<p><strong>ಲಂಡನ್:</strong> ಪ್ರಸ್ತುತ ಆ್ಯಂಡರ್ಸನ್–ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾಗಿರುವ ಸಂಗತಿಯೆಂದರೆ ಡ್ಯೂಕ್ ಚೆಂಡಿನ ಬಳಕೆ. </p>.<p>ಸುಮಾರು 30 ಓವರ್ಗಳ ಬಳಕೆಯ ನಂತರ ಈ ಚೆಂಡು ತನ್ನ ನೈಜ ಆಕಾರ ಕಳೆದುಕೊಳ್ಳುತ್ತಿದೆ ಎಂದು ಈ ಸರಣಿಯಲ್ಲಿ ಉಭಯ ತಂಡಗಳ ಆಟಗಾರರೂ ಅಂಪೈರ್ಗಳಿಗೆ ದೂರು ನೀಡಿದ್ದಾರೆ. ಶುಕ್ರವಾರ ದಿನದಾಟದಲ್ಲಿಯೂ ಭಾರತ ತಂಡದ ನಾಯಕ ಶುಭಮನ್ ಗಿಲ್, ಬೌಲರ್ ಮೊಹಮ್ಮದ್ ಸಿರಾಜ್ ಮತ್ತಿತರರು ಚೆಂಡು ವಿರೂಪಗೊಂಡಿದ್ದು ಬದಲಿಸಬೇಕೆಂದು ಅಂಪೈರ್ ಜೊತೆ ಮಾತುಕತೆ ನಡೆಸಿದರು. </p>.<p>ಈ ಚೆಂಡನ್ನು ತಯಾರಿಸುವ ಬ್ರಿಟಿಷ್ ಕ್ರಿಕೆಟ್ ಬಾಲ್ಸ್ ಲಿಮಿಟೆಡ್ ನ ಮಾಲೀಕರಾದ ದಿಲೀಪ್ ಜಜೋಡಿಯಾ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.</p>.<p>‘ಕಾಲಮಾನಕ್ಕೆ ತಕ್ಕಂತೆ ಚೆಂಡಿನ ಗುಣಮಟ್ಟವನ್ನು ಹೆಚ್ಚಿಸುವತ್ತ ನಾವು ಬದ್ಧರಾಗಿದ್ದೇವೆ. ಹೆಚ್ಚು ತಾಪಮಾನವಿರುವ ಇಂಗ್ಲೆಂಡ್ ಬೇಸಿಗೆಯು ಚೆಂಡಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಅಲ್ಲದೇ ಬ್ಯಾಟ್ಗಳೂ ಈಗ ಹೆಚ್ಚು ಬಲಯುತವಾಗಿವೆ. ಇಂತಹದರಲ್ಲಿ 80 ಓವರ್ಗಳವರೆಗೆ ಚೆಂಡು ಬಾಳಿಕೆ ಬರುವುದು ಪವಾಡವೇ ಸರಿ‘ ಎಂದರು. ಈ ಕುರಿತು ಅವರು ಇಸಿಬಿ ಜೊತೆಗೂ ಚರ್ಚಿಸಿದ್ದಾರೆ. </p>.<p>ಅವರು ಬೆಂಗಳೂರು ಮೂಲದವರು. ಅವರು ಬಿಷಪ್ ಕಾಟನ್ ಬಾಲಕರ ಶಾಲೆಯ ಹಳೆಯ ವಿದ್ಯಾರ್ಥಿಯೂ ಹೌದು. ಭಾರತೀಯ ಮಾರುಕಟ್ಟೆಯಲ್ಲಿ ವ್ಯಾಪಾರ ವೃದ್ಧಿಗಾಗಿ ಬೆಂಗಳೂರಿನಲ್ಲಿಯೂ ಒಂದು ಕಚೇರಿ ಆರಂಭಿಸುವ ಯೋಜನೆ ರೂಪಿಸುತ್ತಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಂಡನ್:</strong> ಪ್ರಸ್ತುತ ಆ್ಯಂಡರ್ಸನ್–ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾಗಿರುವ ಸಂಗತಿಯೆಂದರೆ ಡ್ಯೂಕ್ ಚೆಂಡಿನ ಬಳಕೆ. </p>.<p>ಸುಮಾರು 30 ಓವರ್ಗಳ ಬಳಕೆಯ ನಂತರ ಈ ಚೆಂಡು ತನ್ನ ನೈಜ ಆಕಾರ ಕಳೆದುಕೊಳ್ಳುತ್ತಿದೆ ಎಂದು ಈ ಸರಣಿಯಲ್ಲಿ ಉಭಯ ತಂಡಗಳ ಆಟಗಾರರೂ ಅಂಪೈರ್ಗಳಿಗೆ ದೂರು ನೀಡಿದ್ದಾರೆ. ಶುಕ್ರವಾರ ದಿನದಾಟದಲ್ಲಿಯೂ ಭಾರತ ತಂಡದ ನಾಯಕ ಶುಭಮನ್ ಗಿಲ್, ಬೌಲರ್ ಮೊಹಮ್ಮದ್ ಸಿರಾಜ್ ಮತ್ತಿತರರು ಚೆಂಡು ವಿರೂಪಗೊಂಡಿದ್ದು ಬದಲಿಸಬೇಕೆಂದು ಅಂಪೈರ್ ಜೊತೆ ಮಾತುಕತೆ ನಡೆಸಿದರು. </p>.<p>ಈ ಚೆಂಡನ್ನು ತಯಾರಿಸುವ ಬ್ರಿಟಿಷ್ ಕ್ರಿಕೆಟ್ ಬಾಲ್ಸ್ ಲಿಮಿಟೆಡ್ ನ ಮಾಲೀಕರಾದ ದಿಲೀಪ್ ಜಜೋಡಿಯಾ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.</p>.<p>‘ಕಾಲಮಾನಕ್ಕೆ ತಕ್ಕಂತೆ ಚೆಂಡಿನ ಗುಣಮಟ್ಟವನ್ನು ಹೆಚ್ಚಿಸುವತ್ತ ನಾವು ಬದ್ಧರಾಗಿದ್ದೇವೆ. ಹೆಚ್ಚು ತಾಪಮಾನವಿರುವ ಇಂಗ್ಲೆಂಡ್ ಬೇಸಿಗೆಯು ಚೆಂಡಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಅಲ್ಲದೇ ಬ್ಯಾಟ್ಗಳೂ ಈಗ ಹೆಚ್ಚು ಬಲಯುತವಾಗಿವೆ. ಇಂತಹದರಲ್ಲಿ 80 ಓವರ್ಗಳವರೆಗೆ ಚೆಂಡು ಬಾಳಿಕೆ ಬರುವುದು ಪವಾಡವೇ ಸರಿ‘ ಎಂದರು. ಈ ಕುರಿತು ಅವರು ಇಸಿಬಿ ಜೊತೆಗೂ ಚರ್ಚಿಸಿದ್ದಾರೆ. </p>.<p>ಅವರು ಬೆಂಗಳೂರು ಮೂಲದವರು. ಅವರು ಬಿಷಪ್ ಕಾಟನ್ ಬಾಲಕರ ಶಾಲೆಯ ಹಳೆಯ ವಿದ್ಯಾರ್ಥಿಯೂ ಹೌದು. ಭಾರತೀಯ ಮಾರುಕಟ್ಟೆಯಲ್ಲಿ ವ್ಯಾಪಾರ ವೃದ್ಧಿಗಾಗಿ ಬೆಂಗಳೂರಿನಲ್ಲಿಯೂ ಒಂದು ಕಚೇರಿ ಆರಂಭಿಸುವ ಯೋಜನೆ ರೂಪಿಸುತ್ತಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>