ಅಂದು ಬೆಳಿಗ್ಗೆ 10.50 ಗಂಟೆಗೆ ಖ್ಯಾತ ವಿಮರ್ಶಕ ಡಾ.ಎಚ್.ಎಸ್. ರಾಘವೇಂದ್ರ ರಾವ್ ಅವರು ‘ಸಾಹಿತ್ಯ ಮತ್ತು ಕಾಲ’ ಕುರಿತು ಮಾತನಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ‘ಸಾಮ’ ಸಂಗೀತ ಸಂಸ್ಥೆಯ ನಿರ್ದೇಶಕ ಮನೋಜ ವಸಿಷ್ಠ ಹಾಗೂ ಆಕಾಶವಾಣಿ ಬಿ ಹೈಗ್ರೇಡ್ ಕಲಾವಿದೆ ಅರುಂಧತಿ ಮನೋಜ್ ವಸಿಷ್ಠ ಅವರಿಂದ ದ್ವಂದ್ವ ಶಾಸ್ತ್ರೀಯ ಮತ್ತು ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.