<p><strong>ಬೆಂಗಳೂರು:</strong> ಆಲ್ರೌಂಡ್ ಪ್ರದರ್ಶನ ನೀಡಿದ ಕರ್ನಾಟಕ ತಂಡವು ಬಿಸಿಸಿಐ 23 ವರ್ಷದೊಳಗಿನ ಮಹಿಳೆಯರ ಏಕದಿನ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮಂಗಳವಾರ 6 ವಿಕೆಟ್ಗಳಿಂದ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಮಣಿಸಿ, ಶುಭಾರಂಭ ಮಾಡಿತು.</p>.<p>ಜೈಪುರದ ಆರ್ಸಿಎ ಅಕಾಡೆಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಜಮ್ಮು– ಕಾಶ್ಮೀರ ತಂಡಕ್ಕೆ ಆರಂಭಿಕ ಆಟಗಾರ್ತಿ ಬವನ್ದೀಪ್ ಕೌರ್ (88; 92ಎ, 4x8, 6x3) ಆಸರೆಯಾದರು. ಕೌರ್ ಅವರು ಶನು ದೇವಿ (32; 75ಎ) ಅವರೊಂದಿಗೆ ಮೊದಲ ವಿಕೆಟ್ ಜೊತೆಯಾಟದಲ್ಲಿ 18.6 ಓವರ್ಗಳಲ್ಲಿ 83 ರನ್ ಸೇರಿಸಿ, ಉತ್ತಮ ಆರಂಭ ಒದಗಿಸಿದರು.</p>.<p>ಆದರೆ, ಕರ್ನಾಟಕ ಬೌಲರ್ಗಳ ಸಾಂಘಿಕ ದಾಳಿ ಎದುರು ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಸ್ಪಿನ್ನರ್ ವಂದಿತಾ ಕೆ. ರಾವ್ 2 ವಿಕೆಟ್ ಪಡೆದರೆ, ನಮಿತಾ ಡಿಸೋಜಾ, ಸಾಲೊನಿ ಪಿ. ಹಾಗೂ ಮಿಥಿಲಾ ವಿನೋದ್ ತಲಾ ಒಂದು ವಿಕೆಟ್ ಪಡೆದರು. ರುದ್ರಾಕ್ಷಿ ಚಿಬ್ ಪಡೆಯು 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 211 ರನ್ ಗಳಿಸಿತು.</p>.<p>ಗುರಿ ಬೆನ್ನಟ್ಟಿದ ರಾಜ್ಯ ತಂಡಕ್ಕೆ ಪ್ರೇರಣಾ ಜಿ.ಆರ್. (32; 45ಎ, 4x4) ಹಾಗೂ ರಚಿತಾ ಹತ್ವಾರ್ (33; 47ಎ, 4x6) ಅವರು ಮೊದಲ ವಿಕೆಟ್ಗೆ 61 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಕ್ಕಿ ಪ್ರಸಾದ್ 17 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 33 ರನ್ ಸೂರೆ ಮಾಡಿದರು.</p>.<p>ನಾಯಕಿ ಚಾಂದಸಿ ಕೃಷ್ಣಮೂರ್ತಿ (ಔಟಾಗದೇ 42; 62 ಎ, 4x5) ಹಾಗೂ ಮಿಥಿಲಾ (ಔಟಾಗದೇ 41; 44ಎ, 4x6) ಅವರು ಮುರಿಯದ ಐದನೇ ವಿಕೆಟ್ ಜೊತೆಯಾಟದಲ್ಲಿ 89 ರನ್ ಸೇರಿಸಿದರು. ಕರ್ನಾಟಕ ತಂಡವು 40.3 ಓವರ್ಗಳಲ್ಲಿ 4 ವಿಕೆಟ್ಗೆ 212 ರನ್ ಗಳಿಸಿ, ಸುಲಭವಾಗಿ ಗುರಿ ಮುಟ್ಟಿತು.</p>.<p><strong>ಸಂಕ್ಷಿಪ್ತ ಸ್ಕೋರು: ಜಮ್ಮು ಮತ್ತು ಕಾಶ್ಮೀರ:</strong> 50 ಓವರ್ಗಳಲ್ಲಿ 7 ವಿಕೆಟ್ಗೆ 211 (ಬವನ್ದೀಪ್ ಕೌರ್ 88, ಶನು ದೇವಿ 32; ವಂದಿತಾ ಕೆ. ರಾವ್ 45ಕ್ಕೆ2); ಕರ್ನಾಟಕ: 40.3 ಓವರ್ಗಳಲ್ಲಿ 4 ವಿಕೆಟ್ಗೆ 212 (ಚಾಂದಸಿ ಕೃಷ್ಣಮೂರ್ತಿ ಔಟಾಗದೇ 42, ಮಿಥಿಲಾ ವಿನೋದ್ ಔಟಾಗದೇ 41; ರುದ್ರಾಕ್ಷಿ ಚಿಬ್ 38ಕ್ಕೆ2).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಆಲ್ರೌಂಡ್ ಪ್ರದರ್ಶನ ನೀಡಿದ ಕರ್ನಾಟಕ ತಂಡವು ಬಿಸಿಸಿಐ 23 ವರ್ಷದೊಳಗಿನ ಮಹಿಳೆಯರ ಏಕದಿನ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮಂಗಳವಾರ 6 ವಿಕೆಟ್ಗಳಿಂದ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಮಣಿಸಿ, ಶುಭಾರಂಭ ಮಾಡಿತು.</p>.<p>ಜೈಪುರದ ಆರ್ಸಿಎ ಅಕಾಡೆಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಜಮ್ಮು– ಕಾಶ್ಮೀರ ತಂಡಕ್ಕೆ ಆರಂಭಿಕ ಆಟಗಾರ್ತಿ ಬವನ್ದೀಪ್ ಕೌರ್ (88; 92ಎ, 4x8, 6x3) ಆಸರೆಯಾದರು. ಕೌರ್ ಅವರು ಶನು ದೇವಿ (32; 75ಎ) ಅವರೊಂದಿಗೆ ಮೊದಲ ವಿಕೆಟ್ ಜೊತೆಯಾಟದಲ್ಲಿ 18.6 ಓವರ್ಗಳಲ್ಲಿ 83 ರನ್ ಸೇರಿಸಿ, ಉತ್ತಮ ಆರಂಭ ಒದಗಿಸಿದರು.</p>.<p>ಆದರೆ, ಕರ್ನಾಟಕ ಬೌಲರ್ಗಳ ಸಾಂಘಿಕ ದಾಳಿ ಎದುರು ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಸ್ಪಿನ್ನರ್ ವಂದಿತಾ ಕೆ. ರಾವ್ 2 ವಿಕೆಟ್ ಪಡೆದರೆ, ನಮಿತಾ ಡಿಸೋಜಾ, ಸಾಲೊನಿ ಪಿ. ಹಾಗೂ ಮಿಥಿಲಾ ವಿನೋದ್ ತಲಾ ಒಂದು ವಿಕೆಟ್ ಪಡೆದರು. ರುದ್ರಾಕ್ಷಿ ಚಿಬ್ ಪಡೆಯು 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 211 ರನ್ ಗಳಿಸಿತು.</p>.<p>ಗುರಿ ಬೆನ್ನಟ್ಟಿದ ರಾಜ್ಯ ತಂಡಕ್ಕೆ ಪ್ರೇರಣಾ ಜಿ.ಆರ್. (32; 45ಎ, 4x4) ಹಾಗೂ ರಚಿತಾ ಹತ್ವಾರ್ (33; 47ಎ, 4x6) ಅವರು ಮೊದಲ ವಿಕೆಟ್ಗೆ 61 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಕ್ಕಿ ಪ್ರಸಾದ್ 17 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 33 ರನ್ ಸೂರೆ ಮಾಡಿದರು.</p>.<p>ನಾಯಕಿ ಚಾಂದಸಿ ಕೃಷ್ಣಮೂರ್ತಿ (ಔಟಾಗದೇ 42; 62 ಎ, 4x5) ಹಾಗೂ ಮಿಥಿಲಾ (ಔಟಾಗದೇ 41; 44ಎ, 4x6) ಅವರು ಮುರಿಯದ ಐದನೇ ವಿಕೆಟ್ ಜೊತೆಯಾಟದಲ್ಲಿ 89 ರನ್ ಸೇರಿಸಿದರು. ಕರ್ನಾಟಕ ತಂಡವು 40.3 ಓವರ್ಗಳಲ್ಲಿ 4 ವಿಕೆಟ್ಗೆ 212 ರನ್ ಗಳಿಸಿ, ಸುಲಭವಾಗಿ ಗುರಿ ಮುಟ್ಟಿತು.</p>.<p><strong>ಸಂಕ್ಷಿಪ್ತ ಸ್ಕೋರು: ಜಮ್ಮು ಮತ್ತು ಕಾಶ್ಮೀರ:</strong> 50 ಓವರ್ಗಳಲ್ಲಿ 7 ವಿಕೆಟ್ಗೆ 211 (ಬವನ್ದೀಪ್ ಕೌರ್ 88, ಶನು ದೇವಿ 32; ವಂದಿತಾ ಕೆ. ರಾವ್ 45ಕ್ಕೆ2); ಕರ್ನಾಟಕ: 40.3 ಓವರ್ಗಳಲ್ಲಿ 4 ವಿಕೆಟ್ಗೆ 212 (ಚಾಂದಸಿ ಕೃಷ್ಣಮೂರ್ತಿ ಔಟಾಗದೇ 42, ಮಿಥಿಲಾ ವಿನೋದ್ ಔಟಾಗದೇ 41; ರುದ್ರಾಕ್ಷಿ ಚಿಬ್ 38ಕ್ಕೆ2).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>