ಆಳ–ಅಗಲ: ಸಂಪತ್ತು ಇಲ್ಲದವರಿಗೆ ಸವಲತ್ತೂ ಇಲ್ಲ
ದೇಶದಲ್ಲಿ ಸಂಪತ್ತಿನ ಹಂಚಿಕೆಯಲ್ಲಿ ಅಸಮಾನತೆ ಇದೆ. ಸಂಪತ್ತಿನ ಅಸಮಾನ ಹಂಚಿಕೆಯು, ಸವಲತ್ತುಗಳ ಹಂಚಿಕೆಯಲ್ಲಿನ ಅಸಮಾನತೆಗೂ ಕಾರಣವಾಗಿದೆ. ಕಡುಬಡವರು ಗೌರವಯುತವಾಗಿ ಜೀವನ ನಡೆಸಲು ಅಗತ್ಯವಾದ ಕನಿಷ್ಠ ಮೂಲಸೌಕರ್ಯಗಳಿಂದಲೂ ವಂಚಿತರಾಗಿದ್ದಾರೆ. ಅಂತಹ ಮೂಲ ಸೌಕರ್ಯಗಳನ್ನು ಸರ್ಕಾರವು ಒದಗಿಸಿದರೂ, ಅದು ಕಡುಬಡವರ ಕೈಗೆ ಎಟುಕುವುದಿಲ್ಲ ಎನ್ನುತ್ತದೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿ. ಸಂಪತ್ತು ಮತ್ತು ಸವಲತ್ತಿನ ಅಸಮಾನ ಹಂಚಿಕೆಯು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಭಿನ್ನವಾಗಿದೆ. ಧರ್ಮದಿಂದ ಧರ್ಮಕ್ಕೂ ಈ ವಿಚಾರದಲ್ಲಿ ಭಾರಿ ವ್ಯತ್ಯಾಸವಿದೆ ಎಂಬುದನ್ನು ಈ ವರದಿಯ ದತ್ತಾಂಶಗಳು ತೋರಿಸಿವೆLast Updated 24 ಆಗಸ್ಟ್ 2022, 19:46 IST