<p><strong>ಬೆಂಗಳೂರು: </strong>ಯಕ್ಷಗಾನದ ಮುಖವರ್ಣಿಕೆ, ವೇಷಭೂಷಣದ ಪ್ರಾತ್ಯಕ್ಷಿಕೆ ಮತ್ತು ಪ್ರಾಯೋಗಿಕ ಪ್ರದರ್ಶನ ನಗರದ ಉದಯಭಾನು ಕಲಾಸಂಘದಲ್ಲಿ ಇತ್ತೀಚೆಗೆ ನಡೆಯಿತು.</p>.<p>ನಗರದ ‘ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆ’ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಆಕರ್ಷಕ ಮುಖವರ್ಣಿಕೆ, ಚಿತ್ತಾರ ಬಿಡಿಸಲಾಯಿತು. ಕೆಲವು ಮಕ್ಕಳು ತಾವೇ ಮುಖವರ್ಣಿಕೆ ಬಿಡಿಸಲು ಪ್ರಯತ್ನಿಸಿದರು. ತರಬೇತುದಾರರೂ ನೆರವಾದರು. ಬಣ್ಣಗಳ ಪರಿಚಯ, ಸಂಯೋಜನೆ, ಮಿಶ್ರಣ ಪದಾರ್ಥಗಳು ಇತ್ಯಾದಿ ವಿವರಗಳನ್ನು ಹೇಳುತ್ತಲೇ ಮಕ್ಕಳನ್ನು ಪಕ್ಕಾ ಯಕ್ಷ ಪಾತ್ರಧಾರಿಗಳನ್ನಾಗಿ ರೂಪಿಸಲಾಯಿತು.</p>.<p>ಯಕ್ಷಗಾನ ಗುರುಗಳಾದ ಕೆ. ಗೌರಿ ಅವರ ನೇತೃತ್ವದಲ್ಲಿ ಮಕ್ಕಳಿಂದ ‘ಪಾಂಡವಾಶ್ವಮೇಧ’ ಎಂಬ ಯಕ್ಷಗಾನದ ಪ್ರಾತ್ಯಕ್ಷಿಕೆ ನಡೆಯಿತು.</p>.<p><strong>ಕೋವಿಡ್ ಅಡ್ಡಿ ಸೀಮಿತ ಪ್ರದರ್ಶನ:</strong> ಕೋವಿಡ್ ನಿಯಮಗಳ ಕಾರಣ ಸೀಮಿತ ಅತಿಥಿಗಳ ಸಮ್ಮುಖದಲ್ಲಿ ಯಕ್ಷಗಾನ ಪ್ರದರ್ಶಿಸಲಾಯಿತು. ವಿಡಿಯೋ ಅವತರಣಿಕೆಯನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಸಂಘಟಕರು ತಿಳಿಸಿದರು.</p>.<p>ಛಾಯಾಗ್ರಾಹಕ ನಾಗೇಶ್ ಪೊಳಲಿ, ಸಂಪನ್ಮೂಲ ವ್ಯಕ್ತಿಗಳಾದ ಮಟ್ಟಿ ರಾಮಚಂದ್ರ ರಾವ್, ರಾಜೇಶ್ ಆಚಾರ್, ಸುರೇಶ್ ಆಚಾರ್ ಇದ್ದರು. ಭಾಗವತರಾಗಿ ವಿನಯ್ ಶೆಟ್ಟಿ, ಮೃದಂಗದಲ್ಲಿ ರಾಘವೇಂದ್ರ ಬಿಡುವಾಳ, ಗೌತಮ್ ಮತ್ತು ಚಂಡೆಯಲ್ಲಿ ನರಸಿಂಹ ಆಚಾರ್ ಇದ್ದರು.</p>.<p>ಆಶಾ ರಾಘವೇಂದ್ರ, ಲತಾ ರಮೇಶ್, ಶಶಿಕಲಾ, ಅನಿತಾ ರಾವ್, ಚಂದ್ರಿಕಾ ಧರ್ಮೇಂದ್ರ, ಚೈತ್ರ ರಾಜೇಶ್ ಕೋಟ, ಸುಮಾ ಅನಿಲ್ ಕುಮಾರ್, ಶರ್ವಾಣಿ ಹೆಗಡೆ, ದೀಕ್ಷಾ ಭಟ್, ಮಾನ್ಯ, ಬಾಲಗೋಪಾಲಕರಾಗಿ ಧೃತಿ ಅಮ್ಮೆಂಬಳ ಹಾಗೂ ರಮ್ಯಾ ಪ್ರದರ್ಶನದಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಯಕ್ಷಗಾನದ ಮುಖವರ್ಣಿಕೆ, ವೇಷಭೂಷಣದ ಪ್ರಾತ್ಯಕ್ಷಿಕೆ ಮತ್ತು ಪ್ರಾಯೋಗಿಕ ಪ್ರದರ್ಶನ ನಗರದ ಉದಯಭಾನು ಕಲಾಸಂಘದಲ್ಲಿ ಇತ್ತೀಚೆಗೆ ನಡೆಯಿತು.</p>.<p>ನಗರದ ‘ಕರ್ನಾಟಕ ಮಹಿಳಾ ಯಕ್ಷಗಾನ ಸಂಸ್ಥೆ’ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಆಕರ್ಷಕ ಮುಖವರ್ಣಿಕೆ, ಚಿತ್ತಾರ ಬಿಡಿಸಲಾಯಿತು. ಕೆಲವು ಮಕ್ಕಳು ತಾವೇ ಮುಖವರ್ಣಿಕೆ ಬಿಡಿಸಲು ಪ್ರಯತ್ನಿಸಿದರು. ತರಬೇತುದಾರರೂ ನೆರವಾದರು. ಬಣ್ಣಗಳ ಪರಿಚಯ, ಸಂಯೋಜನೆ, ಮಿಶ್ರಣ ಪದಾರ್ಥಗಳು ಇತ್ಯಾದಿ ವಿವರಗಳನ್ನು ಹೇಳುತ್ತಲೇ ಮಕ್ಕಳನ್ನು ಪಕ್ಕಾ ಯಕ್ಷ ಪಾತ್ರಧಾರಿಗಳನ್ನಾಗಿ ರೂಪಿಸಲಾಯಿತು.</p>.<p>ಯಕ್ಷಗಾನ ಗುರುಗಳಾದ ಕೆ. ಗೌರಿ ಅವರ ನೇತೃತ್ವದಲ್ಲಿ ಮಕ್ಕಳಿಂದ ‘ಪಾಂಡವಾಶ್ವಮೇಧ’ ಎಂಬ ಯಕ್ಷಗಾನದ ಪ್ರಾತ್ಯಕ್ಷಿಕೆ ನಡೆಯಿತು.</p>.<p><strong>ಕೋವಿಡ್ ಅಡ್ಡಿ ಸೀಮಿತ ಪ್ರದರ್ಶನ:</strong> ಕೋವಿಡ್ ನಿಯಮಗಳ ಕಾರಣ ಸೀಮಿತ ಅತಿಥಿಗಳ ಸಮ್ಮುಖದಲ್ಲಿ ಯಕ್ಷಗಾನ ಪ್ರದರ್ಶಿಸಲಾಯಿತು. ವಿಡಿಯೋ ಅವತರಣಿಕೆಯನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಸಂಘಟಕರು ತಿಳಿಸಿದರು.</p>.<p>ಛಾಯಾಗ್ರಾಹಕ ನಾಗೇಶ್ ಪೊಳಲಿ, ಸಂಪನ್ಮೂಲ ವ್ಯಕ್ತಿಗಳಾದ ಮಟ್ಟಿ ರಾಮಚಂದ್ರ ರಾವ್, ರಾಜೇಶ್ ಆಚಾರ್, ಸುರೇಶ್ ಆಚಾರ್ ಇದ್ದರು. ಭಾಗವತರಾಗಿ ವಿನಯ್ ಶೆಟ್ಟಿ, ಮೃದಂಗದಲ್ಲಿ ರಾಘವೇಂದ್ರ ಬಿಡುವಾಳ, ಗೌತಮ್ ಮತ್ತು ಚಂಡೆಯಲ್ಲಿ ನರಸಿಂಹ ಆಚಾರ್ ಇದ್ದರು.</p>.<p>ಆಶಾ ರಾಘವೇಂದ್ರ, ಲತಾ ರಮೇಶ್, ಶಶಿಕಲಾ, ಅನಿತಾ ರಾವ್, ಚಂದ್ರಿಕಾ ಧರ್ಮೇಂದ್ರ, ಚೈತ್ರ ರಾಜೇಶ್ ಕೋಟ, ಸುಮಾ ಅನಿಲ್ ಕುಮಾರ್, ಶರ್ವಾಣಿ ಹೆಗಡೆ, ದೀಕ್ಷಾ ಭಟ್, ಮಾನ್ಯ, ಬಾಲಗೋಪಾಲಕರಾಗಿ ಧೃತಿ ಅಮ್ಮೆಂಬಳ ಹಾಗೂ ರಮ್ಯಾ ಪ್ರದರ್ಶನದಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>