<p><strong>ಮದುರೈ (ಐಎಎನ್ಎಸ್): </strong>ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ಎರಡನೇ ಹಂತದ ~ಜನಚೇತನ~ ರಥಯಾತ್ರೆಯು ಸಾಗುವ ಮಾರ್ಗದಲ್ಲಿ ಮದುರೈ ಸಮೀಪದ ಸೇತುವೆಯ ಅಡಿ ಒಂದು ಕೊಳವೆ ಬಾಂಬ್ ಇದ್ದುದು ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>~ಅಡ್ವಾಣಿ ಅವರ ರಥಯಾತ್ರೆಯು ಸಾಗಲಿದ್ದ ರಸ್ತೆಯಲ್ಲಿರುವ ಸೇತುವೆ ಕೆಳಗೆ ಬಾಂಬ್ ಇರುವುದನ್ನು ಕಂಡ ಕೆಲವು ಜನರು ಅದನ್ನು ಸ್ಥಳೀಯ ಪೊಲೀಸರ ಗಮನಕ್ಕೆ ತಂದರು~ ಎಂದು ವಿವರ ನೀಡಿದ ಹಿರಿಯ ಪೊಲೀಸ್ ಅಧಿಕಾರಿ, ~ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಂಬ್ ಅನ್ನು ಅಲ್ಲಿಂದ ತೆರವುಗೊಳಿಸಿದ್ದಾರೆ~ ಎಂದು ತಿಳಿಸಿದ್ದಾರೆ.</p>.<p>ಚೆನ್ನೈನಿಂದ 450 ಕಿ.ಮೀ ದೂರದಲ್ಲಿರುವ ಮದುರೈ ಸಮೀಪದ ಅಲಮ್ ಪಟ್ಟಿ ಎಂಬ ಸ್ಥಳದಲ್ಲಿನ ಸೇತುವೆ ಅಡಿ ಕೊಳವೆ ಬಾಂಬ್ ಇಟ್ಟಿರುವುದು ಪತ್ತೆಯಾಗಿದೆ.</p>.<p>ಬಿಹಾರದಿಂದ ಆರಂಭವಾಗಿ ಬಿಹಾರ ಮತ್ತು ಉತ್ತರ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಸಂಚರಿಸಿದ್ದ ಅಡ್ವಾಣಿ ಜನಚೇತನ ರಥಯಾತ್ರೆಯು ದೀಪಾವಳಿಯ ಮುಮಚೆ ಕೊನೆಗೊಂಡಿತ್ತು. ಶುಕ್ರವಾರ ಅಡ್ವಾಣಿ ಅವರು ತಮ್ಮ ರಥಯಾತ್ರೆಯ ಎರಡನೇ ಹಂತದ ಸಂಚಾರವನ್ನು ತಮಿಳುನಾಡಿನ ಮದುರೈನಿಂದ ಆರಂಭಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮದುರೈ (ಐಎಎನ್ಎಸ್): </strong>ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ಎರಡನೇ ಹಂತದ ~ಜನಚೇತನ~ ರಥಯಾತ್ರೆಯು ಸಾಗುವ ಮಾರ್ಗದಲ್ಲಿ ಮದುರೈ ಸಮೀಪದ ಸೇತುವೆಯ ಅಡಿ ಒಂದು ಕೊಳವೆ ಬಾಂಬ್ ಇದ್ದುದು ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>~ಅಡ್ವಾಣಿ ಅವರ ರಥಯಾತ್ರೆಯು ಸಾಗಲಿದ್ದ ರಸ್ತೆಯಲ್ಲಿರುವ ಸೇತುವೆ ಕೆಳಗೆ ಬಾಂಬ್ ಇರುವುದನ್ನು ಕಂಡ ಕೆಲವು ಜನರು ಅದನ್ನು ಸ್ಥಳೀಯ ಪೊಲೀಸರ ಗಮನಕ್ಕೆ ತಂದರು~ ಎಂದು ವಿವರ ನೀಡಿದ ಹಿರಿಯ ಪೊಲೀಸ್ ಅಧಿಕಾರಿ, ~ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಂಬ್ ಅನ್ನು ಅಲ್ಲಿಂದ ತೆರವುಗೊಳಿಸಿದ್ದಾರೆ~ ಎಂದು ತಿಳಿಸಿದ್ದಾರೆ.</p>.<p>ಚೆನ್ನೈನಿಂದ 450 ಕಿ.ಮೀ ದೂರದಲ್ಲಿರುವ ಮದುರೈ ಸಮೀಪದ ಅಲಮ್ ಪಟ್ಟಿ ಎಂಬ ಸ್ಥಳದಲ್ಲಿನ ಸೇತುವೆ ಅಡಿ ಕೊಳವೆ ಬಾಂಬ್ ಇಟ್ಟಿರುವುದು ಪತ್ತೆಯಾಗಿದೆ.</p>.<p>ಬಿಹಾರದಿಂದ ಆರಂಭವಾಗಿ ಬಿಹಾರ ಮತ್ತು ಉತ್ತರ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಸಂಚರಿಸಿದ್ದ ಅಡ್ವಾಣಿ ಜನಚೇತನ ರಥಯಾತ್ರೆಯು ದೀಪಾವಳಿಯ ಮುಮಚೆ ಕೊನೆಗೊಂಡಿತ್ತು. ಶುಕ್ರವಾರ ಅಡ್ವಾಣಿ ಅವರು ತಮ್ಮ ರಥಯಾತ್ರೆಯ ಎರಡನೇ ಹಂತದ ಸಂಚಾರವನ್ನು ತಮಿಳುನಾಡಿನ ಮದುರೈನಿಂದ ಆರಂಭಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>