<p><strong>ಬಾಗಲಕೋಟೆ:</strong> ಜಗತ್ತಿನ ಜನಸಂಖ್ಯೆ ಹೆಚ್ಚುತ್ತಿರುವಂತೆಯೇ ವಿವಿಧ ಕಾರಣಗಳಿಂದ ಅಂಧತ್ವಕ್ಕೆ ಗುರಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಜಗತ್ತಿನಾದ್ಯಂತ ಸುಮಾರು 284 ದಶಲಕ್ಷ ಜನರು ಅಂಧತ್ವದಿಂದ ಬಳಲುತ್ತಿದ್ದಾರೆ ಎಂದು ಬಸವ ಜ್ಯೋತಿ ನೇತ್ರಾಲಯದ ವೈದ್ಯ ಡಾ.ರಾಜಶೇಖರ ಪಾಟೀಲ ಕಳವಳ ವ್ಯಕ್ತಪಡಿಸಿದರು.<br /> <br /> ನಗರದ ಬಸವಜ್ಯೋತಿ ನೇತ್ರಾಲಯ ಮತ್ತು ಧನುಷ್ ಶಿಕ್ಷಣ ಸಂಸ್ಥೆಯ ಎ.ವಿ. ನರ್ಸಿಂಗ್ ಕಾಲೇಜಿನ ಆಶ್ರಯದಲ್ಲಿ ಗುರುವಾರ `ವಿಶ್ವ ದೃಷ್ಟಿ ದಿನ~ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.<br /> <br /> ಈ ಅಂಧತ್ವಕ್ಕೆ ಕಣ್ಣಿನ ಪೊರೆಯಲ್ಲದೇ, ಕರಿಗುಡ್ಡೆಯ ತೊಂದರೆಗಳು, ಮಧುಮೇಹದಿಂದುಂಟಾಗುವ ಅಕ್ಷಿಪಟಲದ ತೊಂದರೆ, ಮೆಳ್ಳಗಣ್ಣು ಮತ್ತು ಅವಧಿ ಮುನ್ನ ಜನಿಸಿದ ನವಜಾತ ಶಿಶುಗಳ ಕಣ್ಣಿನ ತೊಂದರೆಯಿಂದ ಅಂಧತ್ವ ಉಂಟಾಗುತ್ತದೆ ಎಂದು ಹೇಳಿದರು.<br /> <br /> ಬಸವೇಶ್ವರ ವೃತ್ತದಿಂದ ಜಾಥಾ ಆರಂಭವಾಗಿ ವಲ್ಲಭಭಾಯಿ ವೃತ್ತದ ಮೂಲಕ ಹಳೇ ಐ.ಬಿ. ರಸ್ತೆಯ ಮುಖಾಂತರ ಬಸವಜ್ಯೋತಿ ನೇತ್ರಾಲಯಕ್ಕೆ ಆಗಮಿಸಿತು. ಎ.ವಿ. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರಕಾಶ ಹಾಲವರ, ಪರಶುರಾಮ ಸಂಗಮ, ಸಂತೋಷ ಕೋರಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಜಗತ್ತಿನ ಜನಸಂಖ್ಯೆ ಹೆಚ್ಚುತ್ತಿರುವಂತೆಯೇ ವಿವಿಧ ಕಾರಣಗಳಿಂದ ಅಂಧತ್ವಕ್ಕೆ ಗುರಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಜಗತ್ತಿನಾದ್ಯಂತ ಸುಮಾರು 284 ದಶಲಕ್ಷ ಜನರು ಅಂಧತ್ವದಿಂದ ಬಳಲುತ್ತಿದ್ದಾರೆ ಎಂದು ಬಸವ ಜ್ಯೋತಿ ನೇತ್ರಾಲಯದ ವೈದ್ಯ ಡಾ.ರಾಜಶೇಖರ ಪಾಟೀಲ ಕಳವಳ ವ್ಯಕ್ತಪಡಿಸಿದರು.<br /> <br /> ನಗರದ ಬಸವಜ್ಯೋತಿ ನೇತ್ರಾಲಯ ಮತ್ತು ಧನುಷ್ ಶಿಕ್ಷಣ ಸಂಸ್ಥೆಯ ಎ.ವಿ. ನರ್ಸಿಂಗ್ ಕಾಲೇಜಿನ ಆಶ್ರಯದಲ್ಲಿ ಗುರುವಾರ `ವಿಶ್ವ ದೃಷ್ಟಿ ದಿನ~ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.<br /> <br /> ಈ ಅಂಧತ್ವಕ್ಕೆ ಕಣ್ಣಿನ ಪೊರೆಯಲ್ಲದೇ, ಕರಿಗುಡ್ಡೆಯ ತೊಂದರೆಗಳು, ಮಧುಮೇಹದಿಂದುಂಟಾಗುವ ಅಕ್ಷಿಪಟಲದ ತೊಂದರೆ, ಮೆಳ್ಳಗಣ್ಣು ಮತ್ತು ಅವಧಿ ಮುನ್ನ ಜನಿಸಿದ ನವಜಾತ ಶಿಶುಗಳ ಕಣ್ಣಿನ ತೊಂದರೆಯಿಂದ ಅಂಧತ್ವ ಉಂಟಾಗುತ್ತದೆ ಎಂದು ಹೇಳಿದರು.<br /> <br /> ಬಸವೇಶ್ವರ ವೃತ್ತದಿಂದ ಜಾಥಾ ಆರಂಭವಾಗಿ ವಲ್ಲಭಭಾಯಿ ವೃತ್ತದ ಮೂಲಕ ಹಳೇ ಐ.ಬಿ. ರಸ್ತೆಯ ಮುಖಾಂತರ ಬಸವಜ್ಯೋತಿ ನೇತ್ರಾಲಯಕ್ಕೆ ಆಗಮಿಸಿತು. ಎ.ವಿ. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರಕಾಶ ಹಾಲವರ, ಪರಶುರಾಮ ಸಂಗಮ, ಸಂತೋಷ ಕೋರಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>