<p>ಷಟುಸ್ಥಲದ ಕೊನೆ ಮೆಟ್ಟಿಲು ಇನ್ನೆಷ್ಟು ದೂರವೋ?</p>.<p>ರಣರಣ ಬಿಸಿಲು: ಮುಳ್ಳೊತ್ತುವ ಕಾಡುಹಾದಿ</p>.<p>ಹಣೆಗೆ ಕೈ ಹಚ್ಚಿ ಕೀಲಿಸಿದ ಕಣ್ಣಿಗೆ ಕಂಡದ್ದು ತೂಗಾಡುವ</p>.<p>ಮಂಜು ಮುಸುಕಿನ ಬಟ್ಟಂಬಯಲು; ನಿರಾಳ ಗಾಳಿ ಬೆಳಕಿನ ಮನೆ.</p>.<p>ನೆಲದ ಕಣ್ಣಿಗೆ ಮೋಕ್ಷ ಪಕ್ಷಿ ರೆಕ್ಕೆಯಾದರೂ ಕಂಡೀತೆ ಬಸವಾ..?</p>.<p>ಬರಿದೆಗಣ್ಣಾಗ ಬಯಲಾಚೆಯಾಲಯದ ಮೇಲೆ ಗೋಪುರವೆದ್ದು</p>.<p>ಗಂಟಾನಾದ ಘಳಿಲು ಘಳಿಲೆಂದು ಷಟುಸ್ಥಲದ ಹಾದಿ ಕಂಡೀತು</p>.<p>ನಾಗರಗಳೆದ್ದು ನಮಿಸಿ ಹಾದಿ ಬಿಟ್ಟಾವು ಕಲ್ಯಾಣಕೆ."</p>.<p>ನಕ್ಕು ನುಡಿದ ನಗೆ ಅಪರಿಚಿತವಲ್ಲ: ಕೇಳೇ ಕೇಳಿದ್ದು|</p>.<p>ಮಹಾಮನೆಯ ಕೈ ಸಾಲೆಯಲಿ, ಕಸದ ರಾಶಿಯ ನಡುವೆ</p>.<p>ಶೂನ್ಯವೆಂದು ಕರೆದ ಸಿಂಹಾಸದ ಮೇಲೆ ವಿರಾಜಮಾನವಾ;</p>.<p>ಮಂಟಪದ ತೊಲೆಸಾಲುಗಳ ಗುಂಭಗಳ ಬಳಿ ನಗೆ ಹಾರಿದ್ದು</p>.<p>ನಗೆ ಬಂದ ದಿಕ್ಕು ದಿಕ್ಕುಗಳಲಿ ಬರಿದೇ ಆಡುವ ಗಾಳಿಯುಯ್ಯಾಲೆ</p>.<p>ನಿರಾಕಾರ ನಿರ್ದೇಹ ನಿರ್ಮೋಹದ ಮೋಡಿ</p>.<p>ದೃಶ್ಯಾದೃಶ್ಯಗಳ ತಲೆ ಹೊಯ್ಲು ಕಡೆತ ಕಡಲು</p>.<p>ಶಬ್ದ ನಿಶ್ಯಬ್ದ ಸೂತಕದ ಗಾಳಿ ಮರ್ಮಾಘಾತಗೊಳಿಸಿದೆ.</p>.<p>ಕುದುರೆಯಿಂದಿಳಿದು ಆಲಿಸಿದ ಬಸವನಿಗೆ ಮದ್ದಲೆಯ ಇನಿದನಿ</p>.<p>ನಿಂದರಿಯದ ಕುದುರಿ ಹಿಂದೆ ಮುಂದೆ ತಿರುಗುತಿದೆ ರಣ ರಣ</p>.<p>ಯಾವ ಮಾಯಕಾರನ ಮೋಡಿಯೋ..?</p>.<p>ಮಾದಯ್ಯ ಮಲ್ಲಯ್ಯ ಸಂಗಯ್ಯ ಮಂಟೇದಯ್ಯಾ?</p>.<p>ದುಗುಡವೆಂಬ ಸಂತೆಗೆ ಚಿಂತೆಯೆಂಬ ಸರಕಿನ ಸಾಲು ಸಾಲು</p>.<p>ಧಡಕ್ಕನೆ ಕದಳಿ ಕಂಬಗಳ ಗುಹಾಂತರದಿಂದ ಹಾವ ಹೆಡೆಯಾಡಿಸಿ</p>.<p>ಕಪಾಲ ಕೈ ಹಿಡಿದು ಕೌಪಿನ ತೊಟ್ಟ ಜೋಗಿ...</p>.<p>ಅಂಗೈ ಮುಂಗೈ ಹಿಂಗೈಗಳ ಮೇಲೆ ಘೋರ ಸರ್ಪಗಳ ಲೀಲೆ</p>.<p>ಬೆಳೆದೇ ಬೆಳೆದ ಬೆಟ್ಟದೆತ್ತರದ ಹುತ್ತಗಳ ಸಾಲು</p>.<p>ಭೋರ್ಗರೆವೆ ಸರ್ಪಸಾವಿರ ಸುಪ್ತ ಸಾಸಿರ</p>.<p>ಹುತ್ತಕೆ ಕೈ ಇಕ್ಕಿ ಸೆಳೆವ ನಾಗರಗಳ ಕೈ ಚಳಕದ ಜೋಗಿ</p>.<p>ಬಸವಳಿದ ಬಸವನ ಮುಂದೆ ಅದೇ ನಗುವನ ಕೈವಾರಿ.</p>.<p>ಹುತ್ತಕ್ಕೆ ಹೀಗೆ ಕೈ ಇಕ್ಕಿ ಸರ್ಪವ ಸೆಳೆಯ ಬಲ್ಲೆಯಾದರೆ</p>.<p>ಷಟುಸ್ಥಲದ ದಾರಿ ಕಂಡೀಯ ಇಲ್ಲವಾದರೆ ಇದ್ದೇ ಇದೆ ನಿನಗೆ</p>.<p>ಪ್ರಸಾದ, ಇಷ್ಟಲಿಂಗ ದಾಸೋಹ ತಾಳಲಾರದ ಕಿರೀಟದ ವಜ್ಜೆ</p>.<p>ಕ್ಷಿತಿಜಗಳಲಿ ಲಯವಾಗುವ ಪರಿಗೆ ಲೋಕ ನಿಬ್ಬೆರಗು.</p>.<p>ಕುದುರೆಯ ಕೈ ಬಿಟ್ಟನು ಹಾವುಗೆಯ ಕೈ ಬಿಡುವನು</p>.<p>ಕಿರೀಟದ ಹೊನ್ನಿನೊಂದೊಂದು ಎಳೆಯ ಬೀಸಾಡುವನು ಹೀಗೆ</p>.<p>ಹುತ್ತಕ್ಕೆ ಕೈ ನಿರಿಸುವನು... ಬಾಲಸಂಗಯ್ಯ ನೀಲವ್ವ</p>.<p>ಗಂಗಮಾಯಿ; ಓಂ ನಮಃ ಶಿವಾಯ ಮಂತ್ರಕ್ಕೂ ಓಸರಿಸಲಾಗದು.</p>.<p>ಶತಕಗಳುದ್ದಕ್ಕೂ ಸಾಗಿದ ಹಾದಿಯಲ್ಲಿ ಸವೆದದ್ದು ನರಮಾನವ</p>.<p>ಮಾಂಸಮಜ್ಜೆ: ಕಾಲು ಚಾಚಿ ಮಲಗಿದೆ ಹಾದಿ ಬೀದಿ ನಿರಾಳ</p>.<p>ಸತ್ಯ ಸೂತಕಗಳ ಪತ್ಯ ಅಪತ್ಯಗಳಲ್ಲಿ ಕಾಣುವುದಷ್ಟೆ ಬಿಂಬ</p>.<p>ಕನ್ನಡಿಗೆ ಕಾಣಿಸುವುದಷ್ಟೆ ಗೊತ್ತು|</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಷಟುಸ್ಥಲದ ಕೊನೆ ಮೆಟ್ಟಿಲು ಇನ್ನೆಷ್ಟು ದೂರವೋ?</p>.<p>ರಣರಣ ಬಿಸಿಲು: ಮುಳ್ಳೊತ್ತುವ ಕಾಡುಹಾದಿ</p>.<p>ಹಣೆಗೆ ಕೈ ಹಚ್ಚಿ ಕೀಲಿಸಿದ ಕಣ್ಣಿಗೆ ಕಂಡದ್ದು ತೂಗಾಡುವ</p>.<p>ಮಂಜು ಮುಸುಕಿನ ಬಟ್ಟಂಬಯಲು; ನಿರಾಳ ಗಾಳಿ ಬೆಳಕಿನ ಮನೆ.</p>.<p>ನೆಲದ ಕಣ್ಣಿಗೆ ಮೋಕ್ಷ ಪಕ್ಷಿ ರೆಕ್ಕೆಯಾದರೂ ಕಂಡೀತೆ ಬಸವಾ..?</p>.<p>ಬರಿದೆಗಣ್ಣಾಗ ಬಯಲಾಚೆಯಾಲಯದ ಮೇಲೆ ಗೋಪುರವೆದ್ದು</p>.<p>ಗಂಟಾನಾದ ಘಳಿಲು ಘಳಿಲೆಂದು ಷಟುಸ್ಥಲದ ಹಾದಿ ಕಂಡೀತು</p>.<p>ನಾಗರಗಳೆದ್ದು ನಮಿಸಿ ಹಾದಿ ಬಿಟ್ಟಾವು ಕಲ್ಯಾಣಕೆ."</p>.<p>ನಕ್ಕು ನುಡಿದ ನಗೆ ಅಪರಿಚಿತವಲ್ಲ: ಕೇಳೇ ಕೇಳಿದ್ದು|</p>.<p>ಮಹಾಮನೆಯ ಕೈ ಸಾಲೆಯಲಿ, ಕಸದ ರಾಶಿಯ ನಡುವೆ</p>.<p>ಶೂನ್ಯವೆಂದು ಕರೆದ ಸಿಂಹಾಸದ ಮೇಲೆ ವಿರಾಜಮಾನವಾ;</p>.<p>ಮಂಟಪದ ತೊಲೆಸಾಲುಗಳ ಗುಂಭಗಳ ಬಳಿ ನಗೆ ಹಾರಿದ್ದು</p>.<p>ನಗೆ ಬಂದ ದಿಕ್ಕು ದಿಕ್ಕುಗಳಲಿ ಬರಿದೇ ಆಡುವ ಗಾಳಿಯುಯ್ಯಾಲೆ</p>.<p>ನಿರಾಕಾರ ನಿರ್ದೇಹ ನಿರ್ಮೋಹದ ಮೋಡಿ</p>.<p>ದೃಶ್ಯಾದೃಶ್ಯಗಳ ತಲೆ ಹೊಯ್ಲು ಕಡೆತ ಕಡಲು</p>.<p>ಶಬ್ದ ನಿಶ್ಯಬ್ದ ಸೂತಕದ ಗಾಳಿ ಮರ್ಮಾಘಾತಗೊಳಿಸಿದೆ.</p>.<p>ಕುದುರೆಯಿಂದಿಳಿದು ಆಲಿಸಿದ ಬಸವನಿಗೆ ಮದ್ದಲೆಯ ಇನಿದನಿ</p>.<p>ನಿಂದರಿಯದ ಕುದುರಿ ಹಿಂದೆ ಮುಂದೆ ತಿರುಗುತಿದೆ ರಣ ರಣ</p>.<p>ಯಾವ ಮಾಯಕಾರನ ಮೋಡಿಯೋ..?</p>.<p>ಮಾದಯ್ಯ ಮಲ್ಲಯ್ಯ ಸಂಗಯ್ಯ ಮಂಟೇದಯ್ಯಾ?</p>.<p>ದುಗುಡವೆಂಬ ಸಂತೆಗೆ ಚಿಂತೆಯೆಂಬ ಸರಕಿನ ಸಾಲು ಸಾಲು</p>.<p>ಧಡಕ್ಕನೆ ಕದಳಿ ಕಂಬಗಳ ಗುಹಾಂತರದಿಂದ ಹಾವ ಹೆಡೆಯಾಡಿಸಿ</p>.<p>ಕಪಾಲ ಕೈ ಹಿಡಿದು ಕೌಪಿನ ತೊಟ್ಟ ಜೋಗಿ...</p>.<p>ಅಂಗೈ ಮುಂಗೈ ಹಿಂಗೈಗಳ ಮೇಲೆ ಘೋರ ಸರ್ಪಗಳ ಲೀಲೆ</p>.<p>ಬೆಳೆದೇ ಬೆಳೆದ ಬೆಟ್ಟದೆತ್ತರದ ಹುತ್ತಗಳ ಸಾಲು</p>.<p>ಭೋರ್ಗರೆವೆ ಸರ್ಪಸಾವಿರ ಸುಪ್ತ ಸಾಸಿರ</p>.<p>ಹುತ್ತಕೆ ಕೈ ಇಕ್ಕಿ ಸೆಳೆವ ನಾಗರಗಳ ಕೈ ಚಳಕದ ಜೋಗಿ</p>.<p>ಬಸವಳಿದ ಬಸವನ ಮುಂದೆ ಅದೇ ನಗುವನ ಕೈವಾರಿ.</p>.<p>ಹುತ್ತಕ್ಕೆ ಹೀಗೆ ಕೈ ಇಕ್ಕಿ ಸರ್ಪವ ಸೆಳೆಯ ಬಲ್ಲೆಯಾದರೆ</p>.<p>ಷಟುಸ್ಥಲದ ದಾರಿ ಕಂಡೀಯ ಇಲ್ಲವಾದರೆ ಇದ್ದೇ ಇದೆ ನಿನಗೆ</p>.<p>ಪ್ರಸಾದ, ಇಷ್ಟಲಿಂಗ ದಾಸೋಹ ತಾಳಲಾರದ ಕಿರೀಟದ ವಜ್ಜೆ</p>.<p>ಕ್ಷಿತಿಜಗಳಲಿ ಲಯವಾಗುವ ಪರಿಗೆ ಲೋಕ ನಿಬ್ಬೆರಗು.</p>.<p>ಕುದುರೆಯ ಕೈ ಬಿಟ್ಟನು ಹಾವುಗೆಯ ಕೈ ಬಿಡುವನು</p>.<p>ಕಿರೀಟದ ಹೊನ್ನಿನೊಂದೊಂದು ಎಳೆಯ ಬೀಸಾಡುವನು ಹೀಗೆ</p>.<p>ಹುತ್ತಕ್ಕೆ ಕೈ ನಿರಿಸುವನು... ಬಾಲಸಂಗಯ್ಯ ನೀಲವ್ವ</p>.<p>ಗಂಗಮಾಯಿ; ಓಂ ನಮಃ ಶಿವಾಯ ಮಂತ್ರಕ್ಕೂ ಓಸರಿಸಲಾಗದು.</p>.<p>ಶತಕಗಳುದ್ದಕ್ಕೂ ಸಾಗಿದ ಹಾದಿಯಲ್ಲಿ ಸವೆದದ್ದು ನರಮಾನವ</p>.<p>ಮಾಂಸಮಜ್ಜೆ: ಕಾಲು ಚಾಚಿ ಮಲಗಿದೆ ಹಾದಿ ಬೀದಿ ನಿರಾಳ</p>.<p>ಸತ್ಯ ಸೂತಕಗಳ ಪತ್ಯ ಅಪತ್ಯಗಳಲ್ಲಿ ಕಾಣುವುದಷ್ಟೆ ಬಿಂಬ</p>.<p>ಕನ್ನಡಿಗೆ ಕಾಣಿಸುವುದಷ್ಟೆ ಗೊತ್ತು|</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>