<p><strong>ಧಾರವಾಡ: </strong>ನೆರೆಹೊರೆಯವರೊಂದಿಗೆ ಜಾಗದ ಸಂಬಂಧ ಅಪ್ಪ ಜಗಳವಾಡುತ್ತಿದ್ದಾಗ ಆ ಬಾಲಕಿಗೆ ಹತ್ತು ವರ್ಷ. ಆ ಜಗಳದಲ್ಲಿ ಒಬ್ಬರನ್ನು ಕೊಂದ ಅಪ್ಪ ಜೈಲು ಸೇರಿದ್ದರು.<br /> <br /> ಸನ್ನಡತೆಯ ಆಧಾರದ ಮೇಲೆ ಸೋಮವಾರ ಅವರು ಬಿಡುಗಡೆಯಾಗುವ ಹೊತ್ತಿಗೆ ಮಗಳು ಬಿ.ಕಾಂ. ಪದವಿ ಪೂರೈಸಿದ್ದಳು. ಕಾರಾಗೃಹದ ಹೊರಗೆ ಅಪ್ಪನ ಕಂಡು ಓಡಿ ಬಂದು ತಬ್ಬಿಕೊಂಡ ಆಕೆಯ ಕಣ್ಣುಗಳಿಂದ ನೀರು ಧಾರಾಕಾರವಾಗಿ ಸುರಿಯತೊಡಗಿತು. ಅಪ್ಪನು ಸೇರಿದಂತೆ ಅಲ್ಲಿದ್ದವರ ಕಣ್ಣಾಲಿಗಳೂ ತೇವಗೊಂಡವು.<br /> <br /> ಹಿರೇಕೆರೂರ ತಾಲ್ಲೂಕಿನ ದೊಡ್ಡಗುಬ್ಬಿಯ ರಾಮಪ್ಪ ಹಂಸಭಾವಿಗೆ ಮನೆಯ ಜಾಗಕ್ಕೆ ಸಂಬಂಧಿಸಿದಂತೆ ಪಕ್ಕದ ಮನೆಯವರೊಂದಿಗೆ ಆಗಾಗ್ಗೆ ಜಗಳವಾಗುತ್ತಿತ್ತು. ಅದು ವಿಕೋಪಕ್ಕೆ ತಿರುಗಿದಾಗ ಹಲವು ಬಾರಿ ಹೊಡೆದಾಟವೂ ಆಗಿತ್ತು. ಇಂತಹ ಒಂದು ಸಂದರ್ಭದಲ್ಲಿ ರಾಮಪ್ಪ, ಒಬ್ಬರನ್ನು ಹತ್ಯೆ ಮಾಡಿ ಜೈಲು ಸೇರಿದ್ದರು.<br /> <br /> ಆಗ ಮಗಳು ಅಕ್ಷತಾ ನಾಲ್ಕನೇ ತರಗತಿ ಓದುತ್ತಿದ್ದಳು. ಬಾಲ್ಯದಿಂದಲೂ ಪಿತೃ ವಾತ್ಸಲ್ಯದಿಂದ ವಂಚಿಳಾಗಿದ್ದ ಅವಳು ಅಪ್ಪನ ನಿರೀಕ್ಷೆಯಲ್ಲಿದ್ದಳು. ತಲೆಯಲ್ಲಿ ಬಿಳಿಕೂದಲಾಗಿ ಕೈಯಲ್ಲೊಂದು ಕವರ್ ಹಿಡಿದುಕೊಂಡು ಜೈಲಿನಿಂದ ಹೊರಬಂದ ರಾಮಪ್ಪ ಅವರನ್ನು ಕಂಡೊಡನೆ ಓಡಿ ಬಂದು ಬಿಗಿದಪ್ಪಿಕೊಂಡಳು.<br /> <br /> ಇದಕ್ಕೂ ಮೊದಲು ಮಾತನಾಡಿದ ಅಕ್ಷತಾ, ‘ಹುಬ್ಬಳ್ಳಿಯಲ್ಲಿ ಸಂದರ್ಶನಕ್ಕೆ ಹಾಜರಾಗಲು ದೊಡ್ಡಮ್ಮ ಸುವರ್ಣಾ ಅವರೊಂದಿಗೆ ಬಂದಿದ್ದೆ. ಜೈಲಿನಿಂದ ಇಂದು ಕೆಲವರನ್ನು ಬಿಡುಗಡೆ ಮಾಡುತ್ತಿದ್ದಾರೆ ಎಂಬ ಸುದ್ದಿ ತಿಳಿಯಿತು. ಹೀಗಾಗಿ ಇಲ್ಲಿಗೆ ಬಂದೆವು. ಇದು ನಿಜಕ್ಕೂ ನಮಗೆ ಅನಿರೀಕ್ಷಿತ ಸಂತಸ ತಂದಿದೆ.<br /> <br /> ಪೆರೋಲ್ ಮೇಲೆ ತಂದೆ ಮನೆಗೆ ಬರುತ್ತಿದ್ದರೂ, ಕೆಲ ದಿನಗಳು ಮಾತ್ರ ನಮ್ಮೊಂದಿಗೆ ಇರುತ್ತಿದ್ದರು. ಅಪ್ಪ ಇಲ್ಲದ ಇಷ್ಟು ವರ್ಷಗಳ ಕಾಲ ದೊಡ್ಡಪ್ಪ ಹಾಗೂ ದೊಡ್ಡಮ್ಮ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಈಗ ಮನೆಗೆ ತಂದೆ ಬರುತ್ತಿರುವುದು ಸಂತಸ ತಂದಿದೆ’ ಎಂದರು. ಈ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಸುವರ್ಣಾ ಅವರ ಕಣ್ಣುಗಳೂ ತೇವಗೊಂಡಿದ್ದವು.<br /> <br /> ಬಿಡುಗಡೆ ನಂತರ ಪ್ರತಿಕ್ರಿಯಿಸಿದ ರಾಮಪ್ಪ, ‘ಜೈಲಿನೊಳಗಿದ್ದಾಗ ನನಗೆ ಬದುಕು ಸಾಕಷ್ಟು ಪಾಠ ಕಲಿಸಿದೆ. ಜಗಳವಾಡುತ್ತಿದ್ದ ಸಂದರ್ಭದಲ್ಲಿ ನಾನೇ ಎರಡು ಏಟು ತಿಂದಿದ್ದರೆ ಜೈಲಿನಲ್ಲಿ 14 ವರ್ಷ ಬದುಕು ಸವೆಸುವ ಬದಲಿಗೆ ಕುಟುಂಬದೊಂದಿಗೆ ಕಳೆಯಬಹುದಿತ್ತು.<br /> <br /> ಈಗ ಪಾಠ ಕಲಿತಿರುವ ನಾನು, ಕೋಪದ ಕೈಗೆ ಬುದ್ಧಿ ಕೊಡಬೇಡಿ ಎಂದು ಇತರರಿಗೆ ಹೇಳುತ್ತೇನೆ. ಆ ಮೂಲಕ ನನ್ನಂತೆ ಇತರರೂ ಆಗಬಾರದು ಎನ್ನುವುದು ನನ್ನ ಕಾಳಜಿ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ: </strong>ನೆರೆಹೊರೆಯವರೊಂದಿಗೆ ಜಾಗದ ಸಂಬಂಧ ಅಪ್ಪ ಜಗಳವಾಡುತ್ತಿದ್ದಾಗ ಆ ಬಾಲಕಿಗೆ ಹತ್ತು ವರ್ಷ. ಆ ಜಗಳದಲ್ಲಿ ಒಬ್ಬರನ್ನು ಕೊಂದ ಅಪ್ಪ ಜೈಲು ಸೇರಿದ್ದರು.<br /> <br /> ಸನ್ನಡತೆಯ ಆಧಾರದ ಮೇಲೆ ಸೋಮವಾರ ಅವರು ಬಿಡುಗಡೆಯಾಗುವ ಹೊತ್ತಿಗೆ ಮಗಳು ಬಿ.ಕಾಂ. ಪದವಿ ಪೂರೈಸಿದ್ದಳು. ಕಾರಾಗೃಹದ ಹೊರಗೆ ಅಪ್ಪನ ಕಂಡು ಓಡಿ ಬಂದು ತಬ್ಬಿಕೊಂಡ ಆಕೆಯ ಕಣ್ಣುಗಳಿಂದ ನೀರು ಧಾರಾಕಾರವಾಗಿ ಸುರಿಯತೊಡಗಿತು. ಅಪ್ಪನು ಸೇರಿದಂತೆ ಅಲ್ಲಿದ್ದವರ ಕಣ್ಣಾಲಿಗಳೂ ತೇವಗೊಂಡವು.<br /> <br /> ಹಿರೇಕೆರೂರ ತಾಲ್ಲೂಕಿನ ದೊಡ್ಡಗುಬ್ಬಿಯ ರಾಮಪ್ಪ ಹಂಸಭಾವಿಗೆ ಮನೆಯ ಜಾಗಕ್ಕೆ ಸಂಬಂಧಿಸಿದಂತೆ ಪಕ್ಕದ ಮನೆಯವರೊಂದಿಗೆ ಆಗಾಗ್ಗೆ ಜಗಳವಾಗುತ್ತಿತ್ತು. ಅದು ವಿಕೋಪಕ್ಕೆ ತಿರುಗಿದಾಗ ಹಲವು ಬಾರಿ ಹೊಡೆದಾಟವೂ ಆಗಿತ್ತು. ಇಂತಹ ಒಂದು ಸಂದರ್ಭದಲ್ಲಿ ರಾಮಪ್ಪ, ಒಬ್ಬರನ್ನು ಹತ್ಯೆ ಮಾಡಿ ಜೈಲು ಸೇರಿದ್ದರು.<br /> <br /> ಆಗ ಮಗಳು ಅಕ್ಷತಾ ನಾಲ್ಕನೇ ತರಗತಿ ಓದುತ್ತಿದ್ದಳು. ಬಾಲ್ಯದಿಂದಲೂ ಪಿತೃ ವಾತ್ಸಲ್ಯದಿಂದ ವಂಚಿಳಾಗಿದ್ದ ಅವಳು ಅಪ್ಪನ ನಿರೀಕ್ಷೆಯಲ್ಲಿದ್ದಳು. ತಲೆಯಲ್ಲಿ ಬಿಳಿಕೂದಲಾಗಿ ಕೈಯಲ್ಲೊಂದು ಕವರ್ ಹಿಡಿದುಕೊಂಡು ಜೈಲಿನಿಂದ ಹೊರಬಂದ ರಾಮಪ್ಪ ಅವರನ್ನು ಕಂಡೊಡನೆ ಓಡಿ ಬಂದು ಬಿಗಿದಪ್ಪಿಕೊಂಡಳು.<br /> <br /> ಇದಕ್ಕೂ ಮೊದಲು ಮಾತನಾಡಿದ ಅಕ್ಷತಾ, ‘ಹುಬ್ಬಳ್ಳಿಯಲ್ಲಿ ಸಂದರ್ಶನಕ್ಕೆ ಹಾಜರಾಗಲು ದೊಡ್ಡಮ್ಮ ಸುವರ್ಣಾ ಅವರೊಂದಿಗೆ ಬಂದಿದ್ದೆ. ಜೈಲಿನಿಂದ ಇಂದು ಕೆಲವರನ್ನು ಬಿಡುಗಡೆ ಮಾಡುತ್ತಿದ್ದಾರೆ ಎಂಬ ಸುದ್ದಿ ತಿಳಿಯಿತು. ಹೀಗಾಗಿ ಇಲ್ಲಿಗೆ ಬಂದೆವು. ಇದು ನಿಜಕ್ಕೂ ನಮಗೆ ಅನಿರೀಕ್ಷಿತ ಸಂತಸ ತಂದಿದೆ.<br /> <br /> ಪೆರೋಲ್ ಮೇಲೆ ತಂದೆ ಮನೆಗೆ ಬರುತ್ತಿದ್ದರೂ, ಕೆಲ ದಿನಗಳು ಮಾತ್ರ ನಮ್ಮೊಂದಿಗೆ ಇರುತ್ತಿದ್ದರು. ಅಪ್ಪ ಇಲ್ಲದ ಇಷ್ಟು ವರ್ಷಗಳ ಕಾಲ ದೊಡ್ಡಪ್ಪ ಹಾಗೂ ದೊಡ್ಡಮ್ಮ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಈಗ ಮನೆಗೆ ತಂದೆ ಬರುತ್ತಿರುವುದು ಸಂತಸ ತಂದಿದೆ’ ಎಂದರು. ಈ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಸುವರ್ಣಾ ಅವರ ಕಣ್ಣುಗಳೂ ತೇವಗೊಂಡಿದ್ದವು.<br /> <br /> ಬಿಡುಗಡೆ ನಂತರ ಪ್ರತಿಕ್ರಿಯಿಸಿದ ರಾಮಪ್ಪ, ‘ಜೈಲಿನೊಳಗಿದ್ದಾಗ ನನಗೆ ಬದುಕು ಸಾಕಷ್ಟು ಪಾಠ ಕಲಿಸಿದೆ. ಜಗಳವಾಡುತ್ತಿದ್ದ ಸಂದರ್ಭದಲ್ಲಿ ನಾನೇ ಎರಡು ಏಟು ತಿಂದಿದ್ದರೆ ಜೈಲಿನಲ್ಲಿ 14 ವರ್ಷ ಬದುಕು ಸವೆಸುವ ಬದಲಿಗೆ ಕುಟುಂಬದೊಂದಿಗೆ ಕಳೆಯಬಹುದಿತ್ತು.<br /> <br /> ಈಗ ಪಾಠ ಕಲಿತಿರುವ ನಾನು, ಕೋಪದ ಕೈಗೆ ಬುದ್ಧಿ ಕೊಡಬೇಡಿ ಎಂದು ಇತರರಿಗೆ ಹೇಳುತ್ತೇನೆ. ಆ ಮೂಲಕ ನನ್ನಂತೆ ಇತರರೂ ಆಗಬಾರದು ಎನ್ನುವುದು ನನ್ನ ಕಾಳಜಿ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>