<p>ಬೆಂಗಳೂರು: ಮುಖ್ಯಮಂತ್ರಿಯಾಗಿ 11 ತಿಂಗಳು ಪೂರೈಸಿರುವ ಡಿ.ವಿ.ಸದಾನಂದ ಗೌಡ ಅವರು ಅಧಿಕಾರ ತ್ಯಾಗಕ್ಕೆ ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಸ್ಥಾನ ತ್ಯಜಿಸುವುದು ಬೇಡ ಎಂದು ಬೆಂಬಲಿಗ ಸಚಿವರು ಮತ್ತು ಶಾಸಕರು ಹೇರಿದ ಒತ್ತಡಕ್ಕೆ ಮಣಿಯದೆ ಪಕ್ಷದ ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳಲು ನಿರ್ಧರಿಸಿದ್ದಾರೆ.<br /> <br /> ನಾಯಕತ್ವ ಬದಲಾವಣೆ ಕುರಿತು ಪಕ್ಷದ ವರಿಷ್ಠರು ಇದುವರೆಗೂ ಅಧಿಕೃತವಾಗಿ ಮುಖ್ಯಮಂತ್ರಿ ಜತೆ ಮಾತನಾಡಿಲ್ಲ. ಆದರೂ ವರಿಷ್ಠರ ಒಲವು-ನಿಲುವುಗಳ ಸುಳಿವು ಅರಿತು ಮುಖ್ಯಮಂತ್ರಿ ಸ್ಥಾನದಿಂದ ಇಳಿಯಲು ಅವರು ಸಜ್ಜಾಗತೊಡಗಿದ್ದಾರೆ ಎಂದು ಗೌಡರ ಆಪ್ತ ಮೂಲಗಳು ತಿಳಿಸಿವೆ. <br /> <br /> ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯನ್ನೇ ತಮ್ಮ ಅಧ್ಯಕ್ಷತೆಯ ಕೊನೆಯ ಸಭೆ ಎಂದು ಅವರು ಭಾವಿಸಿದಂತಿದೆ. ಸಭೆ ನಂತರ ಗೃಹ ಕಚೇರಿ `ಕೃಷ್ಣಾ~ದಲ್ಲಿ ತಮ್ಮ ಬಣದ 11 ಸಚಿವರು ಸೇರಿದಂತೆ ಹಲವು ಶಾಸಕರ ಜತೆ ಅವರು ಮನಬಿಚ್ಚಿ ಮಾತನಾಡಿದ್ದಾರೆ. `ಗೌಡರ ಮಾತಿನ ಧಾಟಿ ನೋಡಿದರೆ ಕುರ್ಚಿ ಬಿಟ್ಟುಕೊಡಲು ಅಣಿಯಾಗುತ್ತಿರುವಂತೆ ಭಾಸವಾಯಿತು~ ಎಂದು ಸಚಿವರೊಬ್ಬರು ಹೇಳಿದರು. <br /> <br /> `ಪಕ್ಷ ನನ್ನ ನಾಯಕತ್ವ ಬದಲಿಸುವ ತೀರ್ಮಾನ ತೆಗೆದುಕೊಂಡರೆ ಅದನ್ನು ಪಾಲಿಸುತ್ತೇನೆ. ಬೇರೆಯವರ ಹಾಗೆ ನಾನು ಬ್ಲ್ಯಾಕ್ಮೇಲ್ ರಾಜಕಾರಣ ಮಾಡುವುದಿಲ್ಲ~ ಎಂದು ಆಪ್ತರ ಜತೆ ಹೇಳಿಕೊಂಡಿದ್ದಾರೆ.<br /> <br /> ಕೆಲವರು, `ಅಧಿಕಾರ ತ್ಯಜಿಸುವುದು ಬೇಡ. ಶಕ್ತಿ ಪ್ರದರ್ಶನಕ್ಕೆ ಸಜ್ಜಾಗೋಣ~ ಎಂದು ಹೇಳಿದ್ದಾರೆ. ಅದಕ್ಕೆ ಅವರು ಒಪ್ಪಿಲ್ಲ. ಬದಲಾವಣೆ ಅನಿವಾರ್ಯ ಎಂದಾದರೆ `ನಮ್ಮ ಬಣಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು. <br /> <br /> ಸಂಪುಟದಲ್ಲಿ ಅರ್ಧದಷ್ಟು ಸ್ಥಾನಗಳನ್ನು ನಮ್ಮ ಕಡೆಯವರಿಗೆ ನೀಡಬೇಕು. ಯಡಿಯೂರಪ್ಪ ಬಣಕ್ಕೆ ಸೇರಿದ ಸಚಿವರ ಕೈಯಲ್ಲಿ ಪ್ರಮುಖ ಖಾತೆಗಳಿವೆ. ಅವುಗಳನ್ನು ಉಭಯ ಬಣಗಳಿಗೂ ಸಮಾನವಾಗಿ ಹಂಚಬೇಕು~ ಎಂದು ಕೆಲವು ಸಚಿವರು ಬೇಡಿಕೆ ರೂಪದಲ್ಲಿ ಸಲಹೆ ಮಾಡಿದ್ದಾರೆ.<br /> <br /> ಆಪ್ತರ ಅನಿಸಿಕೆಗಳನ್ನು ಸಮಾಧಾನದಿಂದ ಕೇಳಿಸಿಕೊಂಡ ಮುಖ್ಯಮಂತ್ರಿಯವರು, `ಪಕ್ಷದ ಸೂಚನೆಯಂತೆ ನಡೆದುಕೊಳ್ಳೋಣ. ಒತ್ತಡ ತಂತ್ರ, ಜಾತಿ ರಾಜಕಾರಣ ಮಾಡುವುದು ಬೇಡ~ ಎಂದು ಕಿವಿಮಾತು ಹೇಳಿದರು ಎನ್ನಲಾಗಿದೆ.<br /> <br /> <strong>ಹಿತ ಕಾಯುವೆ</strong>: `ನನ್ನ ಬೆಂಬಲಕ್ಕೆ ನಿಂತ ಸಚಿವರು ಮತ್ತು ಶಾಸಕರ ಹಿತ ಕಾಯುತ್ತೇನೆ. ಈ ವಿಷಯದಲ್ಲಿ ಅನುಮಾನ ಬೇಡ. ಎಂದು ಹೇಳಿದ್ದಾರೆ. ಗೌಡರ ಅಭಿಪ್ರಾಯ ಹೊರಬಿದ್ದ ಬಳಿಕ, ಆಪ್ತ ಸಚಿವರು ಮತ್ತು ಶಾಸಕರು ಬಂಡಾಯದ ಯೋಚನೆ ಕೈಬಿಟ್ಟಿದ್ದಾರೆ. ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಅವರೂ `ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ~ ಎಂದು ರಾಗ ಬದಲಿಸಿದ್ದಾರೆ.<br /> <strong><br /> ಡಿಸಿಎಂ ಸುಳಿವು:</strong> ಗೃಹ ಸಚಿವ ಆರ್.ಅಶೋಕ ಯಲಹಂಕದಲ್ಲಿ ಸುದ್ದಿಗಾರರ ಜತೆ ಮಾತನಾಡಿ, `ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಸುಳಿವು ದೊರೆತಿದೆ. ಆದರೆ ಯಾರನ್ನು ಮಾಡುತ್ತಾರೆ ಎಂಬುದು ಯಕ್ಷಪ್ರಶ್ನೆ. ಪಕ್ಷ ವಹಿಸುವ ಜವಾಬ್ದಾರಿ ನಿಭಾಯಿಸಲು ನಾನು ಸಿದ್ಧ~ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಮುಖ್ಯಮಂತ್ರಿಯಾಗಿ 11 ತಿಂಗಳು ಪೂರೈಸಿರುವ ಡಿ.ವಿ.ಸದಾನಂದ ಗೌಡ ಅವರು ಅಧಿಕಾರ ತ್ಯಾಗಕ್ಕೆ ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಸ್ಥಾನ ತ್ಯಜಿಸುವುದು ಬೇಡ ಎಂದು ಬೆಂಬಲಿಗ ಸಚಿವರು ಮತ್ತು ಶಾಸಕರು ಹೇರಿದ ಒತ್ತಡಕ್ಕೆ ಮಣಿಯದೆ ಪಕ್ಷದ ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳಲು ನಿರ್ಧರಿಸಿದ್ದಾರೆ.<br /> <br /> ನಾಯಕತ್ವ ಬದಲಾವಣೆ ಕುರಿತು ಪಕ್ಷದ ವರಿಷ್ಠರು ಇದುವರೆಗೂ ಅಧಿಕೃತವಾಗಿ ಮುಖ್ಯಮಂತ್ರಿ ಜತೆ ಮಾತನಾಡಿಲ್ಲ. ಆದರೂ ವರಿಷ್ಠರ ಒಲವು-ನಿಲುವುಗಳ ಸುಳಿವು ಅರಿತು ಮುಖ್ಯಮಂತ್ರಿ ಸ್ಥಾನದಿಂದ ಇಳಿಯಲು ಅವರು ಸಜ್ಜಾಗತೊಡಗಿದ್ದಾರೆ ಎಂದು ಗೌಡರ ಆಪ್ತ ಮೂಲಗಳು ತಿಳಿಸಿವೆ. <br /> <br /> ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯನ್ನೇ ತಮ್ಮ ಅಧ್ಯಕ್ಷತೆಯ ಕೊನೆಯ ಸಭೆ ಎಂದು ಅವರು ಭಾವಿಸಿದಂತಿದೆ. ಸಭೆ ನಂತರ ಗೃಹ ಕಚೇರಿ `ಕೃಷ್ಣಾ~ದಲ್ಲಿ ತಮ್ಮ ಬಣದ 11 ಸಚಿವರು ಸೇರಿದಂತೆ ಹಲವು ಶಾಸಕರ ಜತೆ ಅವರು ಮನಬಿಚ್ಚಿ ಮಾತನಾಡಿದ್ದಾರೆ. `ಗೌಡರ ಮಾತಿನ ಧಾಟಿ ನೋಡಿದರೆ ಕುರ್ಚಿ ಬಿಟ್ಟುಕೊಡಲು ಅಣಿಯಾಗುತ್ತಿರುವಂತೆ ಭಾಸವಾಯಿತು~ ಎಂದು ಸಚಿವರೊಬ್ಬರು ಹೇಳಿದರು. <br /> <br /> `ಪಕ್ಷ ನನ್ನ ನಾಯಕತ್ವ ಬದಲಿಸುವ ತೀರ್ಮಾನ ತೆಗೆದುಕೊಂಡರೆ ಅದನ್ನು ಪಾಲಿಸುತ್ತೇನೆ. ಬೇರೆಯವರ ಹಾಗೆ ನಾನು ಬ್ಲ್ಯಾಕ್ಮೇಲ್ ರಾಜಕಾರಣ ಮಾಡುವುದಿಲ್ಲ~ ಎಂದು ಆಪ್ತರ ಜತೆ ಹೇಳಿಕೊಂಡಿದ್ದಾರೆ.<br /> <br /> ಕೆಲವರು, `ಅಧಿಕಾರ ತ್ಯಜಿಸುವುದು ಬೇಡ. ಶಕ್ತಿ ಪ್ರದರ್ಶನಕ್ಕೆ ಸಜ್ಜಾಗೋಣ~ ಎಂದು ಹೇಳಿದ್ದಾರೆ. ಅದಕ್ಕೆ ಅವರು ಒಪ್ಪಿಲ್ಲ. ಬದಲಾವಣೆ ಅನಿವಾರ್ಯ ಎಂದಾದರೆ `ನಮ್ಮ ಬಣಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು. <br /> <br /> ಸಂಪುಟದಲ್ಲಿ ಅರ್ಧದಷ್ಟು ಸ್ಥಾನಗಳನ್ನು ನಮ್ಮ ಕಡೆಯವರಿಗೆ ನೀಡಬೇಕು. ಯಡಿಯೂರಪ್ಪ ಬಣಕ್ಕೆ ಸೇರಿದ ಸಚಿವರ ಕೈಯಲ್ಲಿ ಪ್ರಮುಖ ಖಾತೆಗಳಿವೆ. ಅವುಗಳನ್ನು ಉಭಯ ಬಣಗಳಿಗೂ ಸಮಾನವಾಗಿ ಹಂಚಬೇಕು~ ಎಂದು ಕೆಲವು ಸಚಿವರು ಬೇಡಿಕೆ ರೂಪದಲ್ಲಿ ಸಲಹೆ ಮಾಡಿದ್ದಾರೆ.<br /> <br /> ಆಪ್ತರ ಅನಿಸಿಕೆಗಳನ್ನು ಸಮಾಧಾನದಿಂದ ಕೇಳಿಸಿಕೊಂಡ ಮುಖ್ಯಮಂತ್ರಿಯವರು, `ಪಕ್ಷದ ಸೂಚನೆಯಂತೆ ನಡೆದುಕೊಳ್ಳೋಣ. ಒತ್ತಡ ತಂತ್ರ, ಜಾತಿ ರಾಜಕಾರಣ ಮಾಡುವುದು ಬೇಡ~ ಎಂದು ಕಿವಿಮಾತು ಹೇಳಿದರು ಎನ್ನಲಾಗಿದೆ.<br /> <br /> <strong>ಹಿತ ಕಾಯುವೆ</strong>: `ನನ್ನ ಬೆಂಬಲಕ್ಕೆ ನಿಂತ ಸಚಿವರು ಮತ್ತು ಶಾಸಕರ ಹಿತ ಕಾಯುತ್ತೇನೆ. ಈ ವಿಷಯದಲ್ಲಿ ಅನುಮಾನ ಬೇಡ. ಎಂದು ಹೇಳಿದ್ದಾರೆ. ಗೌಡರ ಅಭಿಪ್ರಾಯ ಹೊರಬಿದ್ದ ಬಳಿಕ, ಆಪ್ತ ಸಚಿವರು ಮತ್ತು ಶಾಸಕರು ಬಂಡಾಯದ ಯೋಚನೆ ಕೈಬಿಟ್ಟಿದ್ದಾರೆ. ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಅವರೂ `ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ~ ಎಂದು ರಾಗ ಬದಲಿಸಿದ್ದಾರೆ.<br /> <strong><br /> ಡಿಸಿಎಂ ಸುಳಿವು:</strong> ಗೃಹ ಸಚಿವ ಆರ್.ಅಶೋಕ ಯಲಹಂಕದಲ್ಲಿ ಸುದ್ದಿಗಾರರ ಜತೆ ಮಾತನಾಡಿ, `ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಸುಳಿವು ದೊರೆತಿದೆ. ಆದರೆ ಯಾರನ್ನು ಮಾಡುತ್ತಾರೆ ಎಂಬುದು ಯಕ್ಷಪ್ರಶ್ನೆ. ಪಕ್ಷ ವಹಿಸುವ ಜವಾಬ್ದಾರಿ ನಿಭಾಯಿಸಲು ನಾನು ಸಿದ್ಧ~ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>