<p><strong>ಗದಗ:</strong> ಸರಿ ಸುಮಾರು ಆರೇಳು ವರ್ಷದ ಸತತ ಹೋರಾಟಕ್ಕೆ ಈಗ ಸ್ವಲ್ಪ ಜಯ ಸಿಕ್ಕಂತೆ ಆಗಿದೆ. ಅದು ಗದಗ-ವಾಡಿ, ಗದಗ-ಹಾವೇರಿ ಹೊಸ ರೈಲು ಮಾರ್ಗದ ವಿಚಾರದಲ್ಲಿ.<br /> <br /> ಕೇಂದ್ರ ಸರ್ಕಾರ ಬುಧವಾರ ಮಂಡಿಸಿದ ರೈಲ್ವೆ ಮುಂಗಡ ಪತ್ರದಲ್ಲಿ ಈ ಎರಡು ಹೊಸ ಮಾರ್ಗಗಳಿಗೆ ಅನುಮತಿಯನ್ನು ನೀಡಿ, ಯೋಜನಾ ಅನುಷ್ಠಾನಕ್ಕಾಗಿ ಅರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸಿರುವು ದರಿಂದ ಇಂದಲ್ಲ ನಾಳೆ ಅಂತೂ ಈ ಮಾರ್ಗಗಳಲ್ಲಿ ರೈಲು ಓಡಾಡುತ್ತದೆ ಎನ್ನುವ ಆಶಾವಾದವನ್ನು ರೈಲ್ವೆ ಹೋರಾಟಗಾರರು ತಾಳಿದ್ದಾರೆ.<br /> <br /> ಮುಂಬೈ ಕರ್ನಾಟಕ ಹಾಗೂ ಹೈ-ಕ ನಡುವೆ ಕೊಂಡಿಯಾಗಿರುವುದು ಗದಗ. ಇಲ್ಲಿಂದ ವಾಡಿಗೆ ರೈಲು ಮಾರ್ಗ ರಚನೆಯಾದರೆ ದಕ್ಷಿಣ ಕರ್ನಾಟದ ಜನರೂ ಕೂಡಾ ನೇರವಾಗಿ ದೆಹಲಿಗೆ ಪ್ರಯಾಣಿಸಬಹುದಾಗಿದೆ. ಅಲ್ಲದೆ ಹುಬ್ಬಳ್ಳಿ-ಗುಲ್ಬರ್ಗಾಕ್ಕೂ ನೇರ ಸಂಪರ್ಕವಾಗುತ್ತದೆ.<br /> <br /> ಈ ಹೊಸ ಮಾರ್ಗವನ್ನು 2008-09ರ ಬಜೆಟ್ನಲ್ಲಿ ಘೋಷಣೆ ಮಾಡಲಾಗಿತ್ತು. ಸುಮಾರು 1395 ಕೋಟಿ ರೂಪಾಯಿ ವೆಚ್ಚದ 252.50 ಕಿಲೋಮೀಟರ್ ದೂರದ ಮಾರ್ಗ ಇದಾಗಿದೆ. ಈ ಮಾರ್ಗ ಹೋಗುವ ದಾರಿಯಲ್ಲಿ ಸಿಮೆಂಟ್ ಕಾರ್ಖಾಗಳಿವೆ. ಪ್ರಸ್ತುತ ಹುಬ್ಬಳ್ಳಿ ಕಡೆಗೆ ಸಿಮೆಂಟ್ ವ್ಯಾಗನ್ಗಳು ಬರಬೇಕಾದರೆ ಆಂಧ್ರ ಪ್ರದೇಶದ ಗುಂತಕಲ್ ಜಂಕ್ಷನ್ ಬಳಸಬೇಕು. <br /> <br /> ಆದರೆ ಈ ಮಾರ್ಗ ಪ್ರಾರಂಭ ವಾದರೇ ವ್ಯಾಗನ್ಗಳು ಗದುಗಿ ನಿಂದಲೇ ಹೋಗಬಹುದು. ಇದ ರಿಂದ ವಾರ್ಷಿಕ ಸುಮಾರು 300ರಿಂದ 400 ಕೋಟಿ ಆದಾಯ ರೈಲ್ವೆ ಇಲಾಖೆಗೆ ದೊರೆಯುತ್ತದೆ ಎಂದು ನೈರುತ್ಯ ರೈಲ್ವೆ ಬಳಕೆದಾರರ ಸಮಿತಿ ಸದಸ್ಯ ಆದಪ್ಪಗೌಡರು ಅಭಿಪ್ರಾಯ ಪಡುತ್ತಾರೆ.<br /> <br /> <strong>ಇನ್ನೂ ಹಾವೇರಿ-ಗದಗ ಮಾರ್ಗ</strong><br /> ವಾಸ್ತವದಲ್ಲಿ ಇದು ಹಾವೇರಿ ಜಿಲ್ಲೆಯ ಯಲುವಿಗಿಗೆ ಸಂಪರ್ಕ ಕಲ್ಪಿಸುತ್ತದೆ. 299 ಕೋಟಿ ವೆಚ್ಚದ 53 ಕಿಲೋ ಮೀಟರ್ ದೂರದ ಈ ಮಾರ್ಗವು ಪ್ರಾರಂಭವಾದರೇ ಬೆಂಗಳೂರು- ಮೈಸೂರು ಕಡೆಗೆ ಹೋಗುವ ಪ್ರಯಾಣಿಕರಿಗೆ ಬೈಪಾಸ್ ದಾರಿ ಸಿಕ್ಕಂತೆ ಆಗುತ್ತದೆ.<br /> <br /> ಈ ಮಾರ್ಗಕ್ಕೆ 2006ರಿಂದಲೇ ಹೋರಾಟ ಪ್ರಾರಂಭವಾಗಿತ್ತು. ಸ್ಥಳೀಯ ರಾಜಕೀಯ ನಾಯಕರು, ರೈಲ್ವೆ ಹೋರಾಟಗಾರರು ಹಲವಾರು ಬಾರಿ ಮನವಿಯನ್ನು ಸಲ್ಲಿಸಿದ್ದರು. ಆದರೆ ರೈಲ್ವೆ ಇಲಾಖೆ ಈ ಮಾರ್ಗ ಅಷ್ಟೊಂದು ಲಾಭದಾಯಕವಾಗಿಲ್ಲ ಎನ್ನುವ ಉತ್ತರನ್ನು ಕೊಟ್ಟಿತ್ತು. ಬಳಿಕ ಸಮರ್ಥವಾದ ಮನವರಿಕೆಯಾದ ಬಳಿಕ ಮಾರ್ಗಕ್ಕೆ ಹಸಿರುನಿಶಾನೆ ಸಿಕ್ಕಿದೆ.<br /> <br /> <strong>ಸಿಹಿ-ಕಹಿ</strong><br /> ರೈಲ್ವೆ ಬಜೆಟ್ ಗದಗ ಭಾಗಕ್ಕೆ ಸಿಹಿ-ಕಹಿ ಅನುಭವ ನೀಡಿದೆ. ಹುಬ್ಬಳ್ಳಿ-ದೆಹಲಿ, ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ ರೈಲು ಆರಂಭಿಸಬೇಕು ಎಂದು ಕೇಳಿಕೊಳ್ಳಲಾಗುತ್ತು.ಆದರೆ ಅದು ಘೋಷಣೆಯಾಗಿಲ್ಲ. ಸೊಲ್ಲಾ ಪುರ- ಗದಗ ಮಾರ್ಗ ದ್ವಿಪಥ ಸಮೀಕ್ಷೆ ಸ್ವಾಗತರ್ಹ. <br /> <br /> ರೈಲ್ವೆ ಹಾಗೂ ಪ್ರಯಾಣಿಕರಿಗೆ ಮೂಲಭೂತ ಸೌಲಭ್ಯ ನೀಡಲು ಹಣ ಕ್ರೂಢೀಕರಿಸುವ ಸಲುವಾಗಿ ಪ್ರಯಾಣದರವನ್ನು ಹೆಚ್ಚು ಮಾಡಿರುವುದು ಸರಿಯಾಗಿದೆ ಎಂದು ಇಲ್ಲಿನ ವಾಣಿಜ್ಯೋದ್ಯಮ ಸಂಸ್ಥೆ ಪದಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ:</strong> ಸರಿ ಸುಮಾರು ಆರೇಳು ವರ್ಷದ ಸತತ ಹೋರಾಟಕ್ಕೆ ಈಗ ಸ್ವಲ್ಪ ಜಯ ಸಿಕ್ಕಂತೆ ಆಗಿದೆ. ಅದು ಗದಗ-ವಾಡಿ, ಗದಗ-ಹಾವೇರಿ ಹೊಸ ರೈಲು ಮಾರ್ಗದ ವಿಚಾರದಲ್ಲಿ.<br /> <br /> ಕೇಂದ್ರ ಸರ್ಕಾರ ಬುಧವಾರ ಮಂಡಿಸಿದ ರೈಲ್ವೆ ಮುಂಗಡ ಪತ್ರದಲ್ಲಿ ಈ ಎರಡು ಹೊಸ ಮಾರ್ಗಗಳಿಗೆ ಅನುಮತಿಯನ್ನು ನೀಡಿ, ಯೋಜನಾ ಅನುಷ್ಠಾನಕ್ಕಾಗಿ ಅರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸಿರುವು ದರಿಂದ ಇಂದಲ್ಲ ನಾಳೆ ಅಂತೂ ಈ ಮಾರ್ಗಗಳಲ್ಲಿ ರೈಲು ಓಡಾಡುತ್ತದೆ ಎನ್ನುವ ಆಶಾವಾದವನ್ನು ರೈಲ್ವೆ ಹೋರಾಟಗಾರರು ತಾಳಿದ್ದಾರೆ.<br /> <br /> ಮುಂಬೈ ಕರ್ನಾಟಕ ಹಾಗೂ ಹೈ-ಕ ನಡುವೆ ಕೊಂಡಿಯಾಗಿರುವುದು ಗದಗ. ಇಲ್ಲಿಂದ ವಾಡಿಗೆ ರೈಲು ಮಾರ್ಗ ರಚನೆಯಾದರೆ ದಕ್ಷಿಣ ಕರ್ನಾಟದ ಜನರೂ ಕೂಡಾ ನೇರವಾಗಿ ದೆಹಲಿಗೆ ಪ್ರಯಾಣಿಸಬಹುದಾಗಿದೆ. ಅಲ್ಲದೆ ಹುಬ್ಬಳ್ಳಿ-ಗುಲ್ಬರ್ಗಾಕ್ಕೂ ನೇರ ಸಂಪರ್ಕವಾಗುತ್ತದೆ.<br /> <br /> ಈ ಹೊಸ ಮಾರ್ಗವನ್ನು 2008-09ರ ಬಜೆಟ್ನಲ್ಲಿ ಘೋಷಣೆ ಮಾಡಲಾಗಿತ್ತು. ಸುಮಾರು 1395 ಕೋಟಿ ರೂಪಾಯಿ ವೆಚ್ಚದ 252.50 ಕಿಲೋಮೀಟರ್ ದೂರದ ಮಾರ್ಗ ಇದಾಗಿದೆ. ಈ ಮಾರ್ಗ ಹೋಗುವ ದಾರಿಯಲ್ಲಿ ಸಿಮೆಂಟ್ ಕಾರ್ಖಾಗಳಿವೆ. ಪ್ರಸ್ತುತ ಹುಬ್ಬಳ್ಳಿ ಕಡೆಗೆ ಸಿಮೆಂಟ್ ವ್ಯಾಗನ್ಗಳು ಬರಬೇಕಾದರೆ ಆಂಧ್ರ ಪ್ರದೇಶದ ಗುಂತಕಲ್ ಜಂಕ್ಷನ್ ಬಳಸಬೇಕು. <br /> <br /> ಆದರೆ ಈ ಮಾರ್ಗ ಪ್ರಾರಂಭ ವಾದರೇ ವ್ಯಾಗನ್ಗಳು ಗದುಗಿ ನಿಂದಲೇ ಹೋಗಬಹುದು. ಇದ ರಿಂದ ವಾರ್ಷಿಕ ಸುಮಾರು 300ರಿಂದ 400 ಕೋಟಿ ಆದಾಯ ರೈಲ್ವೆ ಇಲಾಖೆಗೆ ದೊರೆಯುತ್ತದೆ ಎಂದು ನೈರುತ್ಯ ರೈಲ್ವೆ ಬಳಕೆದಾರರ ಸಮಿತಿ ಸದಸ್ಯ ಆದಪ್ಪಗೌಡರು ಅಭಿಪ್ರಾಯ ಪಡುತ್ತಾರೆ.<br /> <br /> <strong>ಇನ್ನೂ ಹಾವೇರಿ-ಗದಗ ಮಾರ್ಗ</strong><br /> ವಾಸ್ತವದಲ್ಲಿ ಇದು ಹಾವೇರಿ ಜಿಲ್ಲೆಯ ಯಲುವಿಗಿಗೆ ಸಂಪರ್ಕ ಕಲ್ಪಿಸುತ್ತದೆ. 299 ಕೋಟಿ ವೆಚ್ಚದ 53 ಕಿಲೋ ಮೀಟರ್ ದೂರದ ಈ ಮಾರ್ಗವು ಪ್ರಾರಂಭವಾದರೇ ಬೆಂಗಳೂರು- ಮೈಸೂರು ಕಡೆಗೆ ಹೋಗುವ ಪ್ರಯಾಣಿಕರಿಗೆ ಬೈಪಾಸ್ ದಾರಿ ಸಿಕ್ಕಂತೆ ಆಗುತ್ತದೆ.<br /> <br /> ಈ ಮಾರ್ಗಕ್ಕೆ 2006ರಿಂದಲೇ ಹೋರಾಟ ಪ್ರಾರಂಭವಾಗಿತ್ತು. ಸ್ಥಳೀಯ ರಾಜಕೀಯ ನಾಯಕರು, ರೈಲ್ವೆ ಹೋರಾಟಗಾರರು ಹಲವಾರು ಬಾರಿ ಮನವಿಯನ್ನು ಸಲ್ಲಿಸಿದ್ದರು. ಆದರೆ ರೈಲ್ವೆ ಇಲಾಖೆ ಈ ಮಾರ್ಗ ಅಷ್ಟೊಂದು ಲಾಭದಾಯಕವಾಗಿಲ್ಲ ಎನ್ನುವ ಉತ್ತರನ್ನು ಕೊಟ್ಟಿತ್ತು. ಬಳಿಕ ಸಮರ್ಥವಾದ ಮನವರಿಕೆಯಾದ ಬಳಿಕ ಮಾರ್ಗಕ್ಕೆ ಹಸಿರುನಿಶಾನೆ ಸಿಕ್ಕಿದೆ.<br /> <br /> <strong>ಸಿಹಿ-ಕಹಿ</strong><br /> ರೈಲ್ವೆ ಬಜೆಟ್ ಗದಗ ಭಾಗಕ್ಕೆ ಸಿಹಿ-ಕಹಿ ಅನುಭವ ನೀಡಿದೆ. ಹುಬ್ಬಳ್ಳಿ-ದೆಹಲಿ, ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ ರೈಲು ಆರಂಭಿಸಬೇಕು ಎಂದು ಕೇಳಿಕೊಳ್ಳಲಾಗುತ್ತು.ಆದರೆ ಅದು ಘೋಷಣೆಯಾಗಿಲ್ಲ. ಸೊಲ್ಲಾ ಪುರ- ಗದಗ ಮಾರ್ಗ ದ್ವಿಪಥ ಸಮೀಕ್ಷೆ ಸ್ವಾಗತರ್ಹ. <br /> <br /> ರೈಲ್ವೆ ಹಾಗೂ ಪ್ರಯಾಣಿಕರಿಗೆ ಮೂಲಭೂತ ಸೌಲಭ್ಯ ನೀಡಲು ಹಣ ಕ್ರೂಢೀಕರಿಸುವ ಸಲುವಾಗಿ ಪ್ರಯಾಣದರವನ್ನು ಹೆಚ್ಚು ಮಾಡಿರುವುದು ಸರಿಯಾಗಿದೆ ಎಂದು ಇಲ್ಲಿನ ವಾಣಿಜ್ಯೋದ್ಯಮ ಸಂಸ್ಥೆ ಪದಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>