ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ವಿಭಜಕ ಶಕ್ತಿಗಳಿಂದ ದೇಶದ ಏಕತೆಗೆ ಸವಾಲು: ಮುಕುಂದ ಸಿ.ಆರ್‌. ಕಳವಳ

Published : 21 ಮಾರ್ಚ್ 2025, 16:13 IST
Last Updated : 21 ಮಾರ್ಚ್ 2025, 16:13 IST
ಫಾಲೋ ಮಾಡಿ
Comments
ಸಭಾ ಉದ್ಘಾಟಿಸಿದ ಭಾಗವತ್
ಮೂರು ದಿನ ನಡೆಯಲಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾವನ್ನು ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಉದ್ಘಾಟಿಸಿದರು. ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ 2024–25ನೇ ಸಾಲಿನ ವರದಿ ಮಂಡಿಸಿದರು.  ಸಂಘ ಪರಿವಾರದಲ್ಲಿ 32 ಸಂಘಟನೆಗಳಿದ್ದು ಮೂರು ದಿನಗಳಲ್ಲಿ ರಾಷ್ಟ್ರೀಯ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಸಂಘಟನಾ ಕಾರ್ಯದರ್ಶಿಗಳು ಸಂಘಟದ ಕ್ಷೇತ್ರ ಮತ್ತು ಪ್ರಾಂತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಂತಾಪ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ತುಳಸಿ ಗೌಡ ಸುಕ್ರಿ ಬೊಮ್ಮಗೌಡ ನಾ. ಡಿಸೋಜಾ ಶ್ಯಾಮ್ ಬೆನಗಲ್ ಸರಿಗಮ ವಿಜಿ ದೊರೆಸ್ವಾಮಿ ನಾಯ್ಡು ಬಿ. ಎನ್. ಮೂರ್ತಿ ಝಾಕೀರ್ ಹುಸೇನ್ ಸಹಿತ ಇತ್ತೀಚೆಗೆ ಅಗಲಿದ ವಿವಿಧ ಕ್ಷೇತ್ರಗಳ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.
ಸಂಘದ ಶಕ್ತಿ ವೃದ್ಧಿ
ಆರ್‌ಎಸ್‌ಎಸ್‌ ಕಡೆಗೆ ಯುವಜನರು ಆಕರ್ಷಿತರಾಗಿದ್ದು, ಸಂಘದ ಶಕ್ತಿ ವರ್ಧನೆ ಯಾಗುತ್ತಿದೆ. ಸ್ವಯಂ ಸೇವಕರ ಸಂಖ್ಯೆ ಒಂದು ಕೋಟಿ ದಾಟಿದೆ ಎಂದು ಸಂಘ ಹೇಳಿದೆ. ‘ಅಖಿಲ ಭಾರತೀಯ ಪ್ರತಿನಿಧಿ ಸಭಾ’ದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮಂಡಿಸಿದ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ. 14-25 ವರ್ಷ ವಯಸ್ಸಿನವರು ಸ್ವಯಂಸೇವಕ ರಾಗಿ ಸೇರುತ್ತಿದ್ದಾರೆ. ಈ ವರ್ಷ 4,415 ಪ್ರಾರಂಭಿಕ ಶಿಕ್ಷಾ ವರ್ಗಗಳು (ಆರಂಭಿಕ ತರಬೇತಿ ಶಿಬಿರ) ನಡೆದವು. 2,22,962 ಮಂದಿ ಹಾಜರಾಗಿದ್ದು ಅವರಲ್ಲಿ 1.63 ಲಕ್ಷ ಮಂದಿ 14-25ರ ವರ್ಷ ವಯಸ್ಸಿನವರು. 2012ರಿಂದ ವೆಬ್‌ಸೈಟ್ ಮೂಲಕ 12.72 ಲಕ್ಷ ಜನರು ಸಂಘ ಸೇರಲು ಆಸಕ್ತಿ ತೋರಿಸಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT