<p>ರಾಳೇಗಣಸಿದ್ಧಿ (ಪಿಟಿಐ): ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ವ್ಯಾಪಕ ಟೀಕೆಗೆ ಗುರಿಯಾಗಿರುವ ಅಣ್ಣಾ ತಂಡ, ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ತನ್ನದೇ ಆದ ನೀತಿ ನಿಯಮಗಳನ್ನು ರೂಪಿಸಿಕೊಂಡು ಈಗಿರುವ ಪ್ರಮುಖರ ಸಮಿತಿಯನ್ನು ಪುನರ್ರಚಿಸಲು ನಿರ್ಧರಿಸಿದೆ.<br /> <br /> ಈ ಸಂಬಂಧ ಅಣ್ಣಾ ನೇತೃತ್ವದಲ್ಲಿ ಭಾನುವಾರ ಇಲ್ಲಿ ನಡೆದ ಸಭೆಯಲ್ಲಿ ಅರವಿಂದ್ ಕೇಜ್ರಿವಾಲ್, ಪ್ರಶಾಂತ್ ಭೂಷಣ್ ಹಾಗೂ ಕಿರಣ್ ಬೇಡಿ ಭಾಗವಹಿಸಿದ್ದರು.<br /> <br /> ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ಶನಿವಾರ ನಡೆದ ಸಭೆಯಲ್ಲಿ `ಪ್ರಮುಖರ ಸಮಿತಿ~ಯನ್ನು ವಿಸರ್ಜಿಸದೇ ಇರಲು ತಂಡ ತೀರ್ಮಾನ ತೆಗೆದುಕೊಂಡಿತ್ತು.<br /> <br /> `ಪ್ರಮುಖರ ಸಮಿತಿ ತನ್ನ ಮುಂದಿರುವ ಸವಾಲುಗಳನ್ನು ಎದುರಿಸಲಿದೆ. ಲೋಕಪಾಲ್ ಮಸೂದೆ ಅಂಗೀಕಾರವಾಗಬೇಕು ಎನ್ನುವುದು ನಮ್ಮ ಹೋರಾಟದ ಉದ್ದೇಶ. <br /> <br /> ನಮ್ಮ ಈ ಚಳವಳಿಗೆ ಮುಂದೆ ನೀತಿ ನಿಯಮಗಳನ್ನು ರೂಪಿಸುತ್ತೇವೆ. ಇದಾದ ಬಳಿಕ ಪ್ರಮುಖರ ಸಮಿತಿಯನ್ನು ಪುನರ್ ರಚಿಸುತ್ತೇವೆ~ ಎಂದು `ಮೌನವ್ರತ~ದಲ್ಲಿರುವ ಅಣ್ಣಾ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.<br /> <br /> ಸಂಸತ್ನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಅಂಗೀಕಾರವಾಗದಿದ್ದರೆ ತಮ್ಮ ತಂಡ ದೇಶದಾದ್ಯಂತ `ಯಾತ್ರೆ~ ಕೈಗೊಳ್ಳಲಿದೆ ಎಂದೂ ಅಣ್ಣಾ ಹೇಳಿದ್ದಾರೆ.<br /> <br /> `ಸರ್ಕಾರ ಹಾಗೂ ಕಾಂಗ್ರೆಸ್ನಲ್ಲಿ ಕೆಲವರು ನಮ್ಮ ತಂಡದ ವರ್ಚಸ್ಸನ್ನು ಕುಂದಿಸಲು ಹಾಗೂ ಚಳವಳಿಗೆ ಅವಮಾನ ಮಾಡಲು ಯತ್ನಿಸುತ್ತಿದ್ದಾರೆ. ಅಲ್ಲದೆ ನಮ್ಮ ತಂಡವನ್ನು ಒಡೆಯಲು ಪಿತೂರಿ ಮಾಡುತ್ತಿದ್ದಾರೆ. ಏನೇ ಮಾಡಿದರೂ ನಮ್ಮ ಚಳವಳಿ ಮಾತ್ರ ಮುಂದುವರಿಯುತ್ತದೆ~ ಎಂದು ಸ್ಪಷ್ಟಪಡಿಸಿದ್ದಾರೆ.<br /> <br /> ಮುಗಿದ ಅಧ್ಯಾಯ: ಸುಪ್ರೀಂಕೋರ್ಟ್ನ ವಕೀಲರ ಕೊಠಡಿಯಲ್ಲಿ ಯುವಕರಿಂದ ತಮ್ಮ ಮೇಲೆ ನಡೆದ ಹಲ್ಲೆ ಪ್ರಕರಣ ಮುಗಿದ ಅಧ್ಯಾಯ ಎಂದು ವಕೀಲ ಪ್ರಶಾಂತ್ ಭೂಷಣ್ ಘಾಜಿಯಾಬಾದ್ನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಳೇಗಣಸಿದ್ಧಿ (ಪಿಟಿಐ): ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ವ್ಯಾಪಕ ಟೀಕೆಗೆ ಗುರಿಯಾಗಿರುವ ಅಣ್ಣಾ ತಂಡ, ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ತನ್ನದೇ ಆದ ನೀತಿ ನಿಯಮಗಳನ್ನು ರೂಪಿಸಿಕೊಂಡು ಈಗಿರುವ ಪ್ರಮುಖರ ಸಮಿತಿಯನ್ನು ಪುನರ್ರಚಿಸಲು ನಿರ್ಧರಿಸಿದೆ.<br /> <br /> ಈ ಸಂಬಂಧ ಅಣ್ಣಾ ನೇತೃತ್ವದಲ್ಲಿ ಭಾನುವಾರ ಇಲ್ಲಿ ನಡೆದ ಸಭೆಯಲ್ಲಿ ಅರವಿಂದ್ ಕೇಜ್ರಿವಾಲ್, ಪ್ರಶಾಂತ್ ಭೂಷಣ್ ಹಾಗೂ ಕಿರಣ್ ಬೇಡಿ ಭಾಗವಹಿಸಿದ್ದರು.<br /> <br /> ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ಶನಿವಾರ ನಡೆದ ಸಭೆಯಲ್ಲಿ `ಪ್ರಮುಖರ ಸಮಿತಿ~ಯನ್ನು ವಿಸರ್ಜಿಸದೇ ಇರಲು ತಂಡ ತೀರ್ಮಾನ ತೆಗೆದುಕೊಂಡಿತ್ತು.<br /> <br /> `ಪ್ರಮುಖರ ಸಮಿತಿ ತನ್ನ ಮುಂದಿರುವ ಸವಾಲುಗಳನ್ನು ಎದುರಿಸಲಿದೆ. ಲೋಕಪಾಲ್ ಮಸೂದೆ ಅಂಗೀಕಾರವಾಗಬೇಕು ಎನ್ನುವುದು ನಮ್ಮ ಹೋರಾಟದ ಉದ್ದೇಶ. <br /> <br /> ನಮ್ಮ ಈ ಚಳವಳಿಗೆ ಮುಂದೆ ನೀತಿ ನಿಯಮಗಳನ್ನು ರೂಪಿಸುತ್ತೇವೆ. ಇದಾದ ಬಳಿಕ ಪ್ರಮುಖರ ಸಮಿತಿಯನ್ನು ಪುನರ್ ರಚಿಸುತ್ತೇವೆ~ ಎಂದು `ಮೌನವ್ರತ~ದಲ್ಲಿರುವ ಅಣ್ಣಾ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.<br /> <br /> ಸಂಸತ್ನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಅಂಗೀಕಾರವಾಗದಿದ್ದರೆ ತಮ್ಮ ತಂಡ ದೇಶದಾದ್ಯಂತ `ಯಾತ್ರೆ~ ಕೈಗೊಳ್ಳಲಿದೆ ಎಂದೂ ಅಣ್ಣಾ ಹೇಳಿದ್ದಾರೆ.<br /> <br /> `ಸರ್ಕಾರ ಹಾಗೂ ಕಾಂಗ್ರೆಸ್ನಲ್ಲಿ ಕೆಲವರು ನಮ್ಮ ತಂಡದ ವರ್ಚಸ್ಸನ್ನು ಕುಂದಿಸಲು ಹಾಗೂ ಚಳವಳಿಗೆ ಅವಮಾನ ಮಾಡಲು ಯತ್ನಿಸುತ್ತಿದ್ದಾರೆ. ಅಲ್ಲದೆ ನಮ್ಮ ತಂಡವನ್ನು ಒಡೆಯಲು ಪಿತೂರಿ ಮಾಡುತ್ತಿದ್ದಾರೆ. ಏನೇ ಮಾಡಿದರೂ ನಮ್ಮ ಚಳವಳಿ ಮಾತ್ರ ಮುಂದುವರಿಯುತ್ತದೆ~ ಎಂದು ಸ್ಪಷ್ಟಪಡಿಸಿದ್ದಾರೆ.<br /> <br /> ಮುಗಿದ ಅಧ್ಯಾಯ: ಸುಪ್ರೀಂಕೋರ್ಟ್ನ ವಕೀಲರ ಕೊಠಡಿಯಲ್ಲಿ ಯುವಕರಿಂದ ತಮ್ಮ ಮೇಲೆ ನಡೆದ ಹಲ್ಲೆ ಪ್ರಕರಣ ಮುಗಿದ ಅಧ್ಯಾಯ ಎಂದು ವಕೀಲ ಪ್ರಶಾಂತ್ ಭೂಷಣ್ ಘಾಜಿಯಾಬಾದ್ನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>