<p>ಅಮೀನಗಡ: ಸಂಪತ್ತು ಅಧಿಕಾರ ಶಾಶ್ವತವಲ್ಲ, ಸನ್ಮಾರ್ಗ ಆಗತ್ಯ ಎಂದು ಸಂಸದ ಪಿ.ಸಿ ಗದ್ದಿಗೌಡರ ಅಭಿಪ್ರಾಯಪಟ್ಟರು. ಪಟ್ಟಣದ ಪ್ರಭುಶಂಕರೇಶ್ವರ ಗಚ್ಚಿನಮಠದ ಲಿಂಗೈಕ್ಯ ಪ್ರಭುರಾಜೇಂದ್ರಶ್ರಿಗಳ 97ನೇ ಜಯಂತ್ಯುತ್ಸವದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ವಚನ-ಪ್ರವಚನ ಮುಕ್ತಾಯ ಮತ್ತು ಪಲ್ಲಕ್ಕಿ ಉತ್ಸವದಲ್ಲಿ ಮಾತನಾಡಿದ ಅವರು, ಪುರಾಣ-ಪುಣ್ಯಕಥೆಗಳು ಆಲಿಸುವುದರಿಂದ, ಪ್ರಾಮಾಣಿಕತೆ, ಸಹ ಜೀವನ ಗುಣ ಬೆಳೆಯುತ್ತದೆ ಎಂದರು. <br /> <br /> ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಪ್ರಭುರಾಜೇಂದ್ರ ಶ್ರೀ ಅವರ ಮಾರ್ಗದರ್ಶನ ಸ್ಮರಣೀಯ, ಅವರ ಆದರ್ಶವನ್ನು ಅನುಸರಿಸಬೇಕು, ಇಂತಹ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳು ಇಂದಿನ ದಿನಮಾನಗಳಲ್ಲಿ ಅತ್ಯವಶ್ಯಕ ಎಂದರು.<br /> <br /> ಜಿ.ಪಂ. ಅಧ್ಯಕ್ಷೆ ಕವಿತಾ ದಡ್ಡೇನವರ ಮಾತನಾಡಿ, ದೃಶ್ಯ ಮಾಧ್ಯಮಗಳಿಂದ ಕಲುಷಿತಗೊಂಡಿರುವ ಇಂತಹ ವಾತಾವರಣದಲ್ಲಿ ನಿಷ್ಕಲ್ಮಶ ಜೀವನಕ್ಕೆ ಪುರಾಣ-ಪುಣ್ಯಕಥೆಗಳು ಸನ್ಮಾರ್ಗ ತೋರುತ್ತವೆ ಎಂದರು. <br /> <br /> ಸಾನಿಧ್ಯ ವಹಿಸಿದ್ದ ಕಮತಗಿ ಹುಚ್ಚೇಶ್ವರ ಶ್ರಿ ಮಾತನಾಡಿ, ಪ್ರಭುರಾಜೇಂದ್ರಶ್ರಿ ಅವರು ಪ್ರಾಣಿ ಪಕ್ಷಿ ಪ್ರಿಯರಾಗಿದ್ದರಲ್ಲದೆ, ಮಮತೆಯ ಸಾಕಾರಮೂರ್ತಿಗಳಾಗಿದ್ದರು ಎಂದರು.<br /> <br /> ಶಂಕರರಾಜೇಂದ್ರಶ್ರಿ, ಅಡವೀಶ್ವರ ದೇವರು, ಒಳಬಳ್ಳಾರಿ ಸುವರ್ಣಗಿರಿಯ ಸಿದ್ಧಲಿಂಗ ಸ್ವಾಮೀಜಿ, ಮುನವಳ್ಳಿ ಸೋಮಶೇಖರಮಠದ ಮುರುಗೇಂದ್ರ ಸ್ವಾಮೀಜಿ, ಉಪ್ಪಿನ ಬೆಟಗೇರಿ ಕುಮಾರ ವಿರೂಪಾಕ್ಷ ಸ್ವಾಮೀಜಿ ಆಶೀರ್ವಚವ ನೀಡಿದರು.<br /> <br /> ಶಿವಯೋಗ ಮಂದಿರದ ಅಧ್ಯಕ್ಷರಾದ ಹಾಲಕೇರಿ ಸಂಸ್ಥಾನ ಮಠದ ಅಭಿನವ ಅನ್ನದಾನ ಸ್ವಾಮೀಜಿ ಮಾತನಾಡಿ, ಪ್ರಭುರಾಜೇಂದ್ರ ಸ್ವಾಮೀಜಿ ತಮ್ಮ ಸಂಗೀತ ಪ್ರವಚನಗಳಿಂದಲೇ ಖ್ಯಾತರಾದವರು. ಅವರ ನಿಸರ್ಗ ಪ್ರೇಮ, ನಿರ್ಲಿಪ್ತತೆ, ಉದಾರತೆ, ಆದರ್ಶಗಳು ನಮಗೆ ದಾರಿದೀಪ. ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.<br /> <br /> ಬಾಗಲಕೋಟೆ ನಗರಸಭೆ ಉಪಾಧ್ಯಕ್ಷ ಶರಣಪ್ಪ ಗುಳೇದ, ಮಲ್ಲಪ್ಪ ಬೆಂಡಿಗೇರಿ, ಎಪಿಎಂಸಿ ಸದಸ್ಯ ಸಂಗಣ್ಣ ಕಲಾದಗಿ, ಬ್ಯಾಂಕ್ ಅಧ್ಯಕ್ಷ ಬಸವರಾಜ ಗದ್ದಿ, ನಿದೇಶಕ ಬಿ.ವಿ.ಪಾಟೀಲ, ಮಲ್ಲಪ್ಪ ಬೆಂಡಿಗೇರಿ ಮುಂತಾದವರು ಭಾಗವಹಿಸಿದ್ದರು. <br /> <br /> ಕಾರ್ಯಕ್ರಮಕ್ಕೆ ನಾಗೂರ, ಕಲ್ಲಗೋನಾಳ, ಚಿತ್ತರಗಿ, ರಕ್ಕಸಗಿ, ಹುಲಗಿನಾಳ, ಸುಳೇಭಾವಿ, ಹಿರೇಬಾದವಾಡಗಿ, ಚಿತ್ತವಾಡಗಿ ಮುಂತಾದ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಬಂದ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಮೀನಗಡ: ಸಂಪತ್ತು ಅಧಿಕಾರ ಶಾಶ್ವತವಲ್ಲ, ಸನ್ಮಾರ್ಗ ಆಗತ್ಯ ಎಂದು ಸಂಸದ ಪಿ.ಸಿ ಗದ್ದಿಗೌಡರ ಅಭಿಪ್ರಾಯಪಟ್ಟರು. ಪಟ್ಟಣದ ಪ್ರಭುಶಂಕರೇಶ್ವರ ಗಚ್ಚಿನಮಠದ ಲಿಂಗೈಕ್ಯ ಪ್ರಭುರಾಜೇಂದ್ರಶ್ರಿಗಳ 97ನೇ ಜಯಂತ್ಯುತ್ಸವದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ವಚನ-ಪ್ರವಚನ ಮುಕ್ತಾಯ ಮತ್ತು ಪಲ್ಲಕ್ಕಿ ಉತ್ಸವದಲ್ಲಿ ಮಾತನಾಡಿದ ಅವರು, ಪುರಾಣ-ಪುಣ್ಯಕಥೆಗಳು ಆಲಿಸುವುದರಿಂದ, ಪ್ರಾಮಾಣಿಕತೆ, ಸಹ ಜೀವನ ಗುಣ ಬೆಳೆಯುತ್ತದೆ ಎಂದರು. <br /> <br /> ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಪ್ರಭುರಾಜೇಂದ್ರ ಶ್ರೀ ಅವರ ಮಾರ್ಗದರ್ಶನ ಸ್ಮರಣೀಯ, ಅವರ ಆದರ್ಶವನ್ನು ಅನುಸರಿಸಬೇಕು, ಇಂತಹ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳು ಇಂದಿನ ದಿನಮಾನಗಳಲ್ಲಿ ಅತ್ಯವಶ್ಯಕ ಎಂದರು.<br /> <br /> ಜಿ.ಪಂ. ಅಧ್ಯಕ್ಷೆ ಕವಿತಾ ದಡ್ಡೇನವರ ಮಾತನಾಡಿ, ದೃಶ್ಯ ಮಾಧ್ಯಮಗಳಿಂದ ಕಲುಷಿತಗೊಂಡಿರುವ ಇಂತಹ ವಾತಾವರಣದಲ್ಲಿ ನಿಷ್ಕಲ್ಮಶ ಜೀವನಕ್ಕೆ ಪುರಾಣ-ಪುಣ್ಯಕಥೆಗಳು ಸನ್ಮಾರ್ಗ ತೋರುತ್ತವೆ ಎಂದರು. <br /> <br /> ಸಾನಿಧ್ಯ ವಹಿಸಿದ್ದ ಕಮತಗಿ ಹುಚ್ಚೇಶ್ವರ ಶ್ರಿ ಮಾತನಾಡಿ, ಪ್ರಭುರಾಜೇಂದ್ರಶ್ರಿ ಅವರು ಪ್ರಾಣಿ ಪಕ್ಷಿ ಪ್ರಿಯರಾಗಿದ್ದರಲ್ಲದೆ, ಮಮತೆಯ ಸಾಕಾರಮೂರ್ತಿಗಳಾಗಿದ್ದರು ಎಂದರು.<br /> <br /> ಶಂಕರರಾಜೇಂದ್ರಶ್ರಿ, ಅಡವೀಶ್ವರ ದೇವರು, ಒಳಬಳ್ಳಾರಿ ಸುವರ್ಣಗಿರಿಯ ಸಿದ್ಧಲಿಂಗ ಸ್ವಾಮೀಜಿ, ಮುನವಳ್ಳಿ ಸೋಮಶೇಖರಮಠದ ಮುರುಗೇಂದ್ರ ಸ್ವಾಮೀಜಿ, ಉಪ್ಪಿನ ಬೆಟಗೇರಿ ಕುಮಾರ ವಿರೂಪಾಕ್ಷ ಸ್ವಾಮೀಜಿ ಆಶೀರ್ವಚವ ನೀಡಿದರು.<br /> <br /> ಶಿವಯೋಗ ಮಂದಿರದ ಅಧ್ಯಕ್ಷರಾದ ಹಾಲಕೇರಿ ಸಂಸ್ಥಾನ ಮಠದ ಅಭಿನವ ಅನ್ನದಾನ ಸ್ವಾಮೀಜಿ ಮಾತನಾಡಿ, ಪ್ರಭುರಾಜೇಂದ್ರ ಸ್ವಾಮೀಜಿ ತಮ್ಮ ಸಂಗೀತ ಪ್ರವಚನಗಳಿಂದಲೇ ಖ್ಯಾತರಾದವರು. ಅವರ ನಿಸರ್ಗ ಪ್ರೇಮ, ನಿರ್ಲಿಪ್ತತೆ, ಉದಾರತೆ, ಆದರ್ಶಗಳು ನಮಗೆ ದಾರಿದೀಪ. ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.<br /> <br /> ಬಾಗಲಕೋಟೆ ನಗರಸಭೆ ಉಪಾಧ್ಯಕ್ಷ ಶರಣಪ್ಪ ಗುಳೇದ, ಮಲ್ಲಪ್ಪ ಬೆಂಡಿಗೇರಿ, ಎಪಿಎಂಸಿ ಸದಸ್ಯ ಸಂಗಣ್ಣ ಕಲಾದಗಿ, ಬ್ಯಾಂಕ್ ಅಧ್ಯಕ್ಷ ಬಸವರಾಜ ಗದ್ದಿ, ನಿದೇಶಕ ಬಿ.ವಿ.ಪಾಟೀಲ, ಮಲ್ಲಪ್ಪ ಬೆಂಡಿಗೇರಿ ಮುಂತಾದವರು ಭಾಗವಹಿಸಿದ್ದರು. <br /> <br /> ಕಾರ್ಯಕ್ರಮಕ್ಕೆ ನಾಗೂರ, ಕಲ್ಲಗೋನಾಳ, ಚಿತ್ತರಗಿ, ರಕ್ಕಸಗಿ, ಹುಲಗಿನಾಳ, ಸುಳೇಭಾವಿ, ಹಿರೇಬಾದವಾಡಗಿ, ಚಿತ್ತವಾಡಗಿ ಮುಂತಾದ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಬಂದ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>