ಬತ್ತಲೆ ನೋಡುವಾಸೆ
ಈ ಶೂದ್ರ ಶೂರರಿಗೆ, ನಮ್ಮನ್ನು ಹೊಡೆದು
ಬಡಿಯುದೆಂದರೆ ಎಲ್ಲಿಲ್ಲದ ಪೌರುಷ
ಪುಲಕಿತರಾಗುತ್ತಾರೆ ಹೊಲೆ-ಮಾದಿಗರ ದೇಹ ನೋಡಿ
ಇನ್ನೇನಿದೆಯೆಂದು ಹಸಿದ ಕಂಗಳಿಂದ
ನೋಡಿ ಹಿರಿ ಹಿರಿ ಹಿಗ್ಗುತ್ತಾರೆ
ಯಾರಿಗೆ ಹೇಳುವುದು ಇದೆಲ್ಲವನ್ನು
ಕೂಡಲ ಸಂಗಮದೇವ
ನಿನಗಲ್ಲದೆ ಇನ್ನಾರಿಗೆ ವಿಜ್ಞಾಪಿಸಲಿ ಅಣ್ಣ
ನನ್ನುಸಿರಿನ ಪ್ರಸ್ತಾವನೆಯೊಂದುಳಿದಿದೆ