ಹುಬ್ಬಳ್ಳಿ: ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ, ಪೌರಕಾರ್ಮಿಕ ಮಹಿಳೆ ನಳಿನಿ ಅರ್ಜುನಮ್ ಎಂಬುವವರ ಕೈ ಎಳೆದಿದ್ದಲ್ಲದೇ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಪೌರಕಾರ್ಮಿಕರು ನಗರದ ಬೆಂಡಿಗೇರಿ ಪೊಲೀಸ್ ಠಾಣೆಗೆ ಶುಕ್ರವಾರ ಬೆಳಿಗ್ಗೆ ದೂರು ಸಲ್ಲಿಸಲು ಮುಂದಾದರು. ದೂರು ದಾಖಲಿಸಿಕೊಳ್ಳದ್ದರಿಂದ ದುರ್ಗದಬೈಲ್ನಲ್ಲಿರುವ ಎಸಿಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.