<p><strong>ಬಸವಕಲ್ಯಾಣ</strong>: ಇಲ್ಲಿನ ತ್ರಿಪುರಾಂತ ಕೆರೆ ಹತ್ತಿರದ ನಾಲೆಗೆ ಎತ್ತರದಲ್ಲೊಂದು ಕೆಳಗೊಂದು ಸೇತುವೆ ನಿರ್ಮಿಸಲಾಗಿದೆ. ನೋಡಲು ಮಹಾನಗರದ ಓವರಬ್ರಿಡ್ಜನಂತೆ ಅಂಕುಡೊಂಕಾಗಿದ್ದು ಚೆಂದಾಗಿ ಕಾಣುತ್ತದೆ. ಆದರೆ ಅಪಘಾತಕ್ಕೆ ಆಹ್ವಾನ ನೀಡುವಂತಿದೆ.ಇಲ್ಲಿರುವ ಮೊದಲಿನ ಸೇತುವೆ ಹಳೆಯದಾಗಿದ್ದರಿಂದ 2 ಕೋಟಿ ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಿಸಲಾಗಿದೆ. ಆದರೆ ಈ ಸೇತುವೆ ಬಹಳಷ್ಟು ಎತ್ತರದಲ್ಲಿ ಇರುವುದರಿಂದ ಸಮಸ್ಯೆಯಾಗಿದೆ. ಸೇತುವೆಯ ಎರಡೂ ಕಡೆಯಲ್ಲಿನ ರಸ್ತೆಯೂ ಎತ್ತರಗೊಂಡಿದ್ದರಿಂದ ಎದುರಿಗೆ ವಾಹನಗಳು ಬಂದರೆ ಹೋಗಲು ಜಾಗ ಇಲ್ಲದಂತಾಗುತ್ತಿದೆ. ಚಾಲಕನ ಎಚ್ಚರತಪ್ಪಿದರೆ ವಾಹನಗಳು ಕೆಳಗೆ ಉರುಳುತ್ತಿವೆ.<br /> <br /> ಈ ಕಾರಣ ಸೇತುವೆಯ ಎರಡೂ ಕಡೆಯಲ್ಲಿನ ರಸ್ತೆ ಅಗಲಗೊಳಿಸಬೇಕು ಎಂದು ಕೆಲವರು ಮನವಿ ಮಾಡಿಕೊಂಡಿದ್ದರು. ಆದ್ದರಿಂದ ಹಳೆಯ ಸೇತುವೆಯ ಸ್ಥಳದಲ್ಲಿ ಹೊಸ ಸೇತುವೆಯಂತೆ ಎತ್ತರದಲ್ಲಿ ಇನ್ನೊಂದು ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಸಂಬಂಧಿತರು ಭರವಸೆ ಕೊಟ್ಟಿದ್ದರು. ಆದರೆ 8 ವರ್ಷಗಳಾದರೂ ಆ ಕೆಲಸ ಆಗಿಲ್ಲ.<br /> <br /> ವಿಪರ್ಯಾಸವೆಂದರೆ ಈಚೆಗೆ ಇಲ್ಲಿನ ರಸ್ತೆ ಸುಧಾರಣೆಗೆ ಹಣ ಮಂಜೂರಾದರೂ ಹಳೆಯ ಸೇತುವೆಯನ್ನು ಎತ್ತರಿಸದೆ ಹಾಗೆಯೇ ಕಾಮಗಾರಿ ನಡೆಸಲಾಗಿದೆ. ಇದಲ್ಲದೆ ಎತ್ತರದ ರಸ್ತೆಯ ಬದಿಯಲ್ಲಿ ತಡೆಗೋಡೆ ಸಹ ನಿರ್ಮಾಣ ಮಾಡಲಾಗಿಲ್ಲ. ಈ ಕಾರಣ ಕಳೆದ ಎರಡು ತಿಂಗಳಲ್ಲಿ ಬಸ್ ಮತ್ತು ಲಾರಿ ಒಳಗೊಂಡು ಮೂರು ವಾಹನಗಳು ಉರುಳಿ ಬಿದ್ದು ಜನರಿಗೆ ಗಾಯಗಳಾಗಿವೆ. ಆದ್ದರಿಂದ ಶೀಘ್ರವೇ ಇಲ್ಲಿ ತಡೆಗೋಡೆ ನಿರ್ಮಾಣ ಮಾಡಬೇಕು. ರಸ್ತೆಯಲ್ಲಿ ಸೂಚನಾ ಫಲಕಗಳನ್ನು ಹಾಕಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ</strong>: ಇಲ್ಲಿನ ತ್ರಿಪುರಾಂತ ಕೆರೆ ಹತ್ತಿರದ ನಾಲೆಗೆ ಎತ್ತರದಲ್ಲೊಂದು ಕೆಳಗೊಂದು ಸೇತುವೆ ನಿರ್ಮಿಸಲಾಗಿದೆ. ನೋಡಲು ಮಹಾನಗರದ ಓವರಬ್ರಿಡ್ಜನಂತೆ ಅಂಕುಡೊಂಕಾಗಿದ್ದು ಚೆಂದಾಗಿ ಕಾಣುತ್ತದೆ. ಆದರೆ ಅಪಘಾತಕ್ಕೆ ಆಹ್ವಾನ ನೀಡುವಂತಿದೆ.ಇಲ್ಲಿರುವ ಮೊದಲಿನ ಸೇತುವೆ ಹಳೆಯದಾಗಿದ್ದರಿಂದ 2 ಕೋಟಿ ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಿಸಲಾಗಿದೆ. ಆದರೆ ಈ ಸೇತುವೆ ಬಹಳಷ್ಟು ಎತ್ತರದಲ್ಲಿ ಇರುವುದರಿಂದ ಸಮಸ್ಯೆಯಾಗಿದೆ. ಸೇತುವೆಯ ಎರಡೂ ಕಡೆಯಲ್ಲಿನ ರಸ್ತೆಯೂ ಎತ್ತರಗೊಂಡಿದ್ದರಿಂದ ಎದುರಿಗೆ ವಾಹನಗಳು ಬಂದರೆ ಹೋಗಲು ಜಾಗ ಇಲ್ಲದಂತಾಗುತ್ತಿದೆ. ಚಾಲಕನ ಎಚ್ಚರತಪ್ಪಿದರೆ ವಾಹನಗಳು ಕೆಳಗೆ ಉರುಳುತ್ತಿವೆ.<br /> <br /> ಈ ಕಾರಣ ಸೇತುವೆಯ ಎರಡೂ ಕಡೆಯಲ್ಲಿನ ರಸ್ತೆ ಅಗಲಗೊಳಿಸಬೇಕು ಎಂದು ಕೆಲವರು ಮನವಿ ಮಾಡಿಕೊಂಡಿದ್ದರು. ಆದ್ದರಿಂದ ಹಳೆಯ ಸೇತುವೆಯ ಸ್ಥಳದಲ್ಲಿ ಹೊಸ ಸೇತುವೆಯಂತೆ ಎತ್ತರದಲ್ಲಿ ಇನ್ನೊಂದು ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಸಂಬಂಧಿತರು ಭರವಸೆ ಕೊಟ್ಟಿದ್ದರು. ಆದರೆ 8 ವರ್ಷಗಳಾದರೂ ಆ ಕೆಲಸ ಆಗಿಲ್ಲ.<br /> <br /> ವಿಪರ್ಯಾಸವೆಂದರೆ ಈಚೆಗೆ ಇಲ್ಲಿನ ರಸ್ತೆ ಸುಧಾರಣೆಗೆ ಹಣ ಮಂಜೂರಾದರೂ ಹಳೆಯ ಸೇತುವೆಯನ್ನು ಎತ್ತರಿಸದೆ ಹಾಗೆಯೇ ಕಾಮಗಾರಿ ನಡೆಸಲಾಗಿದೆ. ಇದಲ್ಲದೆ ಎತ್ತರದ ರಸ್ತೆಯ ಬದಿಯಲ್ಲಿ ತಡೆಗೋಡೆ ಸಹ ನಿರ್ಮಾಣ ಮಾಡಲಾಗಿಲ್ಲ. ಈ ಕಾರಣ ಕಳೆದ ಎರಡು ತಿಂಗಳಲ್ಲಿ ಬಸ್ ಮತ್ತು ಲಾರಿ ಒಳಗೊಂಡು ಮೂರು ವಾಹನಗಳು ಉರುಳಿ ಬಿದ್ದು ಜನರಿಗೆ ಗಾಯಗಳಾಗಿವೆ. ಆದ್ದರಿಂದ ಶೀಘ್ರವೇ ಇಲ್ಲಿ ತಡೆಗೋಡೆ ನಿರ್ಮಾಣ ಮಾಡಬೇಕು. ರಸ್ತೆಯಲ್ಲಿ ಸೂಚನಾ ಫಲಕಗಳನ್ನು ಹಾಕಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>