<p><strong>ಶಿವಮೊಗ್ಗ: </strong>ನಗರವನ್ನು ಮಾದರಿ ನಗರವಾಗಿ ಅಭಿವೃದ್ಧಿಪಡಿಸುವ ದಿಕ್ಕಿನಲ್ಲಿ ಪಕ್ಷಾತೀತವಾಗಿ ಎಲ್ಲರ ಸಲಹೆ-ಸಹಕಾರ ಪಡೆಯಲಾಗುವುದು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ) ಸೋಮವಾರ ವಿನೋಬನಗರದಲ್ಲಿ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣ ಕಟ್ಟಡ ,ಭಗತ್ಸಿಂಗ್ ವೃತ್ತದ ಸಿಗ್ನಲ್ ಲೈಟ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ನಗರ ಇನ್ನಷ್ಟು ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಬೇರೆ ಪಕ್ಷದವರ ಸಲಹೆಗಳನ್ನೂ ಪಡೆಯಲಾಗುವುದು. ಕಳೆದ 60 ವರ್ಷಗಳಲ್ಲಿ ಕಾಣದ ನಗರದ ಅಭಿವೃದ್ಧಿ ಕೇವಲ ನಾಲ್ಕು ವರ್ಷಗಳಲ್ಲಿ ಯಡಿಯೂರಪ್ಪ ಮಾಡಿದ್ದಾರೆ.<br /> <br /> ಪ್ರಸ್ತುತ ಮುಖ್ಯಮಂತ್ರಿ ಅವರೂ ನಗರದ ಅಭಿವೃದ್ಧಿಗೆ ಬೇಕಾದ ಅನುದಾನ ನೀಡಲು ಸಿದ್ಧರಿದ್ದಾರೆ. ಶಿವಮೊಗ್ಗ ಶೀಘ್ರದಲ್ಲೇ ನಗರಪಾಲಿಕೆಯಾಗಲಿದೆ. ರಾಜ್ಯ ಸರ್ಕಾರದಿಂದ ಪ್ರತಿ ವರ್ಷ ರೂ.100ಕೋಟಿ ಅನುದಾನ ಸಿಗಲಿದೆ ಎಂದು ಹೇಳಿದರು.<br /> <br /> ~ಸೂಡಾ~ ಅಧ್ಯಕ್ಷ ಎಸ್. ದತ್ತಾತ್ರಿ ಮಾತನಾಡಿ, ಪ್ರಸ್ತುತ ರೂ.1.70 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಟ್ಟಡಕ್ಕೆ ~ವೀರ ಸಾರ್ವಕರ್ ವಾಣಿಜ್ಯ ಸಂಕೀರ್ಣ~ ಎಂದು ನಾಮಕರಣ ಮಾಡಲಾಗಿದೆ. ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಬೆಂಗಳೂರು ಮಾದರಿಯಲ್ಲಿ ನೂತನ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುವುದು.<br /> <br /> ಗೋಪಿಶೆಟ್ಟಿ ಬಡಾವಣೆ ನಿರ್ಮಾಣ ಕಾರ್ಯ 15 ದಿವಸದಲ್ಲಿ ಮುಕ್ತಾಯಗೊಳ್ಳಲಿದೆ. ಮಲ್ಲಿಗೇನಹಳ್ಳಿಯಲ್ಲಿ ಎರಡನೇ ಹಂತದ ಕಾರ್ಯಕ್ರಮ ಶೀಘ್ರದಲ್ಲೇ ಆರಂಭಿಸಲಾಗುವುದು. ನಗರದಲ್ಲಿ ಹೊಸದಾಗಿ ಮೂರು ಸಾವಿರ ನಿವೇಶನ ಹಂಚಿಕೆ ಮಾಡಲು ~ಸೂಡಾ~ ಉದ್ದೇಶಿಸಿದೆ ಎಂದರು. <br /> <br /> ಸಮಾರಂಭದಲ್ಲಿ ಆಯನೂರು ಮಂಜುನಾಥ, ಕೆ.ಜಿ. ಕುಮಾರಸ್ವಾಮಿ, ಗಿರೀಶ್ ಪಟೇಲ್, ಶುಭಾ ಕೃಷ್ಣಮೂರ್ತಿ, ಎಸ್.ಎನ್. ಚನ್ನಬಸಪ್ಪ, ಎಸ್.ಎಸ್. ಜ್ಯೋತಿಪ್ರಕಾಶ್, ಎಂ.ವಿ. ವೇದಮೂರ್ತಿ, ಎಸ್. ಜ್ಞಾನೇಶ್ವರ್, ಸದಾಶಿವಪ್ಪ, ಬಿ.ಎನ್. ಗಿರೀಶ್, ಪಿ.ಜಿ. ರಮೇಶ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ: </strong>ನಗರವನ್ನು ಮಾದರಿ ನಗರವಾಗಿ ಅಭಿವೃದ್ಧಿಪಡಿಸುವ ದಿಕ್ಕಿನಲ್ಲಿ ಪಕ್ಷಾತೀತವಾಗಿ ಎಲ್ಲರ ಸಲಹೆ-ಸಹಕಾರ ಪಡೆಯಲಾಗುವುದು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ) ಸೋಮವಾರ ವಿನೋಬನಗರದಲ್ಲಿ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣ ಕಟ್ಟಡ ,ಭಗತ್ಸಿಂಗ್ ವೃತ್ತದ ಸಿಗ್ನಲ್ ಲೈಟ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ನಗರ ಇನ್ನಷ್ಟು ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಬೇರೆ ಪಕ್ಷದವರ ಸಲಹೆಗಳನ್ನೂ ಪಡೆಯಲಾಗುವುದು. ಕಳೆದ 60 ವರ್ಷಗಳಲ್ಲಿ ಕಾಣದ ನಗರದ ಅಭಿವೃದ್ಧಿ ಕೇವಲ ನಾಲ್ಕು ವರ್ಷಗಳಲ್ಲಿ ಯಡಿಯೂರಪ್ಪ ಮಾಡಿದ್ದಾರೆ.<br /> <br /> ಪ್ರಸ್ತುತ ಮುಖ್ಯಮಂತ್ರಿ ಅವರೂ ನಗರದ ಅಭಿವೃದ್ಧಿಗೆ ಬೇಕಾದ ಅನುದಾನ ನೀಡಲು ಸಿದ್ಧರಿದ್ದಾರೆ. ಶಿವಮೊಗ್ಗ ಶೀಘ್ರದಲ್ಲೇ ನಗರಪಾಲಿಕೆಯಾಗಲಿದೆ. ರಾಜ್ಯ ಸರ್ಕಾರದಿಂದ ಪ್ರತಿ ವರ್ಷ ರೂ.100ಕೋಟಿ ಅನುದಾನ ಸಿಗಲಿದೆ ಎಂದು ಹೇಳಿದರು.<br /> <br /> ~ಸೂಡಾ~ ಅಧ್ಯಕ್ಷ ಎಸ್. ದತ್ತಾತ್ರಿ ಮಾತನಾಡಿ, ಪ್ರಸ್ತುತ ರೂ.1.70 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಟ್ಟಡಕ್ಕೆ ~ವೀರ ಸಾರ್ವಕರ್ ವಾಣಿಜ್ಯ ಸಂಕೀರ್ಣ~ ಎಂದು ನಾಮಕರಣ ಮಾಡಲಾಗಿದೆ. ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಬೆಂಗಳೂರು ಮಾದರಿಯಲ್ಲಿ ನೂತನ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುವುದು.<br /> <br /> ಗೋಪಿಶೆಟ್ಟಿ ಬಡಾವಣೆ ನಿರ್ಮಾಣ ಕಾರ್ಯ 15 ದಿವಸದಲ್ಲಿ ಮುಕ್ತಾಯಗೊಳ್ಳಲಿದೆ. ಮಲ್ಲಿಗೇನಹಳ್ಳಿಯಲ್ಲಿ ಎರಡನೇ ಹಂತದ ಕಾರ್ಯಕ್ರಮ ಶೀಘ್ರದಲ್ಲೇ ಆರಂಭಿಸಲಾಗುವುದು. ನಗರದಲ್ಲಿ ಹೊಸದಾಗಿ ಮೂರು ಸಾವಿರ ನಿವೇಶನ ಹಂಚಿಕೆ ಮಾಡಲು ~ಸೂಡಾ~ ಉದ್ದೇಶಿಸಿದೆ ಎಂದರು. <br /> <br /> ಸಮಾರಂಭದಲ್ಲಿ ಆಯನೂರು ಮಂಜುನಾಥ, ಕೆ.ಜಿ. ಕುಮಾರಸ್ವಾಮಿ, ಗಿರೀಶ್ ಪಟೇಲ್, ಶುಭಾ ಕೃಷ್ಣಮೂರ್ತಿ, ಎಸ್.ಎನ್. ಚನ್ನಬಸಪ್ಪ, ಎಸ್.ಎಸ್. ಜ್ಯೋತಿಪ್ರಕಾಶ್, ಎಂ.ವಿ. ವೇದಮೂರ್ತಿ, ಎಸ್. ಜ್ಞಾನೇಶ್ವರ್, ಸದಾಶಿವಪ್ಪ, ಬಿ.ಎನ್. ಗಿರೀಶ್, ಪಿ.ಜಿ. ರಮೇಶ್ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>