‘ಅಂತರಂಗದಿಂದ ಬರುವ ಗೊಣಗುವ ಮಾತುಗಳಿಗೂ ಕಾವ್ಯದ ಶಕ್ತಿ ಇರುತ್ತದೆ ಎಂದು ಕವಿಯೊಬ್ಬರು ಹೇಳುತ್ತಾರೆ. ಗದ್ಯ ಮತ್ತು ಪದ್ಯಕ್ಕೆ ವ್ಯತ್ಯಾಸವಿದೆ. ಅದನ್ನು ಅರ್ಥಮಾಡಿಕೊಳ್ಳಬೇಕು. ಕನ್ನಡವನ್ನು ಮನಸ್ಸಿನಲ್ಲಿ ಉಳಿಸಿಕೊಂಡಿರುವುದೇ ಒಂದು ಕಾವ್ಯ. ಮಾತೃಭಾಷೆ ಅಥವಾ ಹುಟ್ಟಿ ಬೆಳೆದ ಪ್ರದೇಶದ ಭಾಷೆ ಮತ್ತು ಅಲ್ಲಿನ ನೆನಪುಗಳನ್ನು ಉಳಿಸಿಕೊಂಡಿರುವುದೇ ಕಾವ್ಯದ ಮನಸ್ಸು, ಕವಿಯ ಮನಸ್ಸು’ ಎಂದು ತಿಳಿಸಿದರು.