<p><strong>ನಾಯಕನಹಟ್ಟಿ:</strong> ತಾಲ್ಲೂಕಿನಲ್ಲಿ ವಿಜ್ಞಾನ ಸಂಸ್ಥೆಗಳಿಗೆ ಪರಭಾರೆ ಮಾಡಿರುವ ಅಮೃತ್ಮಹಲ್ ಕಾವಲ್ ಜಮೀನನ್ನು ಉಳಿಸುವ ಸಲುವಾಗಿ ಜುಲೈ 25 ರಂದು ಜಿಲ್ಲಾಧಿಕಾರಿ ಕಚೇರಿ ಬಳಿ ನಡೆಸುವ ಪ್ರತಿಭಟನೆಯಲ್ಲಿ ಎಲ್ಲ ರೈತರು ಪಾಲ್ಗೊಳ್ಳಬೇಕು ಎಂದು ಮುರುಘಾ ರಾಜೇಂದ್ರ ಒಡೆಯರ್ ಕರೆ ನೀಡಿದರು.<br /> <br /> ಸಮೀಪದ ನೇರಲಗುಂಟೆಯಲ್ಲಿ ಶುಕ್ರವಾರ ಅಮೃತ್ಮಹಲ್ ಕಾವಲ್ ಉಳಿವಿಗಾಗಿ ಜುಲೈ 25 ರಂದು ನಡೆಸುವ ಪ್ರತಿಭಟನೆಯ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.<br /> <br /> ಚಳ್ಳಕೆರೆ ತ್ಲ್ಲಾಲೂಕಿನ ದೊಡ್ಡ ಉಳ್ಳಾರ್ತಿ, ಕುದಾಪುರ, ಅಮೃತ್ಮಹಲ್ ಕಾವಲು ರೈತರ ಜೀವನಾಡಿಯಾಗಿದೆ. ಈ ಪ್ರದೇಶದಲ್ಲಿ ರೈತರು ಕುರಿ, ದನ ಮೇಯಿಸಲು ಅನುಕೂಲವಾಗುತ್ತಿತ್ತು. ರೈತರ ಅಭಿಪ್ರಾಯ ಪಡೆಯದೇ, ಈ ಜಮೀನನ್ನು ಡಿಆರ್ಡಿಒ, ಐಐಎಸ್ಸಿ ಸಂಸ್ಥೆಗಳಿಗೆ ಪರಭಾರೆ ಮಾಡಲಾಗಿದೆ. ಆದ್ದರಿಂದ ಈ ಕಾವಲನ್ನು ರೈತರಿಗೆ ಬಿಟ್ಟು ಕೊಡಬೇಕು.</p>.<p>ಈಗಾಗಲೇ ಕಾಂಪೌಡ್ ಅನ್ನು ನಿರ್ಮಿಸಿರುವುದನ್ನು ತೆರವುಗೊಳಿಸಿ ರೈತರಿಗೆ ಬಿಟ್ಟು ಕೊಡಬೇಕು. ಈ ವಿಚಾರವಾಗಿ ಜುಲೈ 25 ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದರು.<br /> <br /> ಮುಖಂಡ ಕರಿಯಣ್ಣ ಮಾತನಾಡಿ, ವರವು, ದೊಡ್ಡ ಉಳ್ಳಾರ್ತಿ ಪ್ರದೇಶದ ವ್ಯಾಪ್ತಿಯ ಸುಮಾರು 80 ಹಳ್ಳಿಗಳಿಗೆ ಭೇಟಿ ನೀಡಿ ರೈತರನ್ನು ಜಾಗೃತಿ ಗೊಳಿಸಲಾಗುವುದು. ಪ್ರತಿಭಟನೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಯಣ್ಣ, ಮುಖಂಡರುಗಳಾದ ಶಾಂತಮೂರ್ತಿ, ಮಹಾಲಿಂಗಪ್ಪ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಾಯಕನಹಟ್ಟಿ:</strong> ತಾಲ್ಲೂಕಿನಲ್ಲಿ ವಿಜ್ಞಾನ ಸಂಸ್ಥೆಗಳಿಗೆ ಪರಭಾರೆ ಮಾಡಿರುವ ಅಮೃತ್ಮಹಲ್ ಕಾವಲ್ ಜಮೀನನ್ನು ಉಳಿಸುವ ಸಲುವಾಗಿ ಜುಲೈ 25 ರಂದು ಜಿಲ್ಲಾಧಿಕಾರಿ ಕಚೇರಿ ಬಳಿ ನಡೆಸುವ ಪ್ರತಿಭಟನೆಯಲ್ಲಿ ಎಲ್ಲ ರೈತರು ಪಾಲ್ಗೊಳ್ಳಬೇಕು ಎಂದು ಮುರುಘಾ ರಾಜೇಂದ್ರ ಒಡೆಯರ್ ಕರೆ ನೀಡಿದರು.<br /> <br /> ಸಮೀಪದ ನೇರಲಗುಂಟೆಯಲ್ಲಿ ಶುಕ್ರವಾರ ಅಮೃತ್ಮಹಲ್ ಕಾವಲ್ ಉಳಿವಿಗಾಗಿ ಜುಲೈ 25 ರಂದು ನಡೆಸುವ ಪ್ರತಿಭಟನೆಯ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.<br /> <br /> ಚಳ್ಳಕೆರೆ ತ್ಲ್ಲಾಲೂಕಿನ ದೊಡ್ಡ ಉಳ್ಳಾರ್ತಿ, ಕುದಾಪುರ, ಅಮೃತ್ಮಹಲ್ ಕಾವಲು ರೈತರ ಜೀವನಾಡಿಯಾಗಿದೆ. ಈ ಪ್ರದೇಶದಲ್ಲಿ ರೈತರು ಕುರಿ, ದನ ಮೇಯಿಸಲು ಅನುಕೂಲವಾಗುತ್ತಿತ್ತು. ರೈತರ ಅಭಿಪ್ರಾಯ ಪಡೆಯದೇ, ಈ ಜಮೀನನ್ನು ಡಿಆರ್ಡಿಒ, ಐಐಎಸ್ಸಿ ಸಂಸ್ಥೆಗಳಿಗೆ ಪರಭಾರೆ ಮಾಡಲಾಗಿದೆ. ಆದ್ದರಿಂದ ಈ ಕಾವಲನ್ನು ರೈತರಿಗೆ ಬಿಟ್ಟು ಕೊಡಬೇಕು.</p>.<p>ಈಗಾಗಲೇ ಕಾಂಪೌಡ್ ಅನ್ನು ನಿರ್ಮಿಸಿರುವುದನ್ನು ತೆರವುಗೊಳಿಸಿ ರೈತರಿಗೆ ಬಿಟ್ಟು ಕೊಡಬೇಕು. ಈ ವಿಚಾರವಾಗಿ ಜುಲೈ 25 ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದರು.<br /> <br /> ಮುಖಂಡ ಕರಿಯಣ್ಣ ಮಾತನಾಡಿ, ವರವು, ದೊಡ್ಡ ಉಳ್ಳಾರ್ತಿ ಪ್ರದೇಶದ ವ್ಯಾಪ್ತಿಯ ಸುಮಾರು 80 ಹಳ್ಳಿಗಳಿಗೆ ಭೇಟಿ ನೀಡಿ ರೈತರನ್ನು ಜಾಗೃತಿ ಗೊಳಿಸಲಾಗುವುದು. ಪ್ರತಿಭಟನೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಯಣ್ಣ, ಮುಖಂಡರುಗಳಾದ ಶಾಂತಮೂರ್ತಿ, ಮಹಾಲಿಂಗಪ್ಪ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>