<p>ಐಗಳಿ (ಅಥಣಿ): ಅಥಣಿಯಲ್ಲಿ ಇದೇ 10ರಂದು ರಾಜ್ಯ ಮಟ್ಟದ ವೀರರಾಣಿ ಕಿತ್ತೂರ ಚನ್ನಮ್ಮ ವಿಜಯೋತ್ಸವ ಹಾಗೂ ಪಂಚಮಸಾಲಿ ಸಮಾಜದ ಸಮಾವೇಶ, ರಾಜ್ಯ ಮಟ್ಟದ ಹರ ಸೈನ್ಯ ಸಮಾವೇಶವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ವೀರ ಶೈವ ಪಂಚಮಸಾಲಿ ಸಂಘದ ಅಧ್ಯಕ್ಷ ಬಸವರಾಜ ದಿಂಡೂರ ಹೇಳಿದರು.<br /> <br /> ಇಲ್ಲಿಗೆ ಸಮೀಪದ ನಂದೇಶ್ವರ ಗ್ರಾಮದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕಳೆದ ವರ್ಷ ನಡೆಸಿದ ಜನಗಣತಿಯ ಜಾತಿವಾರು ಮಾಹಿತಿಯನ್ನು ಶೀಘ್ರದಲ್ಲಿ ಶ್ವೇತಪತ್ರದ ಮೂಲಕ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.<br /> <br /> ಕೇಂದ್ರ ಸರ್ಕಾರ ನಾಣ್ಯದ ಮೇಲೆ ವೀರ ರಾಣಿ ಕಿತ್ತೂರ ಚನ್ನಮ್ಮನ ಮುದ್ರೆ ಹಾಕಬೇಕೆಂದು ಆಗ್ರಹಿಸಿದ ಅವರು ಚನ್ನಮ್ಮ ವಿಜಯೋತ್ಸವದ ಅದ್ದೂರಿ ಆಚರಣೆ ಇರಲಿ ಆದರೆ ರಜೆ ಘೋಷಣೆ ಬೇಡ. ಆ ದಿನ ಎಲ್ಲ ಅಧಿಕಾರಿಗಳು ಒಂದು ಗಂಟೆ ಹೆಚ್ಚು ಕೆಲಸ ಮಾಡಲಿ ಎಂದು ದಿಂಡೂರ ಒತ್ತಾಯಿಸಿದರು.<br /> <br /> ರಾಜ್ಯದಲ್ಲಿ ಜಾತಿ, ವರ್ಣ, ಮತ- ಭೇದವಿಲ್ಲದೆ ಆರ್ಥಿಕವಾಗಿ ಹಿಂದುಳಿದ ವರಿಗೆ ಶಿಕ್ಷಣ, ಉದ್ಯೋಗದಲ್ಲಿ ಶೇ 10ರಷ್ಟು ರಿಯಾಯತಿ ಕೊಡಬೇಕು. ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುವುದು ಅನಿವಾರ್ಯ ಎಂದರು.<br /> <br /> ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 57 ಮತಕ್ಷೇತ್ರದಲ್ಲಿ ಪಂಚಮಸಾಲಿ ಸಮಾಜದ ಬಾಂಧವರು ಸ್ಪರ್ಧಿಸಲಿ ದ್ದಾರೆ. ಈ ಬಾರಿ ರಾಜ್ಯಮಟ್ಟದ ವೀರ ರಾಣಿ ಕಿತ್ತೂರ ಚನ್ನಮ್ಮ ಪ್ರಶಸ್ತಿಯನ್ನು ಶ್ರೀ ರೇಣುಕಾ ಶುಗರ್ಸ್ ಅಧ್ಯಕ್ಷೆ ವಿದ್ಯಾ ಮುರಕುಂಬಿ ಅವರಿಗೆ ನೀಡಲಾಗುವುದು ಎಂದು ತಿಳಿಸಿದರು.<br /> <br /> 9ರಂದು `ವ್ಯವಸಾಯದಿಂದ ವ್ಯಾಪಾರ ಕಡೆಗೆ~ ಎಂಬ ಕಾರ್ಯಕ್ರಮ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಶಂಕರಣ್ಣ ಸಂಕನ್ನವರ ಅವರಿಂದ ಮನರಂಜನೆ ಕಾರ್ಯಕ್ರಮ ನಡೆಯಲಿದೆ. 10ರಂದು 2008 ಕುಂಭೋತ್ಸವ 10 ಸಾವಿರ ಹರ ಸೈನ್ಯ ಚನ್ನಮ್ಮನ ವಿಜಯೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.<br /> <br /> ರಾಜ್ಯ ಉಪಾಧ್ಯಕ್ಷ ಈರಣ್ಣ ಬೆಳಕೂಡ, ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ ಹುಳ್ಳೇರ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಮೇಶಗೌಡ ಪಾಟೀಲ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಐಗಳಿ (ಅಥಣಿ): ಅಥಣಿಯಲ್ಲಿ ಇದೇ 10ರಂದು ರಾಜ್ಯ ಮಟ್ಟದ ವೀರರಾಣಿ ಕಿತ್ತೂರ ಚನ್ನಮ್ಮ ವಿಜಯೋತ್ಸವ ಹಾಗೂ ಪಂಚಮಸಾಲಿ ಸಮಾಜದ ಸಮಾವೇಶ, ರಾಜ್ಯ ಮಟ್ಟದ ಹರ ಸೈನ್ಯ ಸಮಾವೇಶವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ವೀರ ಶೈವ ಪಂಚಮಸಾಲಿ ಸಂಘದ ಅಧ್ಯಕ್ಷ ಬಸವರಾಜ ದಿಂಡೂರ ಹೇಳಿದರು.<br /> <br /> ಇಲ್ಲಿಗೆ ಸಮೀಪದ ನಂದೇಶ್ವರ ಗ್ರಾಮದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕಳೆದ ವರ್ಷ ನಡೆಸಿದ ಜನಗಣತಿಯ ಜಾತಿವಾರು ಮಾಹಿತಿಯನ್ನು ಶೀಘ್ರದಲ್ಲಿ ಶ್ವೇತಪತ್ರದ ಮೂಲಕ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.<br /> <br /> ಕೇಂದ್ರ ಸರ್ಕಾರ ನಾಣ್ಯದ ಮೇಲೆ ವೀರ ರಾಣಿ ಕಿತ್ತೂರ ಚನ್ನಮ್ಮನ ಮುದ್ರೆ ಹಾಕಬೇಕೆಂದು ಆಗ್ರಹಿಸಿದ ಅವರು ಚನ್ನಮ್ಮ ವಿಜಯೋತ್ಸವದ ಅದ್ದೂರಿ ಆಚರಣೆ ಇರಲಿ ಆದರೆ ರಜೆ ಘೋಷಣೆ ಬೇಡ. ಆ ದಿನ ಎಲ್ಲ ಅಧಿಕಾರಿಗಳು ಒಂದು ಗಂಟೆ ಹೆಚ್ಚು ಕೆಲಸ ಮಾಡಲಿ ಎಂದು ದಿಂಡೂರ ಒತ್ತಾಯಿಸಿದರು.<br /> <br /> ರಾಜ್ಯದಲ್ಲಿ ಜಾತಿ, ವರ್ಣ, ಮತ- ಭೇದವಿಲ್ಲದೆ ಆರ್ಥಿಕವಾಗಿ ಹಿಂದುಳಿದ ವರಿಗೆ ಶಿಕ್ಷಣ, ಉದ್ಯೋಗದಲ್ಲಿ ಶೇ 10ರಷ್ಟು ರಿಯಾಯತಿ ಕೊಡಬೇಕು. ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುವುದು ಅನಿವಾರ್ಯ ಎಂದರು.<br /> <br /> ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 57 ಮತಕ್ಷೇತ್ರದಲ್ಲಿ ಪಂಚಮಸಾಲಿ ಸಮಾಜದ ಬಾಂಧವರು ಸ್ಪರ್ಧಿಸಲಿ ದ್ದಾರೆ. ಈ ಬಾರಿ ರಾಜ್ಯಮಟ್ಟದ ವೀರ ರಾಣಿ ಕಿತ್ತೂರ ಚನ್ನಮ್ಮ ಪ್ರಶಸ್ತಿಯನ್ನು ಶ್ರೀ ರೇಣುಕಾ ಶುಗರ್ಸ್ ಅಧ್ಯಕ್ಷೆ ವಿದ್ಯಾ ಮುರಕುಂಬಿ ಅವರಿಗೆ ನೀಡಲಾಗುವುದು ಎಂದು ತಿಳಿಸಿದರು.<br /> <br /> 9ರಂದು `ವ್ಯವಸಾಯದಿಂದ ವ್ಯಾಪಾರ ಕಡೆಗೆ~ ಎಂಬ ಕಾರ್ಯಕ್ರಮ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಶಂಕರಣ್ಣ ಸಂಕನ್ನವರ ಅವರಿಂದ ಮನರಂಜನೆ ಕಾರ್ಯಕ್ರಮ ನಡೆಯಲಿದೆ. 10ರಂದು 2008 ಕುಂಭೋತ್ಸವ 10 ಸಾವಿರ ಹರ ಸೈನ್ಯ ಚನ್ನಮ್ಮನ ವಿಜಯೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.<br /> <br /> ರಾಜ್ಯ ಉಪಾಧ್ಯಕ್ಷ ಈರಣ್ಣ ಬೆಳಕೂಡ, ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ ಹುಳ್ಳೇರ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಮೇಶಗೌಡ ಪಾಟೀಲ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>