<p><strong>ಪಾಪಿಷ್ಠ ಪರಂಗಿ ಮಂದಿ ಬಂದು<br />ನವ ಭಾರತದ ನಕಾಶೆಯ ಗೆರೆ ಎಳೆದು ಹೋದರು<br />ನಾವು ಒಂದು ಬೃಹನ್ ನಾಗರಿಕತೆಯ ಕುರುಹಿನ ಮೇಲೆ<br />ಮತ್ತೆ ಬರೆ ಎಳೆದುಕೊಂಡೆವು<br />ಸಿಂಧೂ ಮತ್ತು ಹಿಂದೂ ಎರಡೂ ಬೇರೆಯಾದವು</strong></p>.<p><strong>ಅಂದು ಶುರುವಾದ ಜಗಳ ನಿಂತಿಲ್ಲ<br />ನಿಲ್ಲುವ ಸೂಚನೆಯೂ ಇಲ್ಲ<br />ಒಂದು ತುಂಡು ಭೂಮಿ ಈ ದೇಶದ ಸ್ವಾಭಿಮಾನ, ಅಸ್ಮಿತೆ<br />ಭಕ್ತಿ ಎಲ್ಲವೂ ಆಗಿದೆ. ಅಲ್ಲಿಂದ ನಯಾಪೈಸೆ ಲಾಭವಿಲ್ಲ, ಪರವಾಗಿಲ್ಲ<br />ಓಟಿನ ಖಜಾನೆ ಅದಾಗಿದೆ</strong></p>.<p><strong>ಒಂದು ತುಂಡು ಭೂಮಿಗಾಗಿ ನಾವು<br />ಒಂದು ಧರ್ಮವನ್ನು ನಖಶಿಖಾಂತ ದ್ವೇಷಿಸುತ್ತೇವೆ<br />ನಮ್ಮಂತೆಯೆ ಇರುವ ಮನುಷ್ಯರನ್ನು ಅನುಮಾನಿಸುತ್ತೇವೆ<br />ಅವನು ಭಾರತ ಮಾತೆ ಎಂದು ತೊದಲುವಷ್ಟರಲ್ಲಿ<br />ರಾಮ ರಾಮಾ ಎನ್ನು ಅನ್ನುತ್ತಾ<br />ಹೊಡೆದು ಹೊಡೆದು ಲಿಂಚಿಸುತ್ತೇವೆ</strong></p>.<p><strong>ಒಂದು ತುಂಡು ಭೂಮಿಗಾಗಿ<br />ನಾವು ದೇಶಪ್ರೇಮವನ್ನು ಒತ್ತೆ ಇಟ್ಟಿದ್ದೇವೆ<br />ಬಳ್ಳಾರಿಯ ನಡುಹಗಲ ಸುಡುಬಿಸಿಲಿನಲ್ಲಿ ಹುಟ್ಟಿದ ಸೈನಿಕ<br />ಸಿಯಾಚಿನ್ ಕಣಿವೆಯ ಹಿಮಗಡ್ಡೆಯಲ್ಲಿ ಸೆಡೆತುಕೊಂಡು<br />ಸಾಯುವುದು ದೇಶಪ್ರೇಮದ ಪರಾಕಾಷ್ಠೆ ಎಂದು ತಿಳಿದಿದ್ದೇವೆ</strong></p>.<p><strong>ರೈತರು ಆತ್ಮಹತ್ಯೆ ಮಾಡಿಕೊಳ್ಳಲಿ<br />ನಿರುದ್ಯೋಗಿ ಯುವಕರು ಹತಾಶರಾಗಿ ಅಂಡಲೆಯಲಿ<br />ಬ್ಯಾಂಕುಗಳಲ್ಲಿ ನಮ್ಮ ಠೇವಣಿಯನ್ನು ದೋಚುವ<br />ಶ್ರೀಮಂತರು ಪಲಾಯನವಾಗಲಿ<br />ಹಸುಳೆಗಳ ಮೇಲೆ ಅತ್ಯಾಚಾರ ನಡೆಯುತ್ತಿರಲಿ<br />ಇಷ್ಟು ದೊಡ್ಡ ದೇಶದಲ್ಲಿ ಅವೆಲ್ಲ ಸಣ್ಣ ವಿಷಯ ಎನ್ನುತ್ತೇವೆ</strong></p>.<p><strong>ಅಸಲಿಗೆ ಭೂಮಿಗೆ ನಕಾಶೆಯೆಂಬುದಿಲ್ಲ<br />ಐವತ್ತು ಮಿಲಿಯ ವರ್ಷಗಳ ಹಿಂದೆ<br />ಹಿಮಾಲಯವೆಂಬುದು ಇರಲೇ ಇಲ್ಲ, ಜೊತೆಗೆ ಗಂಗೆಯೂ<br />ಆಫ್ರಿಕಾ ಖಂಡ ತುಂಡಾಗಿ ಹಿಂದೂ ಮಹಾಸಾಗರದಲ್ಲಿ ತೇಲುತ್ತಾ ಬಂದು<br />ಏಷಿಯಾವನ್ನು ಅಪ್ಪಳಿಸಿದಾಗ ಜಂಬೂದ್ವೀಪ ಉಗಮಿಸಿತು<br />ದೇವರುಗಳು ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡರು</strong></p>.<p><strong>ಹುಟ್ಟುವ ಜೀವಿಗಳಿಗೆ<br />ಸಾವು ಖಚಿತ ಎಂದು ತಿಳಿದೇ<br />ಭೂಮಿತಾಯಿ ನಮ್ಮೆಲ್ಲರನ್ನೂ ಪೊರೆದಿದ್ದಾಳೆ<br />ಅಂತಿಮ ದಿನದಂದು ಕಾದಿರಿಸಿದ್ದಾಳೆ<br />ಒಂದು ತುಂಡು ಭೂಮಿಯನ್ನು<br />ಅತ್ತುಕೊಂಡು ಹೊತ್ತು ಬಂದವರಿಗೆ ಮೂರು ಹಿಡಿ ಮಣ್ಣನ್ನು.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾಪಿಷ್ಠ ಪರಂಗಿ ಮಂದಿ ಬಂದು<br />ನವ ಭಾರತದ ನಕಾಶೆಯ ಗೆರೆ ಎಳೆದು ಹೋದರು<br />ನಾವು ಒಂದು ಬೃಹನ್ ನಾಗರಿಕತೆಯ ಕುರುಹಿನ ಮೇಲೆ<br />ಮತ್ತೆ ಬರೆ ಎಳೆದುಕೊಂಡೆವು<br />ಸಿಂಧೂ ಮತ್ತು ಹಿಂದೂ ಎರಡೂ ಬೇರೆಯಾದವು</strong></p>.<p><strong>ಅಂದು ಶುರುವಾದ ಜಗಳ ನಿಂತಿಲ್ಲ<br />ನಿಲ್ಲುವ ಸೂಚನೆಯೂ ಇಲ್ಲ<br />ಒಂದು ತುಂಡು ಭೂಮಿ ಈ ದೇಶದ ಸ್ವಾಭಿಮಾನ, ಅಸ್ಮಿತೆ<br />ಭಕ್ತಿ ಎಲ್ಲವೂ ಆಗಿದೆ. ಅಲ್ಲಿಂದ ನಯಾಪೈಸೆ ಲಾಭವಿಲ್ಲ, ಪರವಾಗಿಲ್ಲ<br />ಓಟಿನ ಖಜಾನೆ ಅದಾಗಿದೆ</strong></p>.<p><strong>ಒಂದು ತುಂಡು ಭೂಮಿಗಾಗಿ ನಾವು<br />ಒಂದು ಧರ್ಮವನ್ನು ನಖಶಿಖಾಂತ ದ್ವೇಷಿಸುತ್ತೇವೆ<br />ನಮ್ಮಂತೆಯೆ ಇರುವ ಮನುಷ್ಯರನ್ನು ಅನುಮಾನಿಸುತ್ತೇವೆ<br />ಅವನು ಭಾರತ ಮಾತೆ ಎಂದು ತೊದಲುವಷ್ಟರಲ್ಲಿ<br />ರಾಮ ರಾಮಾ ಎನ್ನು ಅನ್ನುತ್ತಾ<br />ಹೊಡೆದು ಹೊಡೆದು ಲಿಂಚಿಸುತ್ತೇವೆ</strong></p>.<p><strong>ಒಂದು ತುಂಡು ಭೂಮಿಗಾಗಿ<br />ನಾವು ದೇಶಪ್ರೇಮವನ್ನು ಒತ್ತೆ ಇಟ್ಟಿದ್ದೇವೆ<br />ಬಳ್ಳಾರಿಯ ನಡುಹಗಲ ಸುಡುಬಿಸಿಲಿನಲ್ಲಿ ಹುಟ್ಟಿದ ಸೈನಿಕ<br />ಸಿಯಾಚಿನ್ ಕಣಿವೆಯ ಹಿಮಗಡ್ಡೆಯಲ್ಲಿ ಸೆಡೆತುಕೊಂಡು<br />ಸಾಯುವುದು ದೇಶಪ್ರೇಮದ ಪರಾಕಾಷ್ಠೆ ಎಂದು ತಿಳಿದಿದ್ದೇವೆ</strong></p>.<p><strong>ರೈತರು ಆತ್ಮಹತ್ಯೆ ಮಾಡಿಕೊಳ್ಳಲಿ<br />ನಿರುದ್ಯೋಗಿ ಯುವಕರು ಹತಾಶರಾಗಿ ಅಂಡಲೆಯಲಿ<br />ಬ್ಯಾಂಕುಗಳಲ್ಲಿ ನಮ್ಮ ಠೇವಣಿಯನ್ನು ದೋಚುವ<br />ಶ್ರೀಮಂತರು ಪಲಾಯನವಾಗಲಿ<br />ಹಸುಳೆಗಳ ಮೇಲೆ ಅತ್ಯಾಚಾರ ನಡೆಯುತ್ತಿರಲಿ<br />ಇಷ್ಟು ದೊಡ್ಡ ದೇಶದಲ್ಲಿ ಅವೆಲ್ಲ ಸಣ್ಣ ವಿಷಯ ಎನ್ನುತ್ತೇವೆ</strong></p>.<p><strong>ಅಸಲಿಗೆ ಭೂಮಿಗೆ ನಕಾಶೆಯೆಂಬುದಿಲ್ಲ<br />ಐವತ್ತು ಮಿಲಿಯ ವರ್ಷಗಳ ಹಿಂದೆ<br />ಹಿಮಾಲಯವೆಂಬುದು ಇರಲೇ ಇಲ್ಲ, ಜೊತೆಗೆ ಗಂಗೆಯೂ<br />ಆಫ್ರಿಕಾ ಖಂಡ ತುಂಡಾಗಿ ಹಿಂದೂ ಮಹಾಸಾಗರದಲ್ಲಿ ತೇಲುತ್ತಾ ಬಂದು<br />ಏಷಿಯಾವನ್ನು ಅಪ್ಪಳಿಸಿದಾಗ ಜಂಬೂದ್ವೀಪ ಉಗಮಿಸಿತು<br />ದೇವರುಗಳು ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡರು</strong></p>.<p><strong>ಹುಟ್ಟುವ ಜೀವಿಗಳಿಗೆ<br />ಸಾವು ಖಚಿತ ಎಂದು ತಿಳಿದೇ<br />ಭೂಮಿತಾಯಿ ನಮ್ಮೆಲ್ಲರನ್ನೂ ಪೊರೆದಿದ್ದಾಳೆ<br />ಅಂತಿಮ ದಿನದಂದು ಕಾದಿರಿಸಿದ್ದಾಳೆ<br />ಒಂದು ತುಂಡು ಭೂಮಿಯನ್ನು<br />ಅತ್ತುಕೊಂಡು ಹೊತ್ತು ಬಂದವರಿಗೆ ಮೂರು ಹಿಡಿ ಮಣ್ಣನ್ನು.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>