<p>`ಭಗವದ್ಗೀತೆ~ಯನ್ನು ಶಾಲಾ ಪಠ್ಯವಾಗಿ ಸೇರಿಸಲು ಜನಾಭಿಪ್ರಾಯವನ್ನು ಸರ್ಕಾರ ಕೇಳಿದೆ. ಕಳೆದ 60-65 ವರ್ಷಗಳಿಂದ ನಮ್ಮ ಶ್ರೇಷ್ಠ ಬಹುವಿಖ್ಯಾತ ಶಿಕ್ಷಣ ತಜ್ಞರಿಗೆ ಹೊಳೆಯದ ವಿಷಯ ನಮ್ಮ ಇಂದಿನ ಬಿಜೆಪಿ ಸರ್ಕಾರಕ್ಕೆ ಹೊಳೆದಿದೆ. <br /> <br /> ಎಲ್ಲಿ ಶಾಲೆಗಳು, ಶಿಕ್ಷಕರು ಬೇಕೋ ಅಲ್ಲಿ ಶಾಲೆಗಳಿಲ್ಲ. ವಿಜ್ಞಾನ ಬೋಧಿಸಲು ಶಿಕ್ಷಕರಿಲ್ಲ. ಶಾಲೆಯಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ. ಶೌಚಾಲಯಗಳಿಲ್ಲ. ಇದ್ದರೂ ಅವು ಉಪಯೋಗಿಸುವ ಸ್ಥಿತಿಯಲ್ಲಿಲ್ಲ, ಕೀಲಿ ಜಡಿದಿದ್ದಾರೆ. <br /> <br /> ಕುಳಿತುಕೊಳ್ಳಲು ಆಸನಗಳಿಲ್ಲ. ಶಾಲೆಗಳು ಕುರಿದೊಡ್ಡಿಗಳಾಗಿವೆ. ಅವುಗಳನ್ನು ಸುಧಾರಿಸುವ ಪ್ರಾಮಾಣಿಕ ಪ್ರಯತ್ನ ಈ ಸರ್ಕಾರ ಮಾಡುತ್ತಿಲ್ಲ. ವಾಚನಾಲಯಗಳಿಲ್ಲ. ಇದ್ದರೂ ವಿದ್ಯಾರ್ಥಿಗಳಿಗೆ ಲಭ್ಯವಿಲ್ಲ. ಇಂಥ ಸ್ಥಿತಿಯಲ್ಲಿ ಭಗವದ್ಗೀತೆಯನ್ನು ಪಠ್ಯವಾಗಿಸಿದರೆ ಕಲಿಸುವವರಾರು? ಬಿಜೆಪಿ ಸರ್ಕಾರಕ್ಕೆ ತನ್ನ ಆರ್ಎಸ್ಎಸ್ ಅಜೆಂಡಾ ಪೂರೈಸುವ ಆತುರವಿದ್ದಂತೆ ಕಾಣುತ್ತದೆ. <br /> <br /> ಮಕ್ಕಳು ಚೆನ್ನಾಗಿ ಕನ್ನಡದಲ್ಲಿ ಓದಿ ಬರೆದರೆ ಅದೇ ಮಹಾ ಎಂದಾಗ ಈ ಭಗವದ್ಗೀತೆಯನ್ನು ಪಠ್ಯ ಮಾಡುವ ಹುನ್ನಾರವೇತಕ್ಕೆ? ಇದು ಸರ್ಕಾರದ ಶಿಕ್ಷಣ ಇಲಾಖೆ ಮಾಡುವ ಕೆಲಸವಂತೂ ಅಲ್ಲವೇ ಅಲ್ಲ. ಬೇಕಾದವರು ಗೀತಾ-ಪಾಠ ಪ್ರವಚನಕ್ಕೆ ಹೋಗಲಿ.<br /> <br /> ಏನೂ ಇಶ್ಯೂ ಇಲ್ಲದಿದ್ದಲ್ಲಿ ಬಿಜೆಪಿ ಅಲ್ಲ ಸಲ್ಲದ (ಇಶ್ಯೂ) ವಿಷಯ ಹುಟ್ಟುಹಾಕುತ್ತದೆ, ಮಾಡಬೇಕಾದ ಒಳ್ಳೆ ಕೆಲಸಗಳು ಸಾಕಷ್ಟಿರುವಾಗ ಇಲ್ಲದ ಉಸಾಬರಿ ಏಕೆ ಮಾಡಬೇಕು?<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಭಗವದ್ಗೀತೆ~ಯನ್ನು ಶಾಲಾ ಪಠ್ಯವಾಗಿ ಸೇರಿಸಲು ಜನಾಭಿಪ್ರಾಯವನ್ನು ಸರ್ಕಾರ ಕೇಳಿದೆ. ಕಳೆದ 60-65 ವರ್ಷಗಳಿಂದ ನಮ್ಮ ಶ್ರೇಷ್ಠ ಬಹುವಿಖ್ಯಾತ ಶಿಕ್ಷಣ ತಜ್ಞರಿಗೆ ಹೊಳೆಯದ ವಿಷಯ ನಮ್ಮ ಇಂದಿನ ಬಿಜೆಪಿ ಸರ್ಕಾರಕ್ಕೆ ಹೊಳೆದಿದೆ. <br /> <br /> ಎಲ್ಲಿ ಶಾಲೆಗಳು, ಶಿಕ್ಷಕರು ಬೇಕೋ ಅಲ್ಲಿ ಶಾಲೆಗಳಿಲ್ಲ. ವಿಜ್ಞಾನ ಬೋಧಿಸಲು ಶಿಕ್ಷಕರಿಲ್ಲ. ಶಾಲೆಯಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ. ಶೌಚಾಲಯಗಳಿಲ್ಲ. ಇದ್ದರೂ ಅವು ಉಪಯೋಗಿಸುವ ಸ್ಥಿತಿಯಲ್ಲಿಲ್ಲ, ಕೀಲಿ ಜಡಿದಿದ್ದಾರೆ. <br /> <br /> ಕುಳಿತುಕೊಳ್ಳಲು ಆಸನಗಳಿಲ್ಲ. ಶಾಲೆಗಳು ಕುರಿದೊಡ್ಡಿಗಳಾಗಿವೆ. ಅವುಗಳನ್ನು ಸುಧಾರಿಸುವ ಪ್ರಾಮಾಣಿಕ ಪ್ರಯತ್ನ ಈ ಸರ್ಕಾರ ಮಾಡುತ್ತಿಲ್ಲ. ವಾಚನಾಲಯಗಳಿಲ್ಲ. ಇದ್ದರೂ ವಿದ್ಯಾರ್ಥಿಗಳಿಗೆ ಲಭ್ಯವಿಲ್ಲ. ಇಂಥ ಸ್ಥಿತಿಯಲ್ಲಿ ಭಗವದ್ಗೀತೆಯನ್ನು ಪಠ್ಯವಾಗಿಸಿದರೆ ಕಲಿಸುವವರಾರು? ಬಿಜೆಪಿ ಸರ್ಕಾರಕ್ಕೆ ತನ್ನ ಆರ್ಎಸ್ಎಸ್ ಅಜೆಂಡಾ ಪೂರೈಸುವ ಆತುರವಿದ್ದಂತೆ ಕಾಣುತ್ತದೆ. <br /> <br /> ಮಕ್ಕಳು ಚೆನ್ನಾಗಿ ಕನ್ನಡದಲ್ಲಿ ಓದಿ ಬರೆದರೆ ಅದೇ ಮಹಾ ಎಂದಾಗ ಈ ಭಗವದ್ಗೀತೆಯನ್ನು ಪಠ್ಯ ಮಾಡುವ ಹುನ್ನಾರವೇತಕ್ಕೆ? ಇದು ಸರ್ಕಾರದ ಶಿಕ್ಷಣ ಇಲಾಖೆ ಮಾಡುವ ಕೆಲಸವಂತೂ ಅಲ್ಲವೇ ಅಲ್ಲ. ಬೇಕಾದವರು ಗೀತಾ-ಪಾಠ ಪ್ರವಚನಕ್ಕೆ ಹೋಗಲಿ.<br /> <br /> ಏನೂ ಇಶ್ಯೂ ಇಲ್ಲದಿದ್ದಲ್ಲಿ ಬಿಜೆಪಿ ಅಲ್ಲ ಸಲ್ಲದ (ಇಶ್ಯೂ) ವಿಷಯ ಹುಟ್ಟುಹಾಕುತ್ತದೆ, ಮಾಡಬೇಕಾದ ಒಳ್ಳೆ ಕೆಲಸಗಳು ಸಾಕಷ್ಟಿರುವಾಗ ಇಲ್ಲದ ಉಸಾಬರಿ ಏಕೆ ಮಾಡಬೇಕು?<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>