<p><strong>ರಾಮನಗರ: </strong>ರಾಮದೇವರ ಬೆಟ್ಟ ತಪ್ಪಲಿನ ಇರುಳಿಗರ ಕಾಲೊನಿಯಲ್ಲಿ ಶುಕ್ರವಾರ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಮೂವರು ಅಂಗವಿಕಲರ ಗುಡಿಸಲುಗಳೂ ಭಸ್ಮವಾಗಿವೆ. ಈಗ ಈ ಅಂಗವಿಕಲ ಕುಟುಂಬದವರಿಗೆ ಪಕ್ಕದಲ್ಲೇ ಇರುವ ಸರ್ಕಾರಿ ಶಾಲಾ ಕಟ್ಟಡವೇ ಆಶ್ರಯ ತಾಣವಾಗಿದೆ.<br /> <br /> ಬೆಂಕಿ ಅವಘಡದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ಸಿ.ರಾಜಣ್ಣ ಅರ್ಜಿ ನೀಡಿದರೆ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರಾದರೂ ಯಾವುದೇ ತಾತ್ಕಾಲಿಕ ಆಶ್ರಯ ಇಲ್ಲದಂತಾಗಿದೆ.<br /> <br /> <strong>ಮಾಸಾಶನ ಮರೀಚಿಕೆ: </strong>ಗಿರಿಜಮ್ಮ, ಶ್ರೀಕಾಂತ ಮತ್ತು ಸುಮಾ ಎಂಬ ಹೆಸರಿನ ಈ ಮೂವರೂ ಅಂಗವಿಕಲರು ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆ ಸೌಲಭ್ಯ ವಂಚಿತರೂ ಆಗಿದ್ದಾರೆ. ಹೀಗಾಗಿ ಇವರ ಪಾಲಿಗೆ ಅಂಗವಿಕಲರ ಮಾಸಾಶನ ಸೌಲಭ್ಯ ಇನ್ನೂ ಮರೀಚಿಕೆ ಆಗಿಯೇ ಉಳಿದಿದೆ. ಇವರೆಲ್ಲಾ ಕೂಲಿ ಕೆಲಸವನ್ನೇ ಆಶ್ರಯಿಸಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.<br /> <br /> ಬಾಲ್ಯದಲ್ಲೇ ಪೋಲಿಯೊದಿಂದ ಅಂಗವಿಕಲರಾದ ಈ ಮೂವರೂ ಮಾಸಾಶನಕ್ಕಾಗಿ 4 ವರ್ಷದ ಹಿಂದೆಯೇ ಅರ್ಜಿ ಸಲ್ಲಿಸಿದ್ದಾರಾದರೂ ಇವರ ಕಡತಗಳಿಗೆ ಈತನಕ ಮುಕ್ತಿ ಸಿಕ್ಕಿಲ್ಲ.<br /> <br /> <strong>ಗಣತಿಯಲ್ಲೂ ಗಮನಿಸಿಲ್ಲ: </strong>ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಜನಗಣತಿ, ಆರ್ಥಿಕ ಗಣತಿಯಂತಹ ಸಂದರ್ಭದಲ್ಲಿಯೂ ಈ ಅಂಗವಿಕಲರನ್ನು ಗುರುತಿಸಿಲ್ಲ. ಈ ಅಂಗವಿಕಲರಿಗೆ ಏಕೆ ಮಾಸಾಶನ ಮಂಜೂರಾಗಿಲ್ಲ ಎಂದು ಸ್ಥಳೀಯ ಹರೀಸಂದ್ರ ಗ್ರಾಮಪಂಚಾಯಿತಿ ಅಧಿಕಾರಿಗಳನ್ನು ವಿಚಾರಿಸಿದರೆ, ’ಅವರಿಂದ ಅರ್ಜಿಯೇ ಸಲ್ಲಿಕೆಯಾಗಿಲ್ಲ. ಹಾಗಾಗಿ ಸವಲತ್ತು ಸಿಕ್ಕಿಲ್ಲ’ ಎಂಬ ಪ್ರತಿಕ್ರಿಯೆ ದೊರೆಯುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಗರ: </strong>ರಾಮದೇವರ ಬೆಟ್ಟ ತಪ್ಪಲಿನ ಇರುಳಿಗರ ಕಾಲೊನಿಯಲ್ಲಿ ಶುಕ್ರವಾರ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಮೂವರು ಅಂಗವಿಕಲರ ಗುಡಿಸಲುಗಳೂ ಭಸ್ಮವಾಗಿವೆ. ಈಗ ಈ ಅಂಗವಿಕಲ ಕುಟುಂಬದವರಿಗೆ ಪಕ್ಕದಲ್ಲೇ ಇರುವ ಸರ್ಕಾರಿ ಶಾಲಾ ಕಟ್ಟಡವೇ ಆಶ್ರಯ ತಾಣವಾಗಿದೆ.<br /> <br /> ಬೆಂಕಿ ಅವಘಡದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ಸಿ.ರಾಜಣ್ಣ ಅರ್ಜಿ ನೀಡಿದರೆ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರಾದರೂ ಯಾವುದೇ ತಾತ್ಕಾಲಿಕ ಆಶ್ರಯ ಇಲ್ಲದಂತಾಗಿದೆ.<br /> <br /> <strong>ಮಾಸಾಶನ ಮರೀಚಿಕೆ: </strong>ಗಿರಿಜಮ್ಮ, ಶ್ರೀಕಾಂತ ಮತ್ತು ಸುಮಾ ಎಂಬ ಹೆಸರಿನ ಈ ಮೂವರೂ ಅಂಗವಿಕಲರು ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆ ಸೌಲಭ್ಯ ವಂಚಿತರೂ ಆಗಿದ್ದಾರೆ. ಹೀಗಾಗಿ ಇವರ ಪಾಲಿಗೆ ಅಂಗವಿಕಲರ ಮಾಸಾಶನ ಸೌಲಭ್ಯ ಇನ್ನೂ ಮರೀಚಿಕೆ ಆಗಿಯೇ ಉಳಿದಿದೆ. ಇವರೆಲ್ಲಾ ಕೂಲಿ ಕೆಲಸವನ್ನೇ ಆಶ್ರಯಿಸಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.<br /> <br /> ಬಾಲ್ಯದಲ್ಲೇ ಪೋಲಿಯೊದಿಂದ ಅಂಗವಿಕಲರಾದ ಈ ಮೂವರೂ ಮಾಸಾಶನಕ್ಕಾಗಿ 4 ವರ್ಷದ ಹಿಂದೆಯೇ ಅರ್ಜಿ ಸಲ್ಲಿಸಿದ್ದಾರಾದರೂ ಇವರ ಕಡತಗಳಿಗೆ ಈತನಕ ಮುಕ್ತಿ ಸಿಕ್ಕಿಲ್ಲ.<br /> <br /> <strong>ಗಣತಿಯಲ್ಲೂ ಗಮನಿಸಿಲ್ಲ: </strong>ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಜನಗಣತಿ, ಆರ್ಥಿಕ ಗಣತಿಯಂತಹ ಸಂದರ್ಭದಲ್ಲಿಯೂ ಈ ಅಂಗವಿಕಲರನ್ನು ಗುರುತಿಸಿಲ್ಲ. ಈ ಅಂಗವಿಕಲರಿಗೆ ಏಕೆ ಮಾಸಾಶನ ಮಂಜೂರಾಗಿಲ್ಲ ಎಂದು ಸ್ಥಳೀಯ ಹರೀಸಂದ್ರ ಗ್ರಾಮಪಂಚಾಯಿತಿ ಅಧಿಕಾರಿಗಳನ್ನು ವಿಚಾರಿಸಿದರೆ, ’ಅವರಿಂದ ಅರ್ಜಿಯೇ ಸಲ್ಲಿಕೆಯಾಗಿಲ್ಲ. ಹಾಗಾಗಿ ಸವಲತ್ತು ಸಿಕ್ಕಿಲ್ಲ’ ಎಂಬ ಪ್ರತಿಕ್ರಿಯೆ ದೊರೆಯುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>