ಬೆಂಗಳೂರು: ತಾಳಗುಪ್ಪ– ಮೈಸೂರು ರೈಲಿನಲ್ಲಿ ಪ್ರಯಾಣಿಸಿದ್ದ ಮಹಿಳಾ ಪ್ರಯಾಣಿಕರೊಬ್ಬರು ರೈಲಿನಲ್ಲೇ ಬಿಟ್ಟು ಹೋಗಿದ್ದ ಬ್ಯಾಗ್ ಅನ್ನು ರೈಲ್ವೆ ಇಲಾಖೆ ಅಧಿಕಾರಿಗಳು ಸೋಮವಾರ ಅವರಿಗೆ ಮರಳಿಸಿದರು.
ಇದೇ 13ರಂದು ಸ್ನೇಹಾ ಹೆಗ್ಡೆ ಮತ್ತು ಪರಮೇಶ್ ಅವರು ರೈಲಿನಲ್ಲಿ ಪ್ರಯಾಣಿಸಿದ್ದರು. ಪ್ರಯಾಣದ ಬಳಿಕ ರೈಲಿನಿಂದ ಇಳಿದಿದ್ದ ಸ್ನೇಹಾ ಅವರು ಚಿನ್ನದ ಆಭರಣಗಳಿದ್ದ ಬ್ಯಾಗ್ ಮರೆತಿದ್ದರು.
ಇದು ಗಮನಕ್ಕೆ ಬಂದ ತಕ್ಷಣ ಅವರು ನೆರವಿಗಾಗಿ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ರೈಲಿನಲ್ಲಿದ್ದ ಟಿ.ಸಿ. ಪ್ರೇಮಚಂದ್ ಅವರಿಗೆ ತಿಳಿಸಿದ್ದಾರೆ.
ಎ.ಸಿ ಬೋಗಿಯಲ್ಲಿ ಬ್ಯಾಗ್ ಪತ್ತೆಯಾಗಿದೆ. ಚಿನ್ನದ ಸರ, ಎರಡು ಕಿವಿಯೋಲೆ ಇದ್ದ ಬ್ಯಾಗ್ ಅನ್ನು ರೈಲ್ವೆ ಅಧಿಕಾರಿಗಳು ಸ್ನೇಹಾ ಅವರಿಗೆ ಮರಳಿಸಿದ್ದಾರೆ.