ಟೀವಿ, ಪೇಪರ್ ಕೂಗಿದವು ದೀನ ದಲಿತರ ಬಂಧು,
ದೇಶೋದ್ಧಾರಕ, ಈತನಿಗೆ ನಿನ್ನ ಓಟು ಎಂದು.
ಅದಕ್ಕಾಗಿ ಕೋರ್ಟು ಗೊರಕೆಯಲ್ಲಿದ್ದಾಗ ಪ್ರಮಾಣವಾಯಿತು
ಮನೆ ದೇವರೆದುರು ಮತ್ತು ಪಡೆದ ಉಡುಗೊರೆಗಳ ಮೇಲೆ
ಅವರವರು ಮಾರಿಕೊಂಡಿದ್ದಕ್ಕೆ ಪುರಾವೆಯಿರಲೆಂದು!
ಪೋಸ್ಟರ್ಗಳಲ್ಲಿ ತುಟಿಗೆ ರಂಗು ಮೆತ್ತಿಕೊಂಡ ಪಿತಾಮಹರು
ನನ್ನನ್ನು ನೋಡಿ ಗಹಗಹಿಸಿದಾಗ ಕೊರಳ ಗುರುತಿನ ಚೀಟಿಯನ್ನು
ಕಿತ್ತಿ ಆಕಾಶಕ್ಕೆ ಎಸೆಯುತ್ತೇನೆ ಮತ್ತು ಅಲೆಯುತ್ತಲೇ ಇರುತ್ತೇನೆ
ಒಂದು ಓಣಿಯತ್ತ, ಊರಿನತ್ತ, ಎಲ್ಲೊ ಪಾರ್ಕಿನತ್ತ, ನಿಲ್ದಾಣದತ್ತ
ಸಿಕ್ಕ ಯಾರಾದರು ತಂದೊಪ್ಪಿಸಿ ಪ್ರಮಾಣ ಪಡೆಯಬಹುದೇ ಎಂದು!