<p><strong>ಉಡುಪಿ: </strong>`ತಾಂತ್ರಿಕ ಪ್ರಗತಿಯಿಂದ ಅಂಚೆ ಇಲಾಖೆ ಭಾರಿ ಸವಾಲುಗಳನ್ನು ಎದುರಿಸಬೇಕಾಗಿದ್ದು ಇಂಥ ಸಂದರ್ಭದಲ್ಲಿ ಅಂಚೆ ನೌಕರರ ಬೇಡಿಕೆಗಳನ್ನು ಬದಲಾಗುತ್ತಿರುವ ತಾಂತ್ರಿಕ ಸ್ಥಿತಿಗತಿಗಳೊಂದಿಗೆ ಹೊಂದಾಣಿಕೆ ಮಾಡಿ ಅನುಷ್ಠಾನಗೊಳಿಸುವ ಬಗ್ಗೆ ಚಿಂತನೆಗಳು ನಡೆಯಬೇಕಿದೆ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಇಲ್ಲಿ ಅಭಿಪ್ರಾಯಪಟ್ಟರು.<br /> <br /> ಅಖಿಲ ಭಾರತ ಅಂಚೆ ನೌಕರರ (ಆರ್ಎಂಎಸ್ ಮತ್ತು ಎಂಎಂಎಸ್-ಗ್ರೂಪ್ `ಸಿ~)ಸಂಘಟನೆಯ ಕರ್ನಾಟಕ ವಲಯದ ವತಿಯಿಂದ ಬನ್ನಂಜೆಯಲ್ಲಿ ಭಾನುವಾರ ಆಯೋಜಿಸಿದ್ದ ಸಮ್ಮೇಳನದಲ್ಲಿ ಅವರು ಮಾತನಾಡಿದರು. <br /> <br /> `ಪ್ರಸ್ತುತ 2ಜಿ, 3ಜಿ ಯುಗ, ಮೊಬೈಲ್, ಎಸ್ಎಂಎಸ್, ಅಂತರ್ಜಾಲದಲ್ಲಿ ಕ್ರಾಂತಿಯಾಗಿದೆ. ಮಾಹಿತಿ ತಂತ್ರಜ್ಞಾನ ವ್ಯಾಪಕವಾಗಿ ಹರಡಿಕೊಂಡಿದೆ. ಸಂವಹನ ಕ್ಷೇತ್ರ ವಿಶ್ವವ್ಯಾಪಿವಾಗಿ ವಿಸ್ತರಿಸಿಕೊಂಡಿದೆ. ಹೀಗಿದ್ದಾಗಲೂ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಅಂಚೆ ನೌಕರರೇ ಈಗಲೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದರು.<br /> <br /> `ಅಂಚೆ ಇಲಾಖೆ ನಮ್ಮ ದೇಶದಲ್ಲಿ ಅತ್ಯಂತ ಗೌರವಾನ್ವಿತ, ಭ್ರಷ್ಟಾಚಾರ ಮುಕ್ತ ಇಲಾಖೆ. ಅದರಲ್ಲಿ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳುವಾಗ ಯಾವುದೇ ರಾಜಕಾರಣಿಗಳ ಶಿಫಾರಸು ಕೂಡ ಇರುವುದಿಲ್ಲ. ಅಂತಹ ಇಲಾಖೆಯ ನೌಕರರ ಯೋಗ್ಯವಾದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧ~ ಎಂದರು.<br /> <br /> ನೌಕರರ ಸಂಘಟನೆಯ ಮಾಜಿ ಕಾರ್ಯದರ್ಶಿ ಸಿ.ಸಿ.ಪಿಳ್ಳೈ ಮಾತನಾಡಿ, ಅಂಚೆ ಇಲಾಖೆಯಿಂದ ಸರ್ಕಾರಕ್ಕೆ ಸುಮಾರು 6 ಸಾವಿರ ಕೋಟಿ ನಷ್ಟವಾಗಿದೆ. 2014ರೊಳಗೆ ಅದನ್ನು ಸರಿದೂಗಿಸುವ ಯೋಜನೆಗಳನ್ನು ಕೇಂದ್ರ ಯೋಜನಾ ಆಯೋಗವು ಹಮ್ಮಿಕೊಂಡಿದೆ. ಅಂಚೆ ಇಲಾಖೆಯ ಖರ್ಚು ವೆಚ್ಚ ಕಡಿತಗೊಳಿಸಲು ಸರ್ಕಾರ ತೊಡಗಿರುವುದು ಸರಿಯಲ್ಲ ಎಂದರು.<br /> <br /> ಕೇಂದ್ರದ ಯುಪಿಎ ಸರ್ಕಾರ ಕಾರ್ಮಿಕರ ವಿರೋಧಿ ನೀತಿ ಅನುರಿಸುತ್ತಿದೆ. ಈ ವಿಷಯದಲ್ಲಿ ಅದಕ್ಕೆ ಬಿಜೆಪಿ ಕೂಡ ಸಾಥ್ ನೀಡುತ್ತಿದೆ ಎಂದು ಆರೋಪಿಸಿದರು. <br /> <br /> ಇದಕ್ಕೂ ಮುನ್ನ ಮಾತನಾಡಿದ ಈ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎ.ಸಿ.ಎ.ಕರೀಂ, ಅಂಚೆ ಇಲಾಖೆಯ ಕೆಳಹಂತದ ನೌಕರರ ವರ್ಗ ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು. <br /> <br /> ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ನೌಕರರಂತೆ ಕೆಲಸ ನಿರ್ವಹಿಸುತ್ತಿರುವ ಇಲಾಖೇತರ ಸಿಬ್ಬಂದಿ ಕೂಡ ಬಹಳ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕೂಡ ಸರ್ಕಾರ ಸೌಲಭ್ಯ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.<br /> <br /> ಕೇಂದ್ರ ಸರ್ಕಾರ ಅಂಚೆ ಇಲಾಖೆಯನ್ನು ಖಾಸಗೀಕರಣ ಮಾಡಲು ಯತ್ನಿಸುತ್ತಿದೆ. ಮೆಕೆಂಜೆ ಎಂಬ ವಿದೇಶಿ ಸಹಲೆಗಾರರ ರೀತಿನೀತಿಗಳನ್ನು ಅನುಸರಿಲು ಹೊರಟಿದೆ. ಅಲ್ಲದೇ ಸಾವಿರಾರು ಅಂಚೆಕಚೇರಿ ಮುಚ್ಚಲು ಹೊರಟಿದೆ. ಅದನ್ನು ತಡೆಯಬೇಕು ಎಂದು ಆಗ್ರಹಿಸಿದರು.<br /> <br /> `ರಾಷ್ಟ್ರದಲ್ಲಿ ಪ್ರಬಲ ಲೋಕಪಾಲ ಮಸೂದೆ ಜಾರಿಯಾಗಬೇಕು. ಕಾನೂನಿಗಿಂತ ಯಾರೂ ಕೂಡ ಮೇಲಲ್ಲ. ನಮ್ಮ ರಾಜ್ಯದಲ್ಲಿ ಹಿಂದಿನ ಲೋಕಾಯುಕ್ತ ಸಂತೋಷ ಹೆಗ್ಡೆಯವರು ಭ್ರಷ್ಟರ ಬಣ್ಣವನ್ನು ಬಯಲು ಮಾಡುವ ಮೂಲಕ ಬಹಳ ಮಹತ್ವದ ಕೆಲಸ~ ಮಾಡಿದರು. <br /> <br /> ಧರ್ಮದರ್ಶಿ ಡಾ.ವಿಜಯ ಬಲ್ಲಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಘಟನೆ ಜಂಟಿ ಅಧ್ಯಕ್ಷರಾದ ಪಿ.ಶೇಷಗಿರಿ ರಾವ್ ಹಾಗೂ ಟಿ.ಬಿ.ಹರೀಶ್, ಪ್ರಧಾನ ಕಾರ್ಯದರ್ಶಿ ಗಿರಿರಾಜ್ ಸಿಂಗ್, ಪಿ.ಸುರೇಶ್, ವಲಯ ಕಾರ್ಯದರ್ಶಿ ಎ.ಮಾರುತಿ, ಜಿ.ಎಸ್. ನಾಗೇಂದ್ರ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ವಿ.ಜಿ.ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ: </strong>`ತಾಂತ್ರಿಕ ಪ್ರಗತಿಯಿಂದ ಅಂಚೆ ಇಲಾಖೆ ಭಾರಿ ಸವಾಲುಗಳನ್ನು ಎದುರಿಸಬೇಕಾಗಿದ್ದು ಇಂಥ ಸಂದರ್ಭದಲ್ಲಿ ಅಂಚೆ ನೌಕರರ ಬೇಡಿಕೆಗಳನ್ನು ಬದಲಾಗುತ್ತಿರುವ ತಾಂತ್ರಿಕ ಸ್ಥಿತಿಗತಿಗಳೊಂದಿಗೆ ಹೊಂದಾಣಿಕೆ ಮಾಡಿ ಅನುಷ್ಠಾನಗೊಳಿಸುವ ಬಗ್ಗೆ ಚಿಂತನೆಗಳು ನಡೆಯಬೇಕಿದೆ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಇಲ್ಲಿ ಅಭಿಪ್ರಾಯಪಟ್ಟರು.<br /> <br /> ಅಖಿಲ ಭಾರತ ಅಂಚೆ ನೌಕರರ (ಆರ್ಎಂಎಸ್ ಮತ್ತು ಎಂಎಂಎಸ್-ಗ್ರೂಪ್ `ಸಿ~)ಸಂಘಟನೆಯ ಕರ್ನಾಟಕ ವಲಯದ ವತಿಯಿಂದ ಬನ್ನಂಜೆಯಲ್ಲಿ ಭಾನುವಾರ ಆಯೋಜಿಸಿದ್ದ ಸಮ್ಮೇಳನದಲ್ಲಿ ಅವರು ಮಾತನಾಡಿದರು. <br /> <br /> `ಪ್ರಸ್ತುತ 2ಜಿ, 3ಜಿ ಯುಗ, ಮೊಬೈಲ್, ಎಸ್ಎಂಎಸ್, ಅಂತರ್ಜಾಲದಲ್ಲಿ ಕ್ರಾಂತಿಯಾಗಿದೆ. ಮಾಹಿತಿ ತಂತ್ರಜ್ಞಾನ ವ್ಯಾಪಕವಾಗಿ ಹರಡಿಕೊಂಡಿದೆ. ಸಂವಹನ ಕ್ಷೇತ್ರ ವಿಶ್ವವ್ಯಾಪಿವಾಗಿ ವಿಸ್ತರಿಸಿಕೊಂಡಿದೆ. ಹೀಗಿದ್ದಾಗಲೂ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಅಂಚೆ ನೌಕರರೇ ಈಗಲೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದರು.<br /> <br /> `ಅಂಚೆ ಇಲಾಖೆ ನಮ್ಮ ದೇಶದಲ್ಲಿ ಅತ್ಯಂತ ಗೌರವಾನ್ವಿತ, ಭ್ರಷ್ಟಾಚಾರ ಮುಕ್ತ ಇಲಾಖೆ. ಅದರಲ್ಲಿ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳುವಾಗ ಯಾವುದೇ ರಾಜಕಾರಣಿಗಳ ಶಿಫಾರಸು ಕೂಡ ಇರುವುದಿಲ್ಲ. ಅಂತಹ ಇಲಾಖೆಯ ನೌಕರರ ಯೋಗ್ಯವಾದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧ~ ಎಂದರು.<br /> <br /> ನೌಕರರ ಸಂಘಟನೆಯ ಮಾಜಿ ಕಾರ್ಯದರ್ಶಿ ಸಿ.ಸಿ.ಪಿಳ್ಳೈ ಮಾತನಾಡಿ, ಅಂಚೆ ಇಲಾಖೆಯಿಂದ ಸರ್ಕಾರಕ್ಕೆ ಸುಮಾರು 6 ಸಾವಿರ ಕೋಟಿ ನಷ್ಟವಾಗಿದೆ. 2014ರೊಳಗೆ ಅದನ್ನು ಸರಿದೂಗಿಸುವ ಯೋಜನೆಗಳನ್ನು ಕೇಂದ್ರ ಯೋಜನಾ ಆಯೋಗವು ಹಮ್ಮಿಕೊಂಡಿದೆ. ಅಂಚೆ ಇಲಾಖೆಯ ಖರ್ಚು ವೆಚ್ಚ ಕಡಿತಗೊಳಿಸಲು ಸರ್ಕಾರ ತೊಡಗಿರುವುದು ಸರಿಯಲ್ಲ ಎಂದರು.<br /> <br /> ಕೇಂದ್ರದ ಯುಪಿಎ ಸರ್ಕಾರ ಕಾರ್ಮಿಕರ ವಿರೋಧಿ ನೀತಿ ಅನುರಿಸುತ್ತಿದೆ. ಈ ವಿಷಯದಲ್ಲಿ ಅದಕ್ಕೆ ಬಿಜೆಪಿ ಕೂಡ ಸಾಥ್ ನೀಡುತ್ತಿದೆ ಎಂದು ಆರೋಪಿಸಿದರು. <br /> <br /> ಇದಕ್ಕೂ ಮುನ್ನ ಮಾತನಾಡಿದ ಈ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎ.ಸಿ.ಎ.ಕರೀಂ, ಅಂಚೆ ಇಲಾಖೆಯ ಕೆಳಹಂತದ ನೌಕರರ ವರ್ಗ ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು. <br /> <br /> ಗ್ರಾಮೀಣ ಪ್ರದೇಶಗಳಲ್ಲಿ ಅಂಚೆ ನೌಕರರಂತೆ ಕೆಲಸ ನಿರ್ವಹಿಸುತ್ತಿರುವ ಇಲಾಖೇತರ ಸಿಬ್ಬಂದಿ ಕೂಡ ಬಹಳ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕೂಡ ಸರ್ಕಾರ ಸೌಲಭ್ಯ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.<br /> <br /> ಕೇಂದ್ರ ಸರ್ಕಾರ ಅಂಚೆ ಇಲಾಖೆಯನ್ನು ಖಾಸಗೀಕರಣ ಮಾಡಲು ಯತ್ನಿಸುತ್ತಿದೆ. ಮೆಕೆಂಜೆ ಎಂಬ ವಿದೇಶಿ ಸಹಲೆಗಾರರ ರೀತಿನೀತಿಗಳನ್ನು ಅನುಸರಿಲು ಹೊರಟಿದೆ. ಅಲ್ಲದೇ ಸಾವಿರಾರು ಅಂಚೆಕಚೇರಿ ಮುಚ್ಚಲು ಹೊರಟಿದೆ. ಅದನ್ನು ತಡೆಯಬೇಕು ಎಂದು ಆಗ್ರಹಿಸಿದರು.<br /> <br /> `ರಾಷ್ಟ್ರದಲ್ಲಿ ಪ್ರಬಲ ಲೋಕಪಾಲ ಮಸೂದೆ ಜಾರಿಯಾಗಬೇಕು. ಕಾನೂನಿಗಿಂತ ಯಾರೂ ಕೂಡ ಮೇಲಲ್ಲ. ನಮ್ಮ ರಾಜ್ಯದಲ್ಲಿ ಹಿಂದಿನ ಲೋಕಾಯುಕ್ತ ಸಂತೋಷ ಹೆಗ್ಡೆಯವರು ಭ್ರಷ್ಟರ ಬಣ್ಣವನ್ನು ಬಯಲು ಮಾಡುವ ಮೂಲಕ ಬಹಳ ಮಹತ್ವದ ಕೆಲಸ~ ಮಾಡಿದರು. <br /> <br /> ಧರ್ಮದರ್ಶಿ ಡಾ.ವಿಜಯ ಬಲ್ಲಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಘಟನೆ ಜಂಟಿ ಅಧ್ಯಕ್ಷರಾದ ಪಿ.ಶೇಷಗಿರಿ ರಾವ್ ಹಾಗೂ ಟಿ.ಬಿ.ಹರೀಶ್, ಪ್ರಧಾನ ಕಾರ್ಯದರ್ಶಿ ಗಿರಿರಾಜ್ ಸಿಂಗ್, ಪಿ.ಸುರೇಶ್, ವಲಯ ಕಾರ್ಯದರ್ಶಿ ಎ.ಮಾರುತಿ, ಜಿ.ಎಸ್. ನಾಗೇಂದ್ರ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ವಿ.ಜಿ.ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>