<p>ಎದೆಯಮೇಲೆ ಹೂವರಳಿಸುವವನ ಕೈಗೆ<br />ತಲ್ಲಣಗಳು ತಾಕುವುದಿಲ್ಲ<br />ಸೂರ್ಯ-ಚಂದ್ರ ತಾರೆಗಳೆಲ್ಲವೂ<br />ನಿಲುಕುತ್ತವೆ ಅವನ ಬೆರಳಿಗೆ<br />ನಕ್ಷತ್ರ ನೀಲಿಯಾಗಿ<br />ಆಕಾಶ ಕೆಂಪಗಾಗಿ!<br />ಎಲ್ಲವೂ ಅವನಿಷ್ಟದಂತೆಯೇ ಇಲ್ಲಿ<br />ಪದಗಳಿಲ್ಲದ ಕವಿತೆ ಎದೆತುಂಬ</p>.<p>ತಂದು ಕೂರಿಸುತ್ತಾನೆ ಎಲ್ಲೆಂದರಲ್ಲಿ<br />ಅಲ್ಲೆಲ್ಲೋ ಹಾರಾಡುವ ಚಿಟ್ಟೆಯ<br />ಅಂಗಳದ ಮೈಮೇಲಿನ ರಂಗೋಲಿ<br />ನುಣುಪಾದ ಪಾದಗಳ ಮೇಲೆ!<br />ನಾಜೂಕು ಪದರಗಳೊಳಗೆ<br />ಚುಚ್ಚಿದ ಬಣ್ಣಗಳು ತನಗಂಟದಂತೆ<br />ಅಂತರವ ಕಾಯ್ದುಕೊಳ್ಳುತ್ತಾನೆ</p>.<p>ಮರಿಜಿಂಕೆಯೊಂದು ಕಾಲಮರೆತು<br />ಕಣ್ಣುಮಿಟುಕಿಸುತ್ತದೆ<br />ನಿಂತಸಮಯದ ಒಡಲಿನಲ್ಲಿ<br />ಸದಾ ಹಸಿರಾದ ಹುಲ್ಲುಗಾವಲು!<br />ಶಿವನ ಶಿರದಿಂದಿಳಿದ ಗಂಗೆ<br />ಸ್ಪರ್ಶಕ್ಕೆ ಸಿಕ್ಕುತ್ತಾಳೆ<br />ಮೂರ್ತ-ಅಮೂರ್ತಗಳೆಲ್ಲವೂ<br />ಅವನಾಜ್ಞೆಯಂತೆಯೇ ಇಲ್ಲಿ<br />ಸಾಲುಸಾಲು ಕತೆಗಳು<br />ಬಿಡಿಬಿಡಿಯಾಗಿ ಹರಡಿಕೊಳ್ಳುತ್ತವೆ</p>.<p>ಬಾಲಕೃಷ್ಣನ ನವಿಲುಗರಿ<br />ಬೆನ್ನಮೇಲೆ ಕಚಗುಳಿಯಿಡುವಾಗ<br />ಮೊಲದಮರಿಯೊಂದು ಕುತ್ತಿಗೆಯ ಮುದ್ದಿಸುತ್ತದೆ<br />ಕೀಗೊಂಚಲಿನಿಂದ ಹೊರಟ<br />ರೆಕ್ಕೆಯೊಂದು ಬಯಲ ತಲುಪಿದರೆ<br />ಆಗಸದಿಂದಿಳಿದ ಅದೃಷ್ಟದೇವತೆ<br />ಮುಂಗೈಮೇಲೆ!<br />ನೆನಪ ಹಿಡಿದಿಡುವ ಕಾಯಕದಲ್ಲಿ<br />ನೋವಿನ ಮಾರಾಟ ರಿಯಾಯಿತಿಯಲ್ಲಿ</p>.<p>ಹೊಕ್ಕುಳಿಗೆ ಸೂಜಿ ಚುಚ್ಚುವವನ<br />ತೆರೆದ ಎದೆಯಮೇಲೆ<br />ಬಣ್ಣದ ಹೂಗಳ ಹರಡಬೇಕಿದೆ;<br />ಪರಿಮಳದ ಎಳೆಯೊಂದ ಎಳೆಯಬೇಕಿದೆ!<br />ಸೂಜಿಗಂಟಿದ ಸತ್ಯಗಳೆಲ್ಲ<br />ಬಳ್ಳಿಯಾಗಿ ಹಬ್ಬಿಕೊಳ್ಳಲಿ<br />ಹಚ್ಚೆ ಹಾಕುವವನ ಹೃದಯದಲ್ಲಿ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಎದೆಯಮೇಲೆ ಹೂವರಳಿಸುವವನ ಕೈಗೆ<br />ತಲ್ಲಣಗಳು ತಾಕುವುದಿಲ್ಲ<br />ಸೂರ್ಯ-ಚಂದ್ರ ತಾರೆಗಳೆಲ್ಲವೂ<br />ನಿಲುಕುತ್ತವೆ ಅವನ ಬೆರಳಿಗೆ<br />ನಕ್ಷತ್ರ ನೀಲಿಯಾಗಿ<br />ಆಕಾಶ ಕೆಂಪಗಾಗಿ!<br />ಎಲ್ಲವೂ ಅವನಿಷ್ಟದಂತೆಯೇ ಇಲ್ಲಿ<br />ಪದಗಳಿಲ್ಲದ ಕವಿತೆ ಎದೆತುಂಬ</p>.<p>ತಂದು ಕೂರಿಸುತ್ತಾನೆ ಎಲ್ಲೆಂದರಲ್ಲಿ<br />ಅಲ್ಲೆಲ್ಲೋ ಹಾರಾಡುವ ಚಿಟ್ಟೆಯ<br />ಅಂಗಳದ ಮೈಮೇಲಿನ ರಂಗೋಲಿ<br />ನುಣುಪಾದ ಪಾದಗಳ ಮೇಲೆ!<br />ನಾಜೂಕು ಪದರಗಳೊಳಗೆ<br />ಚುಚ್ಚಿದ ಬಣ್ಣಗಳು ತನಗಂಟದಂತೆ<br />ಅಂತರವ ಕಾಯ್ದುಕೊಳ್ಳುತ್ತಾನೆ</p>.<p>ಮರಿಜಿಂಕೆಯೊಂದು ಕಾಲಮರೆತು<br />ಕಣ್ಣುಮಿಟುಕಿಸುತ್ತದೆ<br />ನಿಂತಸಮಯದ ಒಡಲಿನಲ್ಲಿ<br />ಸದಾ ಹಸಿರಾದ ಹುಲ್ಲುಗಾವಲು!<br />ಶಿವನ ಶಿರದಿಂದಿಳಿದ ಗಂಗೆ<br />ಸ್ಪರ್ಶಕ್ಕೆ ಸಿಕ್ಕುತ್ತಾಳೆ<br />ಮೂರ್ತ-ಅಮೂರ್ತಗಳೆಲ್ಲವೂ<br />ಅವನಾಜ್ಞೆಯಂತೆಯೇ ಇಲ್ಲಿ<br />ಸಾಲುಸಾಲು ಕತೆಗಳು<br />ಬಿಡಿಬಿಡಿಯಾಗಿ ಹರಡಿಕೊಳ್ಳುತ್ತವೆ</p>.<p>ಬಾಲಕೃಷ್ಣನ ನವಿಲುಗರಿ<br />ಬೆನ್ನಮೇಲೆ ಕಚಗುಳಿಯಿಡುವಾಗ<br />ಮೊಲದಮರಿಯೊಂದು ಕುತ್ತಿಗೆಯ ಮುದ್ದಿಸುತ್ತದೆ<br />ಕೀಗೊಂಚಲಿನಿಂದ ಹೊರಟ<br />ರೆಕ್ಕೆಯೊಂದು ಬಯಲ ತಲುಪಿದರೆ<br />ಆಗಸದಿಂದಿಳಿದ ಅದೃಷ್ಟದೇವತೆ<br />ಮುಂಗೈಮೇಲೆ!<br />ನೆನಪ ಹಿಡಿದಿಡುವ ಕಾಯಕದಲ್ಲಿ<br />ನೋವಿನ ಮಾರಾಟ ರಿಯಾಯಿತಿಯಲ್ಲಿ</p>.<p>ಹೊಕ್ಕುಳಿಗೆ ಸೂಜಿ ಚುಚ್ಚುವವನ<br />ತೆರೆದ ಎದೆಯಮೇಲೆ<br />ಬಣ್ಣದ ಹೂಗಳ ಹರಡಬೇಕಿದೆ;<br />ಪರಿಮಳದ ಎಳೆಯೊಂದ ಎಳೆಯಬೇಕಿದೆ!<br />ಸೂಜಿಗಂಟಿದ ಸತ್ಯಗಳೆಲ್ಲ<br />ಬಳ್ಳಿಯಾಗಿ ಹಬ್ಬಿಕೊಳ್ಳಲಿ<br />ಹಚ್ಚೆ ಹಾಕುವವನ ಹೃದಯದಲ್ಲಿ</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>