<p><strong>ನವದೆಹಲಿ</strong>: ಲೋಕಸಭೆ ಹಾಗೂ ರಾಜ್ಯಸಭೆ ಟಿವಿ ವಾಹಿನಿಗಳನ್ನು ಒಟ್ಟಾಗಿಸಿ ಇತ್ತಿಚೆಗೆ ಸಂಸದ್ ಟಿವಿ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಸಂಸದ್ ಚಾನೆಲ್ನಲ್ಲಿ ಖ್ಯಾತ ಸರೋದ್ ವಾದಕಉಸ್ತಾದ್ಅಮ್ಜದ್ ಅಲಿ ಖಾನ್ ಅವರ ಸಂದರ್ಶನ ನಡೆಯಿತು.</p>.<p>ಸಂದರ್ಶನವನ್ನು ಸಂಸದ ಶಶಿ ತರೂರ್ ಅವರು ನಡೆಸಿ ಕೊಟ್ಟರು. ಅಮ್ಜದ್ ಅಲಿ ಖಾನ್ ಅವರು ತಮ್ಮ ಜೀವನದ ಸ್ವಾರಸ್ಯಕರ ಸಂಗತಿಗಳನ್ನು ಈ ವೇಳೆ ಹಂಚಿಕೊಂಡರು.</p>.<p>‘ನನ್ನ ಮೊದಲ ಪ್ರೀತಿ ತಬಲಾ ಆಗಿತ್ತೆ ಹೊರತು, ಸರೋದ್ ಆಗಿರಲಿಲ್ಲ. ತಬಲಾದಿಂದ ದೂರ ಮಾಡಲು ನನ್ನ ತಂದೆ ತಬಲಾ ಮುಚ್ಚಿಡುತ್ತಿದ್ದರು. ಆದರೆ, ಸಂಗೀತದ ರಿದಂ ಅರಿತುಕೊಳ್ಳಲು ತಬಲಾ ಬೇಕೆ ಬೇಕು‘ ಎಂದು ಅಮ್ಜದ್ ಅಲಿ ಖಾನ್ ಹೇಳಿದರು.</p>.<p>‘ಧ್ವನಿಯ ಮತ್ತು ಭಾಷೆಯ ಪ್ರಪಂಚದಲ್ಲಿ ನಾವಿದ್ದೇವೆ. ಆದರೆ, ಬಹುತೇಕರು ಭಾಷೆಯ ಪ್ರಪಂಚದಲ್ಲಿದ್ದಾರೆ. ದೇವರಿಗೆ ಧನ್ಯವಾದಗಳು, ನಾನು ಧ್ವನಿಯ ಪ್ರಪಂಚದಲ್ಲಿದ್ದೇನೆ‘ ಎಂದರು.</p>.<p>‘ಸಂಗೀತಗಾರರ ಕುಟುಂಬದಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯು ಎಲ್ಲವನ್ನೂ ಸಾಧಿಸುವುದಿಲ್ಲ ಮತ್ತು ಅವರು ಬಯಸಿದ್ದನ್ನು ಪಡೆಯುವುದಿಲ್ಲ‘ ಎಂದು ಖಾನ್ ಹೇಳಿದರು.</p>.<p>1945 ರಲ್ಲಿ ಜನಿಸಿರುವ ಅಮ್ಜದ್ ಅಲಿ ಖಾನ್ ಅವರು ಅಂತರರಾಷ್ಟ್ರೀಯ ಸರೋದ್ ವಾದಕರು. ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ಪ್ರಶಸ್ತಿ 2001 ರಲ್ಲಿ ದೊರಕಿದೆ.</p>.<p>ಸಂಸದ್ ಟಿವಿ ಕಲೆ, ಸಂಗೀತ ಸೇರಿದಂತೆ ಮುಂತಾದ ಕ್ಷೇತ್ರದ ಗಣ್ಯರ, ರಾಜಕೀಯ ನಾಯಕರ ಹಾಗೂ ಸರ್ಕಾರಿ ಅಧಿಕಾರಿಗಳ ಜೊತೆಗೆ ಸಂವಾದ ಕಾರ್ಯಕ್ರಮಗಳನ್ನು ಆರಂಭಿಸಿದ್ದು ಗಮನ ಸೆಳೆಯುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಲೋಕಸಭೆ ಹಾಗೂ ರಾಜ್ಯಸಭೆ ಟಿವಿ ವಾಹಿನಿಗಳನ್ನು ಒಟ್ಟಾಗಿಸಿ ಇತ್ತಿಚೆಗೆ ಸಂಸದ್ ಟಿವಿ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಸಂಸದ್ ಚಾನೆಲ್ನಲ್ಲಿ ಖ್ಯಾತ ಸರೋದ್ ವಾದಕಉಸ್ತಾದ್ಅಮ್ಜದ್ ಅಲಿ ಖಾನ್ ಅವರ ಸಂದರ್ಶನ ನಡೆಯಿತು.</p>.<p>ಸಂದರ್ಶನವನ್ನು ಸಂಸದ ಶಶಿ ತರೂರ್ ಅವರು ನಡೆಸಿ ಕೊಟ್ಟರು. ಅಮ್ಜದ್ ಅಲಿ ಖಾನ್ ಅವರು ತಮ್ಮ ಜೀವನದ ಸ್ವಾರಸ್ಯಕರ ಸಂಗತಿಗಳನ್ನು ಈ ವೇಳೆ ಹಂಚಿಕೊಂಡರು.</p>.<p>‘ನನ್ನ ಮೊದಲ ಪ್ರೀತಿ ತಬಲಾ ಆಗಿತ್ತೆ ಹೊರತು, ಸರೋದ್ ಆಗಿರಲಿಲ್ಲ. ತಬಲಾದಿಂದ ದೂರ ಮಾಡಲು ನನ್ನ ತಂದೆ ತಬಲಾ ಮುಚ್ಚಿಡುತ್ತಿದ್ದರು. ಆದರೆ, ಸಂಗೀತದ ರಿದಂ ಅರಿತುಕೊಳ್ಳಲು ತಬಲಾ ಬೇಕೆ ಬೇಕು‘ ಎಂದು ಅಮ್ಜದ್ ಅಲಿ ಖಾನ್ ಹೇಳಿದರು.</p>.<p>‘ಧ್ವನಿಯ ಮತ್ತು ಭಾಷೆಯ ಪ್ರಪಂಚದಲ್ಲಿ ನಾವಿದ್ದೇವೆ. ಆದರೆ, ಬಹುತೇಕರು ಭಾಷೆಯ ಪ್ರಪಂಚದಲ್ಲಿದ್ದಾರೆ. ದೇವರಿಗೆ ಧನ್ಯವಾದಗಳು, ನಾನು ಧ್ವನಿಯ ಪ್ರಪಂಚದಲ್ಲಿದ್ದೇನೆ‘ ಎಂದರು.</p>.<p>‘ಸಂಗೀತಗಾರರ ಕುಟುಂಬದಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯು ಎಲ್ಲವನ್ನೂ ಸಾಧಿಸುವುದಿಲ್ಲ ಮತ್ತು ಅವರು ಬಯಸಿದ್ದನ್ನು ಪಡೆಯುವುದಿಲ್ಲ‘ ಎಂದು ಖಾನ್ ಹೇಳಿದರು.</p>.<p>1945 ರಲ್ಲಿ ಜನಿಸಿರುವ ಅಮ್ಜದ್ ಅಲಿ ಖಾನ್ ಅವರು ಅಂತರರಾಷ್ಟ್ರೀಯ ಸರೋದ್ ವಾದಕರು. ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ಪ್ರಶಸ್ತಿ 2001 ರಲ್ಲಿ ದೊರಕಿದೆ.</p>.<p>ಸಂಸದ್ ಟಿವಿ ಕಲೆ, ಸಂಗೀತ ಸೇರಿದಂತೆ ಮುಂತಾದ ಕ್ಷೇತ್ರದ ಗಣ್ಯರ, ರಾಜಕೀಯ ನಾಯಕರ ಹಾಗೂ ಸರ್ಕಾರಿ ಅಧಿಕಾರಿಗಳ ಜೊತೆಗೆ ಸಂವಾದ ಕಾರ್ಯಕ್ರಮಗಳನ್ನು ಆರಂಭಿಸಿದ್ದು ಗಮನ ಸೆಳೆಯುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>