<p><strong>ಕೋಲಾರ: </strong>ಆಶ್ರಯ ಯೋಜನೆಯಲ್ಲಿ ಕೆಲ ಗ್ರಾಮಗಳಲ್ಲಿ ಶೇ. 10 ರಷ್ಟು ಮನೆಗಳು ಅನರ್ಹರ ಪಾಲಾಗಿರುವ ಬಗ್ಗೆ ದೂರುಗಳಿವೆ. ಅದಕ್ಕೆ ತಮ್ಮ ಬಣದ ಕೆಲ ಮುಖಂಡರ ಅಚಾತುರ್ಯವೇ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ವರ್ತೂರು ಪ್ರಕಾಶ್ ಹೇಳಿದರು.<br /> <br /> ತಾಲ್ಲೂಕಿನ ಅರಹಳ್ಳಿ, ತೊರದೇವಂಡಹಳ್ಳಿ, ಮಾರ್ಜೇನಹಳ್ಳಿ, ಅರಾಭಿಕೊತ್ತನೂರು, ಹೊನ್ನೇನಹಳ್ಳಿ, ಮದ್ದೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಶ್ರಯ ಯೋಜನೆ ಫಲಾನುಭವಿಗಳಿಗೆ ಗುರುವಾರ ಮನೆ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.<br /> <br /> ಪ್ರತಿ ಗ್ರಾ.ಪಂ.ಗೆ 200ಕ್ಕೂ ಹೆಚ್ಚು ಮನೆಗಳನ್ನು ವಿತರಿಸುವ ಮೂಲಕ ವಸತಿ ರಹಿತರಿಗೆ ಸೂರು ಕಲ್ಪಿಸ ಲಾಗುತ್ತಿದೆ. ಯೋಜನೆಯಲ್ಲಿ ಕೈಬಿಟ್ಟಿ ರುವ ಅರ್ಹ ಫಲಾನುಭವಿಗಳಿಗೆ ಆಶ್ರಯ ಸವಲತ್ತು ದೊರಕಿಸಲು ಮತ್ತೊಮ್ಮೆ ಪಟ್ಟಿ ತಯಾರಿಸಿ ಆಶ್ರಯ ಮನೆ ವಿತರಿಸಲಾಗುವುದು ಎಂದರು.<br /> <br /> ಸಾರಾಯಿ ನಿಷೇಧ: ತಾಲ್ಲೂಕಿನ ತೊರದೇವಂಡಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಮದ್ಯದ ಹಾವಳಿ ಹೆಚ್ಚಾಗಿರುವ ಬಗ್ಗೆ ವ್ಯಾಪಕ ದೂರುಗಳಿವೆ. ಇಂದಿನಿಂದ ಮದ್ಯದ ಅಂಗಡಿಗಳನ್ನು ಸ್ಥಗಿತಗೊಳಿಸಬೇಕು. <br /> <br /> ಇಲ್ಲವಾದಲ್ಲಿ ಪೊಲೀಸರ ಮೂಲಕ ಅಂಗಡಿಗಳನ್ನು ಮುಚ್ಚಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.<br /> ಜಿ.ಪಂ. ಸದಸ್ಯೆ ಚೌಡೇಶ್ವರಿ, ಬೆಗ್ಲಿ ಸೂರ್ಯಪ್ರಕಾಶ್, ವಕ್ಕಲೇರಿ ರಾಮು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ: </strong>ಆಶ್ರಯ ಯೋಜನೆಯಲ್ಲಿ ಕೆಲ ಗ್ರಾಮಗಳಲ್ಲಿ ಶೇ. 10 ರಷ್ಟು ಮನೆಗಳು ಅನರ್ಹರ ಪಾಲಾಗಿರುವ ಬಗ್ಗೆ ದೂರುಗಳಿವೆ. ಅದಕ್ಕೆ ತಮ್ಮ ಬಣದ ಕೆಲ ಮುಖಂಡರ ಅಚಾತುರ್ಯವೇ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ವರ್ತೂರು ಪ್ರಕಾಶ್ ಹೇಳಿದರು.<br /> <br /> ತಾಲ್ಲೂಕಿನ ಅರಹಳ್ಳಿ, ತೊರದೇವಂಡಹಳ್ಳಿ, ಮಾರ್ಜೇನಹಳ್ಳಿ, ಅರಾಭಿಕೊತ್ತನೂರು, ಹೊನ್ನೇನಹಳ್ಳಿ, ಮದ್ದೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಶ್ರಯ ಯೋಜನೆ ಫಲಾನುಭವಿಗಳಿಗೆ ಗುರುವಾರ ಮನೆ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.<br /> <br /> ಪ್ರತಿ ಗ್ರಾ.ಪಂ.ಗೆ 200ಕ್ಕೂ ಹೆಚ್ಚು ಮನೆಗಳನ್ನು ವಿತರಿಸುವ ಮೂಲಕ ವಸತಿ ರಹಿತರಿಗೆ ಸೂರು ಕಲ್ಪಿಸ ಲಾಗುತ್ತಿದೆ. ಯೋಜನೆಯಲ್ಲಿ ಕೈಬಿಟ್ಟಿ ರುವ ಅರ್ಹ ಫಲಾನುಭವಿಗಳಿಗೆ ಆಶ್ರಯ ಸವಲತ್ತು ದೊರಕಿಸಲು ಮತ್ತೊಮ್ಮೆ ಪಟ್ಟಿ ತಯಾರಿಸಿ ಆಶ್ರಯ ಮನೆ ವಿತರಿಸಲಾಗುವುದು ಎಂದರು.<br /> <br /> ಸಾರಾಯಿ ನಿಷೇಧ: ತಾಲ್ಲೂಕಿನ ತೊರದೇವಂಡಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಮದ್ಯದ ಹಾವಳಿ ಹೆಚ್ಚಾಗಿರುವ ಬಗ್ಗೆ ವ್ಯಾಪಕ ದೂರುಗಳಿವೆ. ಇಂದಿನಿಂದ ಮದ್ಯದ ಅಂಗಡಿಗಳನ್ನು ಸ್ಥಗಿತಗೊಳಿಸಬೇಕು. <br /> <br /> ಇಲ್ಲವಾದಲ್ಲಿ ಪೊಲೀಸರ ಮೂಲಕ ಅಂಗಡಿಗಳನ್ನು ಮುಚ್ಚಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.<br /> ಜಿ.ಪಂ. ಸದಸ್ಯೆ ಚೌಡೇಶ್ವರಿ, ಬೆಗ್ಲಿ ಸೂರ್ಯಪ್ರಕಾಶ್, ವಕ್ಕಲೇರಿ ರಾಮು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>