<p><strong>ಎಚ್.ಡಿ.ಕೋಟೆ:</strong> ತಾಲ್ಲೂಕಿನ ಚನ್ನೇಗೌಡನಹುಂಡಿ ಸಮೀಪದ ಶಿಳ್ಳನಕಟ್ಟೆ ಹಾಡಿಯ ಬಳಿ ವಾಸವಾಗಿರುವ ಕೆಲವು ಜೇನುಕುರುಬ ಜನಾಂಗದ ಕುಟುಂಬಗಳು ಅಪೌಷ್ಟಿಕತೆಯಿಂದ ಬಳಲುತ್ತಿವೆ. <br /> <br /> ತಾಲ್ಲೂಕು ಕೇಂದ್ರವಾದ ಎಚ್.ಡಿ. ಕೋಟೆಯಿಂದ ಕೇವಲ 5 ಕಿ.ಮೀ. ದೂರದಲ್ಲಿ ಈ ಹಾಡಿ ಇದೆ. ಇಲ್ಲಿನ ಯಾರಿಗೂ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಸರ್ಕಾರದ ಬಗೆಗಿನ ಮಾಹಿತಿ ಇಲ್ಲ. ಸರ್ಕಾರದಿಂದ ತಮ್ಮ ಜೀವನಮಟ್ಟ ಸುಧಾರಣೆಗೆ ಯಾವ ಯೋಜನೆ ಇವೆ, ಎಷ್ಟು ಹಣ ಬರುತ್ತದೆ ಎಂಬ ಬಗ್ಗೆ ಕಲ್ಪನೆಯೂ ಇಲ್ಲ. <br /> <br /> ನೀರು, ಆಹಾರದ ತೀವ್ರ ಕೊರತೆ ಎದುರಿಸುತ್ತಿರುವ ಈ ಜನ ಅಪೌಷ್ಟಿಕತೆಯಿಂದ ಸೊರಗುತ್ತಿದ್ದಾರೆ. ಇವರ ಮಕ್ಕಳಂತೂ ಎದ್ದುನಿಲ್ಲಲು ಬಾರದಷ್ಟು ಅಶಕ್ತರಾಗಿವೆ. ಇಲ್ಲಿ ಸುಮಾರು 25 ಮಕ್ಕಳಿದ್ದು ಬಹುತೇಕ ಎಲ್ಲ ಮಕ್ಕಳೂ ಅಪೌಷ್ಟಿಕತೆಯಿಂದ ನರಳುತ್ತಿವೆ. 10 ಕುಟುಂಬಗಳು ಇಲ್ಲಿ ವಾಸ ಮಾಡಿವೆ.<br /> <br /> ಈ ಮಕ್ಕಳೂ ಸಮೀಪದ ಅಂಗನವಾಡಿ ಕೇಂದ್ರಕ್ಕೂ ಹೋಗುವುದಿಲ್ಲ. ಮಕ್ಕಳನ್ನು ಚಪ್ಪರಗಳಲ್ಲಿ ಬೇಕಾಬಿಟ್ಟಿಯಾಗಿ ಕೂಡಿ ಹಾಕಿ ಮಹಿಳೆಯರು ಕೂಲಿಗೆ ಹೋಗುತ್ತಾರೆ. ಕೂಲಿ ಮುಗಿಸಿ ಸಂಜೆ ಮರಳುವವರೆಗೂ ಈ ಕಂದಮ್ಮಗಳ ಕಷ್ಟ ಕೇಳುವವರು ಯಾರೂ ಇಲ್ಲ. ಸ್ವಲ್ಪ ದೊಡ್ಡ ಮಕ್ಕಳೂ ಕೂಲಿಗೆ ಹೋಗುತ್ತವೆ.<br /> <br /> ಇವರು ವಾಸಿಸುವ ತುಸು ದೂರದಲ್ಲಿ ಕೆರೆ ಇದ್ದು, ಬೇಸಿಗೆಯಲ್ಲಿ ಅದು ಒಣಗುತ್ತದೆ. ಇದರಿಂದ ಅಕ್ಕಪಕ್ಕದ ಗ್ರಾಮಗಳ ಜನ ಬಹಿರ್ದೆಸೆಗೆ ಇದೇ ಕೆರೆಯನ್ನು ಆಶ್ರಯಿಸುತ್ತಾರೆ. <br /> <br /> ಇಲ್ಲಿರುವ ಜೇನುಕುರುಬ ಜನ ಆ ಕೆರೆಯಲ್ಲಿರುವ ಅಳಿದುಳಿದ ನೀರನ್ನೇ ಕುಡಿಯುತ್ತಾರೆ. ಹಲವಾರು ರೋಗಗಳಿಂದ ಬಳಲುತ್ತಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎಚ್.ಡಿ.ಕೋಟೆ:</strong> ತಾಲ್ಲೂಕಿನ ಚನ್ನೇಗೌಡನಹುಂಡಿ ಸಮೀಪದ ಶಿಳ್ಳನಕಟ್ಟೆ ಹಾಡಿಯ ಬಳಿ ವಾಸವಾಗಿರುವ ಕೆಲವು ಜೇನುಕುರುಬ ಜನಾಂಗದ ಕುಟುಂಬಗಳು ಅಪೌಷ್ಟಿಕತೆಯಿಂದ ಬಳಲುತ್ತಿವೆ. <br /> <br /> ತಾಲ್ಲೂಕು ಕೇಂದ್ರವಾದ ಎಚ್.ಡಿ. ಕೋಟೆಯಿಂದ ಕೇವಲ 5 ಕಿ.ಮೀ. ದೂರದಲ್ಲಿ ಈ ಹಾಡಿ ಇದೆ. ಇಲ್ಲಿನ ಯಾರಿಗೂ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಸರ್ಕಾರದ ಬಗೆಗಿನ ಮಾಹಿತಿ ಇಲ್ಲ. ಸರ್ಕಾರದಿಂದ ತಮ್ಮ ಜೀವನಮಟ್ಟ ಸುಧಾರಣೆಗೆ ಯಾವ ಯೋಜನೆ ಇವೆ, ಎಷ್ಟು ಹಣ ಬರುತ್ತದೆ ಎಂಬ ಬಗ್ಗೆ ಕಲ್ಪನೆಯೂ ಇಲ್ಲ. <br /> <br /> ನೀರು, ಆಹಾರದ ತೀವ್ರ ಕೊರತೆ ಎದುರಿಸುತ್ತಿರುವ ಈ ಜನ ಅಪೌಷ್ಟಿಕತೆಯಿಂದ ಸೊರಗುತ್ತಿದ್ದಾರೆ. ಇವರ ಮಕ್ಕಳಂತೂ ಎದ್ದುನಿಲ್ಲಲು ಬಾರದಷ್ಟು ಅಶಕ್ತರಾಗಿವೆ. ಇಲ್ಲಿ ಸುಮಾರು 25 ಮಕ್ಕಳಿದ್ದು ಬಹುತೇಕ ಎಲ್ಲ ಮಕ್ಕಳೂ ಅಪೌಷ್ಟಿಕತೆಯಿಂದ ನರಳುತ್ತಿವೆ. 10 ಕುಟುಂಬಗಳು ಇಲ್ಲಿ ವಾಸ ಮಾಡಿವೆ.<br /> <br /> ಈ ಮಕ್ಕಳೂ ಸಮೀಪದ ಅಂಗನವಾಡಿ ಕೇಂದ್ರಕ್ಕೂ ಹೋಗುವುದಿಲ್ಲ. ಮಕ್ಕಳನ್ನು ಚಪ್ಪರಗಳಲ್ಲಿ ಬೇಕಾಬಿಟ್ಟಿಯಾಗಿ ಕೂಡಿ ಹಾಕಿ ಮಹಿಳೆಯರು ಕೂಲಿಗೆ ಹೋಗುತ್ತಾರೆ. ಕೂಲಿ ಮುಗಿಸಿ ಸಂಜೆ ಮರಳುವವರೆಗೂ ಈ ಕಂದಮ್ಮಗಳ ಕಷ್ಟ ಕೇಳುವವರು ಯಾರೂ ಇಲ್ಲ. ಸ್ವಲ್ಪ ದೊಡ್ಡ ಮಕ್ಕಳೂ ಕೂಲಿಗೆ ಹೋಗುತ್ತವೆ.<br /> <br /> ಇವರು ವಾಸಿಸುವ ತುಸು ದೂರದಲ್ಲಿ ಕೆರೆ ಇದ್ದು, ಬೇಸಿಗೆಯಲ್ಲಿ ಅದು ಒಣಗುತ್ತದೆ. ಇದರಿಂದ ಅಕ್ಕಪಕ್ಕದ ಗ್ರಾಮಗಳ ಜನ ಬಹಿರ್ದೆಸೆಗೆ ಇದೇ ಕೆರೆಯನ್ನು ಆಶ್ರಯಿಸುತ್ತಾರೆ. <br /> <br /> ಇಲ್ಲಿರುವ ಜೇನುಕುರುಬ ಜನ ಆ ಕೆರೆಯಲ್ಲಿರುವ ಅಳಿದುಳಿದ ನೀರನ್ನೇ ಕುಡಿಯುತ್ತಾರೆ. ಹಲವಾರು ರೋಗಗಳಿಂದ ಬಳಲುತ್ತಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>