಸ ಆಯಾಮವನ್ನೇ ತೆರೆದಿಟ್ಟಿತು. <br /> <br /> ಮನುಷ್ಯನ ಶೋಧ-ತಡಕಾಟಗಳು ನಿರಂತರ! ಈ ವಸ್ತುವಿನ ಕಾವ್ಯಕ್ಕೆ ಮೂರ್ತರೂಪ ಕೊಡುವ ಪ್ರಯತ್ನದಲ್ಲಿ ದೀಪ ಬೆಳಗುತ್ತಾ ಸಾಗಿದ ಕಲಾವಿದರು, ರಭಸದ ಚಕ್ಕರ್ಗಳನ್ನು ಹಾಕುತ್ತಾ ವಿವಿಧ ಭಾವಗಳನ್ನು ಬಿಂಬಿಸಿದರು. <br /> <br /> ಉಡುಗೆ, ಬೆಳಕು, ಹೆಜ್ಜೆ, ಸಂಗೀತಗಳೆಲ್ಲವೂ ವಸ್ತುವಿಗೆ ಪೂರಕವಾಗಿ ಹೊಮ್ಮಿದ್ದು, ನಿರ್ದೇಶಕಿ ಅದಿತಿ ಮಂಗಳದಾಸ್ ಅವರ ಪ್ರತಿಭೆ, ಅನುಭವಗಳಿಗೆ ಸಾಕ್ಷಿಯಾಗಿತ್ತು.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>