ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾ ದಿವಾಕರ ಅವರ ಕವಿತೆ: ಶಾಯಿ ಖಾಲಿಯಾಗಿಲ್ಲ

Last Updated 11 ಫೆಬ್ರವರಿ 2023, 19:30 IST
ಅಕ್ಷರ ಗಾತ್ರ

ನಾನು ಬರೆಯುತ್ತಲೇ ಇರುತ್ತೇನೆ
ನನ್ನೊಳಗಿನ
ಹುಟ್ಟು ಕಲ್ಮಷ ತೊಳೆಯಲು
ಮಲಿನ ಧಾತುಗಳನಳಿಸಲು
ಅನಿಷ್ಟ ನೆರಳುಗಳ ಸರಿಸಲು ;

ನಾನು ಬರೆಯುತ್ತಲೇ ಇರುತ್ತೇನೆ
ಪರಿಕಲ್ಪಿತ
ಶುದ್ಧಾಶುದ್ಧತೆಯಳಿಸಲು
ಜಾತಿ ಸೋಂಕು ತೊಳೆಯಲು
ಬಣ್ಣದ ಹಂಗು ತೊರೆಯಲು ;

ನಾನು ಬರೆಯುತ್ತಲೇ ಇರುತ್ತೇನೆ
ಸುತ್ತಲಾವರಿಸಿಹ
ಕಾರ್ಗತ್ತಲನಳಿಸಲು
ಶ್ರೇಷ್ಠತೆಯಹಮಿಕೆ ಅಳಿಸಲು
ನಂದಿದ ಹಣತೆಗಳನುರಿಸಲು ;

ನಾನು ಬರೆಯುತ್ತಲೇ ಇರುತ್ತೇನೆ
ಅಳಿಸಿಹೋದ
ಸಹನೆಯ ಬೀಜ ಬಿತ್ತಲು
ವಿಶ್ವಪಥವನು ಕಟ್ಟಲು
ಮನುಜಮತವನು ಬೆಳೆಸಲು ;

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT